Home News ಅ.02 ರಂದು ಶಾಶ್ವತ ನೀರಾವರಿ ಸಮಾವೇಶ

ಅ.02 ರಂದು ಶಾಶ್ವತ ನೀರಾವರಿ ಸಮಾವೇಶ

0
Shashvata Neeravari Samavesha on oct 2

Sidlaghatta : ಶಿಡ್ಲಘಟ್ಟ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಸ್ದಾನದಲ್ಲಿ ಶಾಶ್ವತ ನೀರಾವರಿಗಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅ.02 ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯುವ ಬಯಲು ಸೀಮೆ ಜಿಲ್ಲೆಗಳ ಸಮಾವೇಶದ ಅಂಗವಾಗಿ ಪೂರ್ವಬಾವಿ ಸಭೆ ನಡೆಯಿತು.

ಶಾಶ್ವತ ಹೋರಾಟ ಸಮಿತಿಯ ಅಧ್ಯಕ್ಷರಾದ ಆಂಜನೇಯರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಗಳಿಂದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಗೋಪಾಲ ಗೌಡ ಅವರ ನೇತೃತ್ವದಲ್ಲಿ ಮತ್ತೆ ಶಾಶ್ವತ ಹೋರಾಟ ಮುನ್ನಲೆಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಶಾಶ್ವತವಾಗಿ ಕೃಷ್ಣಾ ನದಿ ನೀರು ತರಬೇಕೆಂದು ಹಾಗೂ ಮುಂದಿನ ಪೀಳಿಗೆಗೆ ನೀರಿನ ಅವಶ್ಯಕತೆಯ ಮಹತ್ವ ತಿಳಿಸುವ ಸಲುವಾಗಿ ವಿಜಯ ದಶಮಿ ಹಾಗೂ ಗಾಂಧಿ ಜಯಂತಿಯಂದು ಚಿಕ್ಕಬಳ್ಳಾಪುರ ನಗರ ಕೆಇಬಿ ಮುಂಭಾಗದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಈ ಸಭೆಗೆ ಎಲ್ಲಾ ಜಿಲ್ಲೆ ಮತ್ತು ಎಲ್ಲಾ ತಾಲ್ಲೂಕುಗಳ ವಿವಿಧ ಸಂಘಗಳ ಪದಾಧಿಕಾರಿಗಳು ಭಾಗವಹಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್, ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ರಾಜ್ಯ ಉಪಾಧ್ಯಕ್ಷರಾದ ಮುನಿಕೆಂಪಣ್ಣ, ನಲ್ಲೇನಹಳ್ಳಿ ಸುಬ್ರಮಣಿ, ಡಿ.ವಿ. ನಾರಾಯಣಸ್ವಾಮಿ, ಬಸವಾಪಟ್ಟಣ ನಾಗರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಎಚ್. ಎನ್. ಕದೀರೇಗೌಡ, ಈ ಧರೆ ಪ್ರಕಾಶ್, ಕನ್ನಡ ಜನಪರ ವೇದಿಕೆ ಅಧ್ಯಕ್ಷ ರಾಮಾಂಜನೇಯ, ಸುರೇಶ್ ಭಗತ್, ಅಹಿಂದ ಸಂಘಟನೆಯ ಅಪ್ಸರ್ ಪಾಷ್, ಮುನಿಯಪ್ಪ,‌ ಪ್ರದೀಪ್, ಹಿತ್ತಲಹಳ್ಳಿ ಸುರೇಶ್, ಬೀಮಣ್ಣ,ವೆಂಕಟೇಶ್, ಶ್ರೀನಿವಾಸ್, ಮಂಜುನಾಥ್, ಬೋದಗೂರು ಮುನಿರಾಜ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version