Home News KIADB ರೈತ ಪರ ಹೋರಾಟ ಸಮಿತಿಯಿಂದ ಪ್ರತಿಭಟನೆ

KIADB ರೈತ ಪರ ಹೋರಾಟ ಸಮಿತಿಯಿಂದ ಪ್ರತಿಭಟನೆ

0
Sidlaghatta Jangamakote Farmers KIADB Protest

Sidlaghatta : ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕಾ ಕೆಂಪನಿಗಳ ಸ್ದಾಪನೆಗೆ ಒತ್ತಾಯಿಸಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆಯನ್ನು ತಾಲ್ಲೂಕು ಕಚೇರಿಯ ಮುಂದೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟಿನ್ ಮುಂದಿನಿಂದ

ತಾಲ್ಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನೆಯನ್ನು ಜಂಗಮಕೋಟೆ ಕೆಐಎಡಿಬಿ,13 ಹಳ್ಳಿಗಳ ರೈತ ಪರ ಹೋರಾಟ ಸಮಿತಿ ಹಾಗೂ ತಾಲ್ಲೂಕು ದಲಿತಪರ ಸಂಘಟನೆಗಳ ಓಕ್ಕೂಟಗಳು ಹಮ್ಮಿಕೊಂಡಿದ್ದವು.

ಸರ್ಕಾರ ಅಧಿಸೂಚನೆ ಹೊರಡಿಸಿರುವ 2823 ಎಕರೆಯಲ್ಲಿ ಸರ್ಕಾರಿ ಜಮೀನು ಹೊರತುಪಡಿಸಿ, ಉಳಿದ ಗ್ರಾಮಗಳಿಗೆ ಹೊಂದಿಕೊಂಡಿರುವ ನೀರಾವರಿ ಪ್ರದೇಶವನ್ನು ಕೈಬಿಡಬೇಕು. ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಸರ್ಕಾರ ತ್ವರಿತಗತಿಯಲ್ಲಿ ಪ್ರಕ್ರಿಯೆಗಳನ್ನು ನಡೆಸುವಂತೆ ಒತ್ತಾಯಿಸಿದರು. ಚುರುಕುಗತಿಯಲ್ಲಿ ಭೂಸ್ವಾದೀನ ಪಡಿಸಿಕೊಂಡು ಭೂಮಿ ನೀಡಿದ ರೈತರಿಗೆ ಉತ್ತಮ ಭೂಪರಿಹಾರ, ಮನೆಗೊಂದು ಶಾಶ್ವತ ಕೆಲಸ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಂಗಮಕೋಟೆ ಹೋಬಳಿಯಲ್ಲಿ 520 ಎಕರೆ ಸಂಪೂರ್ಣವಾಗಿ ಪಿ.ಎಸ್.ಎಲ್ ಕೆಂಪನಿಯ ಹೆಸರಿನಲ್ಲಿದೆ. ಆ ಜಮೀನುಗಳ ಮೂಲ ರೈತರಿಗೆ ಸರ್ಕಾರದ ಭೂಪರಿಹಾರದ ಹಣ ಜಮಾ ಆಗಬೇಕು. ಪಿ.ಎಸ್. ಎಲ್ ಕೆಂಪನಿಯಿಂದ ಮೋಸ ಹೊಗಿರುವ ರೈತರಿಗೆ ನ್ಯಾಯ ಸಿಗುವವರೆವಿಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ನಮ್ಮ ಹೋರಾಟ ಕೆಐಎಡಿಬಿ ಪರ ಅಲ್ಲ, ಅಭಿವೃದ್ದಿಯ ಕಡೆಗೆ ನಮ್ಮ ಹೋರಾಟ.

