ಕ್ರಿಮಿ ನಾಶಕ ಸಿಂಪಡಣೆ ಆದ ಹಿಪ್ಪುನೇರಳೆ ಸೊಪ್ಪು ಸೇವಿಸಿದ ರೇಷ್ಮೆ ಹುಳುಗಳು ನಾಶ ಆಗಿದ್ದು ರೈತನಿಗೆ ಸಾವಿರಾರು ರೂಪಾಯಿ ನಷ್ಟ ಆಗಿದೆ.
ತಾಲ್ಲೂಕಿನ ವೀರಾಪುರ ಗ್ರಾಮದ ರೈತ ಅಯ್ಯಪ್ಪಸ್ವಾಮಿ ಅವರ ೩೦೦ ಮೊಟ್ಟೆಯಷ್ಟು ರೇಷ್ಮೆ ಹುಳುಗಳು ಕ್ರಿಮಿ ನಾಶಕ ಸಿಂಪಡಣೆ ಆದ ಹಿಪ್ಪು ನೇರಳೆ ಸೊಪ್ಪು ಸೇವಿಸಿ ಸಾವನ್ನಪ್ಪಿವೆ.
ಪಕ್ಕದ ತಲದುಮ್ಮನಹಳ್ಳಿಯಲ್ಲಿ ರಮೇಶ್ಬಾಬು ಎಂಬುವವರಿಗೆ ಸೇರಿದ ಹಿಪ್ಪುನೇರಳೆ ತೋಟದಲ್ಲಿ ಅಯ್ಯಪ್ಪಸ್ವಾಮಿ ಸುಮಾರು ೮೦ ಮೂಟೆಯಷ್ಟು ಸೊಪ್ಪನ್ನು ಖರೀಸಿದ್ದರು.
೪ನೇ ಜ್ವರ ಎದ್ದು ೪ನೇ ದಿನದಲ್ಲಿದ್ದ ಹುಳುಗಳಿಗೆ ಎಂದಿನಂತೆ ಶುಕ್ರವಾರ ರಾತ್ರಿ ಸೊಪ್ಪು ಹಾಕಿ ಮಲಗಿದ್ದು ಬೆಳಗ್ಗೆ ಮತ್ತೆ ಸೊಪ್ಪು ಹಾಕಲು ಎದ್ದು ನೋಡಿದಾಗ ಹುಳುಗಳು ಬಾಯಲ್ಲಿ ನೀರು ವಾಂತಿ ಮಾಡಿಕೊಂಡು ಸತ್ತಿದ್ದು ಕಂಡಿದೆ.
ಕೂಡಲೆ ಬೇರೊಂದು ತೋಟದಲ್ಲಿ ಸೊಪ್ಪನ್ನು ತಂದು ಹುಳುಗಳಿಗೆ ಹಾಕಿದ್ದಾರೆ. ಇದರಿಂದ ಕೆಲವಷ್ಟು ಹುಳುಗಳು ಚೇತರಿಸಿಕೊಂಡಿವೆ. ಬಹಳಷ್ಟು ಹುಳುಗಳು ಸತ್ತಿವೆ. ಇನ್ನು ನಾಲ್ಕೈದು ದಿನ ಕಳೆದಿದ್ದರೆ ಹುಳುಗಳು ಹಣ್ಣಾಗಿ ಗೂಡು ಕಟ್ಟಿ ಒಂದಷ್ಟು ಹಣ ಸಿಗುತ್ತಿತ್ತು.
ಆದರೆ ಯಾರೋ ದುಷ್ಕರ್ಮಿಗಳು ಹಿಪ್ಪುನೇರಳೆ ಸೊಪ್ಪು ತೋಟಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರಿಂದ ಈ ಕಡೆ ಹಿಪ್ಪುನೇರಳೆ ಸೊಪ್ಪು ನಷ್ಟ, ಮತ್ತೊಂದು ಕಡೆ ರೇಷ್ಮೆ ಹುಳುಗಳೂ ನಾಶ ಆಗಿ ನಷ್ಟ ರೈತನ ಮೇಲೆ ಬಿದ್ದಿದೆ.
ಇದುವರೆಗೂ ೬೦ ಮೂಟೆಯಷ್ಟು ಹಿಪ್ಪುನೇರಳೆ ಸೊಪ್ಪನ್ನು ತಿಂದಿದ್ದು, ಸೊಪ್ಪು, ಮೊಟ್ಟೆ, ಕೂಲಿ ಎಲ್ಲವೂ ಸೇರಿ ೩೫-೪೦ ಸಾವಿರ ರೂಪಾಯಿಯಷ್ಟು ನಷ್ಟ ಆಗಿದೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







