Home News ರಾಜೀವ್ ಗೌಡರನ್ನು ಕ್ಷೇತ್ರಕ್ಕೆ ಯಾಕಾದರೂ ತಂದೆವೋ ಎನಿಸುತ್ತಿದೆ: ಶಶಿಧರ್ ಮುನಿಯಪ್ಪ

ರಾಜೀವ್ ಗೌಡರನ್ನು ಕ್ಷೇತ್ರಕ್ಕೆ ಯಾಕಾದರೂ ತಂದೆವೋ ಎನಿಸುತ್ತಿದೆ: ಶಶಿಧರ್ ಮುನಿಯಪ್ಪ

0
Shashidhar Muniyappa addressing media at V. Muniyappa's residence in Handiganala

Sidlaghatta : “ಪೌರಾಯುಕ್ತರ ವಿರುದ್ಧ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ನಡೆದುಕೊಂಡಿರುವ ರೀತಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮುಜುಗುರ ತಂದಿದೆ. ಇಂತಹ ವ್ಯಕ್ತಿಯನ್ನು ಕ್ಷೇತ್ರಕ್ಕೆ ಪರಿಚಯಿಸಿ ತಪ್ಪು ಮಾಡಿದೆವು ಎಂದು ನನಗೂ ಮತ್ತು ನನ್ನ ತಂದೆಯವರಿಗೂ ಈಗ ಅನಿಸುತ್ತಿದೆ,” ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮುನಿಯಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಂಡಿಗನಾಳದ ಮಾಜಿ ಸಚಿವ ವಿ. ಮುನಿಯಪ್ಪ ಅವರ ನಿವಾಸದಲ್ಲಿ ಗುರುವಾರ ನಡೆದ ಚೀಮುಲ್ ಚುನಾವಣಾ ಪೂರ್ವಭಾವಿ ಸಭೆಯ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಸಂಸ್ಕಾರವಿಲ್ಲದ ರಾಜಕಾರಣ:

“ನನ್ನ ತಂದೆ ವಿ. ಮುನಿಯಪ್ಪ ಅವರು 45 ವರ್ಷಗಳ ಕಾಲ ಸುದೀರ್ಘ ರಾಜಕಾರಣ ಮಾಡಿದ್ದಾರೆ. ಅವರು ಎಂದಿಗೂ ಅಧಿಕಾರಿಗಳನ್ನು ಅಥವಾ ಜನಸಾಮಾನ್ಯರನ್ನು ಅಗೌರವದಿಂದ ಕಂಡವರಲ್ಲ. ನಮಗೂ ಅದನ್ನೇ ಕಲಿಸಿದ್ದರು. ಆದರೆ ರಾಜೀವ್ ಗೌಡ ಅವರು ಅಧಿಕಾರಿಗಳನ್ನು ನಿಂದಿಸಿರುವುದು ಮಾತ್ರವಲ್ಲದೆ, ಶಾಸಕರ ಬಗ್ಗೆಯೂ ಕೀಳುಮಟ್ಟದ ಪದಬಳಕೆ ಮಾಡಿ ಕ್ಷೇತ್ರದ ಶಾಂತಿಯುತ ವಾತಾವರಣವನ್ನು ಹಾಳು ಮಾಡಿದ್ದಾರೆ,” ಎಂದು ಕಿಡಿಕಾರಿದರು.

ಹೈಕಮಾಂಡ್ ಗಮನಕ್ಕೆ ದೂರು:

ಈ ಆಡಿಯೋ ಕೇಳಿ ಮಾಜಿ ಸಚಿವ ವಿ. ಮುನಿಯಪ್ಪ ಅವರು ತೀವ್ರವಾಗಿ ನೊಂದಿದ್ದಾರೆ ಎಂದು ತಿಳಿಸಿದ ಶಶಿಧರ್, “ಜನರ ಮುಂದೆ ನಾವು ತಲೆತಗ್ಗಿಸುವಂತಾಗಿದೆ. ಕಾರ್ಯಕರ್ತರು ಕೂಡ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ರಾಜೀವ್ ಗೌಡ ಅವರ ಕಾರ್ಯವೈಖರಿ ತಿದ್ದುಕೊಳ್ಳುವಂತೆ ಹಲವು ಬಾರಿ ಹೇಳಿದರೂ ಅವರು ಕೇಳಲಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷವು ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version