20.3 C
Sidlaghatta
Friday, August 1, 2025

ಹಾಪ್ಕಾಮ್ಸ್ ಅಧ್ಯಕ್ಷರಾಗಿ ಮುತ್ತೂರು ಚಂದ್ರೇಗೌಡ

- Advertisement -
- Advertisement -

ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ(ಹಾಪ್ಕಾಮ್ಸ್) ಅಧ್ಯಕ್ಷರಾಗಿ ಮುತ್ತೂರು ಗ್ರಾಮದ ಎ.ಎಸ್.ಚಂದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಶ್ರೀನಿವಾಸ್ ಅವಧಿ ಮುಗಿದಿದ್ದು ಎ.ಎಸ್.ಚಂದ್ರೇಗೌಡ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹತ್ತು ವರ್ಷಗಳಿಂದ ಹಾಪ್ಕಾಮ್ಸ್ ನಿರ್ದೇಶಕರಾಗಿದ್ದ ಚಂದ್ರೇಗೌಡ ಅವರು ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯವ್ಯಾಪ್ತಿಯ ಹಾಪ್ಕಾಮ್ಸ್ಗೆ ಶಿಡ್ಲಘಟ್ಟ ತಾಲ್ಲೂಕಿನವರಾದ ಚಂದ್ರೇಗೌಡ ಅಧ್ಯಕ್ಷರಾದುದಕ್ಕೆ ಹಲವು ಮಂದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎ.ಎಸ್.ಚಂದ್ರೇಗೌಡ ಅವರು,‘ರೈತರಿಗೆ ಅನುಕೂಲಕರ ವಿವಿಧ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಗುವುದು. ಸಂಸ್ಕರಣಾ ಘಟಕಗಳನ್ನು ಮಾಡುವ ಮೂಲಕ ರೈತ ಉತ್ಪನ್ನಗಳ ಬೆಲೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!