Home News ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ, ಪೊಲೀಸ್ ಪೇದೆ ಮೇಲೆ ಕೊಲೆ ಆರೋಪ

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ, ಪೊಲೀಸ್ ಪೇದೆ ಮೇಲೆ ಕೊಲೆ ಆರೋಪ

0

ಶಿಡ್ಲಘಟ್ಟ ನಗರದ ಮಾರಮ್ಮ ದೇವಾಲಯದ ಹಿಂಭಾಗದ ಎಂಆರ್ಎಸ್ ಸರ್ಕಲ್‌ನ ವಾಸಿ ರಾಜೇಶ್ವರಿ(31) ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿಯೆ ಮೃತಪಟ್ಟಿದ್ದಾಳೆ.

ಚಿಕ್ಕಬಳ್ಳಾಪುರ ನಗರದಲ್ಲಿ ಸಂಚಾರಿ ಪೊಲೀಸ್ ಅನಂತ್‌ಕುಮಾರ್ ಅವರೆ ಕೊಲೆ ಮಾಡಿರುವುದಾಗಿ ಮೃತ ರಾಜೇಶ್ವರಿಯ ಪತಿ ವೆಂಕಟೇಶ್ ದೂರು ನೀಡಿದ್ದಾನೆ.

ಶಿಡ್ಲಘಟ್ಟದಲ್ಲಿ ಪೊಲೀಸ್ ಪೇದೆಯಾಗಿ ಕಾರ‍್ಯನಿರ್ವಹಿಸುತ್ತಿದ್ದಾಗ ಅನಂತ್ ಕುಮಾರ್, ರಾಜೇಶ್ವರಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಬೆದರಿಕೆಹಾಕಿ ಹಣದ ಆಮಿಷ ಒಡ್ಡುತ್ತಿದ್ದ. ಇದರಿಂದ ನಾನು ನನ್ನ ನನ್ನ ಹೆಂಡತಿಯನ್ನು ಬಿಟ್ಟು ಮಕ್ಕಳೊಂದಿಗೆ ಮಾರುತಿ ನಗರದಲ್ಲಿ ವಾಸ ಮಾಡತೊಡಗಿದೆ.

ಈ ಮದ್ಯೆ ಅನಂತ್ ಕುಮಾರ್ ಹಾಗೂ ರಾಜೇಶ್ವರಿ ನಡುವೆ ಗಲಾಟೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಅನಂತ್ ಕುಮಾರ್, ನನ್ನ ಹೆಂಡತಿ ರಾಜೇಶ್ವರಿಯನ್ನು ನೇಣು ಬಿಗಿದು ಕೊಲೆ ಮಾಡಿದ್ದಾನೆ. ಇಬ್ಬರ ನಡುವೆ ಗಲಾಟೆ ನಡೆಯುತ್ತಿದ್ದಾಗ ನನ್ನ ಹೆಂಡತಿಯ ತಮ್ಮ ಸುರೇಶ್ ಅವರ ಮನೆ ಬಳಿ ಹೋಗಿದ್ದಾಗ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದನ್ನು ಕಣ್ಣಾರೆ ಕಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾನೆ. ಶಿಡ್ಲಘಟ್ಟ ನಗರ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version