ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

- Advertisement -
- Advertisement -

Sidlaghatta : ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕ ರಾಜ್ಯ ಸಾಕಷ್ಟು ಕೊಡುಗೆ ನೀಡಿದೆ. ಕನ್ನಡಿಗರು ಶೌರ್ಯ ಮತ್ತು ಧೈರ್ಯಕ್ಕೆ ಬಹಳ ಹೆಸರುವಾಸಿಯಾಗಿದ್ದಾರೆ. ತಮ್ಮ ಜೀವನಕ್ಕಿಂತ ಸ್ವಾತಂತ್ರ್ಯ ಹೆಚ್ಚು ಮೌಲ್ಯಯುತವಾಗಿದೆ ಎಂದು ಅವರು ನಂಬಿದ್ದರು ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ನಗರದ ಎ.ಆರ್.ಎಂ. ಪಿಯು ಕಾಲೇಜಿನಲ್ಲಿ “ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರ ಮತ್ತು ಪ್ರಮುಖ ಘಟನೆಗಳು” ಎಂಬ ವಿಷಯದ ಬಗ್ಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತಾಡಿದರು.

ಕರ್ನಾಟಕದ ಜನರು ಬ್ರಿಟಿಷರ ನೀತಿಗಳನ್ನು ವಿರೋಧಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು. ಧೋಂಡಿಯಾ ವಾಘಾ (1800), ಕಿತ್ತೂರು ದಂಗೆ (1824), ಸಂಗೊಳ್ಳಿ ರಾಯಣ್ಣನ ದಂಗೆ (1830), ಬಿದನೂರೆ ದಂಗೆ (1830), ರೆವೋಲ್ಟಿನ್ ಕೂರ್ಗ್ (1834) ಹಲಗಲಿಯ ಬಂಡಾಯದ ಬೇಡರು (1857) ಇತ್ಯಾದಿ ಹೋರಾಟಗಳು ಪ್ರಮುಖವಾದವು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (1885) ಸ್ಥಾಪನೆಯೊಂದಿಗೆ ಗಂಭೀರ ಹೋರಾಟ ಪ್ರಾರಂಭವಾಯಿತು.

ಗಾಂಧೀಜಿಯವರಿಂದ ಕನ್ನಡಿಗರು ಹೆಚ್ಚು ಪ್ರಭಾವಿತರಾಗಿದ್ದರು. ಕೃಷ್ಣರಾವ್, ಹನುಮಂತರಾವ್ ಕೌಜಲಗಿ, ಸದಾಶಿವ ರಾವ್, ಎನ್.ಎಸ್.ಹರ್ಡೀಕರ್, ಆರ್.ಆರ್.ದಿವಾಕರ್ ಮೊದಲಾದ ನಾಯಕರು ಕರ್ನಾಟಕದಲ್ಲಿ ಅಸಹಕಾರ ಚಳವಳಿಯ ನೇತೃತ್ವ ವಹಿಸಿದ್ದರು. ನಂತರ 1938ರಲ್ಲಿ ಶಿವಾಪುರ ಧ್ವಜ ಸತ್ಯಾಗ್ರಹ, ವಿದುರಾಶ್ವಥದಲ್ಲಿ ನಡೆದ ಗೋಲಿಬಾರ್ ದುರಂತ ಪ್ರಮುಖವಾದುದು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆ ಅಪಾರ ಎಂದು ವಿವರಿಸಿದರು.

ಪ್ರಾಂಶುಪಾಲ ಕೆ.ಮೂರ್ತಿ ಸಾಮ್ರಾಟ್ ಮಾತನಾಡಿ, ಇಂದಿನ ಯುವಕರ ಪ್ರೇರಣೆ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳಲ್ಲಿ ಜೀವಂತವಾಗಿದೆ. ಅವರ ಜೀವನದ ಹೋರಾಟಗಳು ಜೀವನದಲ್ಲಿ ವ್ಯತ್ಯಾಸವನ್ನು ತೋರಿಸುತ್ತವೆ ಮತ್ತು ಅವರು ನಂಬಿದ ಮತ್ತು ಹೋರಾಡಿದ ಮೌಲ್ಯಗಳನ್ನು ಗೌರವಿಸಬೇಕು ಎಂದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರ ಮತ್ತು ಪ್ರಮುಖ ಘಟನೆಗಳು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.

ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿ.ಪೂ.ಅಧ್ಯಕ್ಷ ಎ.ಎಂ.ತ್ಯಾಗರಾಜ್ , ಕಸಾಪ ಪದಾಧಿಕಾರಿ ಭಕ್ತರಹಳ್ಳಿ ನಾಗೇಶ್ , ಪ್ರಾಂಶುಪಾಲ ಕೆ.ಮೂರ್ತಿ ಸಾಮ್ರಾಟ್, ಕಲಾ ವಿಭಾಗದ ಮುಖ್ಯಸ್ಥ ದೇವರಾಜ್ ಅರಸ್, ಕನ್ನಡ ಉಪನ್ಯಾಸಕ ಶ್ರೀಧರ್, ಉಪನ್ಯಾಸಕ ನವನೀತ್ ಮತ್ತು ‌ವಿದ್ಯಾರ್ಥಿಗಳು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!