30.2 C
Sidlaghatta
Saturday, April 20, 2024

ಪರಿಹಾರ ವಿತರಣೆ ಮತ್ತು ಕೆರೆಗಳ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಹಾಗೂ ಚಿಕ್ಕಬಂದರಘಟ್ಟ ಕೆರೆ ಕಟ್ಟೆ ಒಡೆದು ಪಲವತ್ತಾದ ಭೂಮಿ ಕೊಚ್ಚಿ ಹೋಗಿರುವ ಘಟನೆ ನಡೆದು ನಾಲ್ಕೈದು ತಿಂಗಳು ಕಳೆದರೂ  ರೈತರಿಗೆ ಈವರೆಗೂ ಪರಿಹಾರ ವಿತರಣೆಯಾಗಿಲ್ಲ. ಕೂಡಲೇ ಈ ಭಾಗದ ರೈತರಿಗೆ ಪರಿಹಾರ ವಿತರಿಸುವುದು ಸೇರಿದಂತೆ ಕೆರೆಗಳ ಪುನರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಯುವಶಕ್ತಿ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ ಒತ್ತಾಯಿಸಿದರು.

 ಈ ವಿಷಯವಾಗಿ ಅಗ್ರಹಾರ ಕೆರೆ ಹಾಗೂ ಬಂದರಘಟ್ಟ ಕೆರೆಗಳ ಅಚ್ಚುಕಟ್ಟು ರೈತರೊಂದಿಗೆ ಶನಿವಾರ ಜಿಲ್ಲಾಧಿಕಾರಿ ಆರ್.ಲತಾ ರವರನ್ನು ಬೇಟಿಯಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಶೀಘ್ರ ಪರಿಹಾರ ನೀಡಬೇಕೆಂದು ಮರು ಮನವಿ ಸಲ್ಲಿಸಿ ಅವರು ಮಾತನಾಡಿದರು.

 ಈ ಭಾಗದ ಎಲ್ಲಾ ರೈತರ ಜಮೀನಿನ ವಿವರಗಳನ್ನು ಕಂದಾಯ ಇಲಾಖೆ ಸಂಗ್ರಹಿಸಿ ನಾಲ್ಕೈದು ತಿಂಗಳು ಕಳೆದರೂ ಇದುವರೆಗೂ ಯಾವುದೇ ಪರಿಹಾರವಾಗಲಿ ಅಥವಾ ಅದರ ಪ್ರಗತಿಯ ವಿವರಗಳಾಗಲಿ ನೀಡಿರುವುದಿಲ್ಲ. ಕೂಡಲೇ ರೈತರಿಗೆ ಸಿಗಬೇಕಾದ ಪರಿಹಾರ ವಿತರಿಸುವುದು ಸೇರಿದಂತೆ ಈ ಕೆರೆಗಳು ನೀರಿಲ್ಲದೆ ಒಣಗಿರುವ ಕಾರಣ ಕೆರೆ ಅಂಗಳದ ಹೂಳನ್ನು ತೆಗೆಯಬಹುದಾದ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ವಿನಂತಿಸಲಾಯಿತು.

 ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಆರ್.ಲತಾ ರವರು ನಷ್ಟದ ಧಾಖಲೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ನೀಡುವ ಭರವಸೆ ನೀಡಿ ಈ ಕೆರೆಗಳ ಪುನರ್ನಿರ್ಮಾಣದ ಡಿಪಿಆರ್ ಆಗಿ ಮುಂದಿನ ಹಂತದ ಕಾರ್ಯಗಳು ಪ್ರಗತಿಯಲ್ಲಿವೆಯೆಂದು ತಿಳಿಸಿದರು.

 ರೈತರ ನಿಯೋಗದಲ್ಲಿ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ವಿಜಯ ಬಾವರೆಡ್ಡಿ, ರಾಯಪ್ಪನಹಳ್ಳಿ ನಾಗರಾಜರೆಡ್ಡಿ, ಯರ್ರಹಳ್ಳಿ ಮರಿಯಪ್ಪ, ಬಂದರಘಟ್ಟ ನರಸಿಂಹರೆಡ್ಡಿ, ಚೊಕ್ಕನಹಳ್ಳಿ ನಾರಾಯಣಸ್ವಾಮಿ, ಕುದುಪಕುಂಟೆ ನರಸಿಂಹರೆಡ್ಡಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!