ಭೂಮಿ ನೀಡಿದ ರೈತನ ಪ್ರತಿ ಎಕರೆಗೆ 3 ಕೋಟಿ ರೂ ಭೂ ಪರಿಹಾರ ನೀಡಲು ಕ್ರಮ ವಹಿಸಬೇಕು. ಜಂಗಮಕೋಟೆ ಹೋಬಳಿಯಲ್ಲಿ ಪಿ.ಎಸ್.ಎಲ್ ಕಂಪನಿಯ ಹೆಸರಿನಲ್ಲಿ ಕೆಲ ಮದ್ಯವರ್ತಿಗಳು ಅಮಾಯಕ ಮುಖ್ಯ ರೈತರಿಗೆ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಒಂದು ಎಕರೆಗೆ 50 ಸಾವಿರ,1 ಲಕ್ಷ ಹಣ ನೀಡಿ ಜಿಪಿಎ ಆಗ್ರಿಮೆಂಟ್ ಗಳನ್ನು ಮಾಡಿಕೊಂಡು ಹಣ ನೀಡದೆ ಮೋಸ ಮಾಡಿರುತ್ತಾರೆ. ಬಡವರಿಗೆ ನ್ಯಾಯಾಲಯಕ್ಕೆ ಹೊಗುವ ಶಕ್ತಿ ಇಲ್ಲ. ಹಾಗಾಗಿ ಸರ್ಕಾರ ಸಂಬಂಧಪಟ್ಟ ಕಾನೂನು ಇಲಾಖೆ ಮುಖಾಂತರ ರೈತರ ಪರವಾಗಿವಕೀಲರನ್ನು ನೇಮಿಸಿ ಕೆಲ ರೈತರ ಪಹಣಿಗಳಲ್ಲಿ ನಮೂದು ಆಗಿರುವ ತಡೆಯಾಜ್ಞೆ ಆದೇಶವನ್ನು ರದ್ದುಗೊಳಿಸಲು ಕ್ರಮ ವಹಿಸಬೇಕು.

ಸರ್ಕಾರದಿಂದ ಭೂಮಿ ನೀಡಿದ ರೈತರಿಗೆ ಕೊಡುವ ಭೂ ಪರಿಹಾರ ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಕೆಐಎಡಿಬಿ ಪರ ಇರುವ ಕೆಲ ರೈತರ ಮೇಲೆ ಕೆಲವರು ಹಲ್ಲೆ ದಬ್ಬಾಳಿಕೆಗಳನ್ನು ಮಾಡುತ್ತಿದ್ದು, ಅಂತಹವರ ವಿರುದ್ಧ ಕೂನೂನು ರೀತಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್ ಅವರಿಗೆ ನೀಡಿದರು. ಎ.ಸಿ ಅಶ್ವಿನ್, ಡಿ.ವೈ.ಎಸ್.ಪಿ ಮುರಳೀಧರ್ ಮತ್ತು ತಹಶೀಲ್ದಾರ್ ಗಗನಸಿಂಧು ಹಾಜರಿದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಕೆಐಎಡಿಬಿ 13 ಹಳ್ಳಿಗಳ ಹೋರಾಟ ಸಮಿತಿಯ ಮುಖಂಡರಾದ ನಡುಪಿನಾಯಕನಹಳ್ಳಿ ಸುಬ್ರಮಣಿ, ವಾಸುದೇವ ಮೂರ್ತಿ, ಪ್ರಮೋದ್, ಬಸವಪಟ್ಟಣ ಆಂಜಿನಪ್ಪ, ಪ್ರಭುದೇವ್, ತಿಪ್ಪೇಗೌಡ, ರಾಮದಾಸ್, ನಾಗರಾಜ್, ಯಣ್ಣಂಗೂರು ಹರೀಶ್, ಗಂಗಾಧರ್, ಈರಪ್ಪ, ಮಧು, ನರಸಿಂಹಮೂರ್ತಿ, ಭಕ್ತರಹಳ್ಳಿ ವಿಶ್ವನಾಥ್, ಮುನಿಶಾಮಿ, ಜಂಗಮಕೋಟೆ ಜೆ.ಸಿ.ಮಂಜುನಾಥ್, ಮುನಿರಾಜು, ನಾಗರಾಜ್, ಚೀಮಂಗಲ ಚಿನ್ನಪ್ಪ, ಅತ್ತಿಗಾನಹಳ್ಳಿ ಮುನೇಗೌಡ, ನವೀನಕುಮಾರ್, ಮುನಿಕೆಂಚಪ್ಪ, ಹೀರೆಪಾಳ್ಯ ಕದೀರೇಗೌಡ, ಬೀಮಣ್ಣ, ನಾಗವೇಣಿ, ಗಾಯಿತ್ರೀ, ಶ್ಯಾಮ್, ರಾಜೇಶ್, ವಾರಹುಣಸೇನಹಳ್ಳಿ ನರಸಿಂಹ ಮೂರ್ತಿ, ಕರ್ನಾಟಕ ಕಸ್ತೂರಿ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜಿನಪ್ಪ, ಪ್ರಕಾಶ, ಮಾನವ ಹಕ್ಕುಗಳ ಸಂಘಟನೆಯ ಮಳ್ಳೂರು ಅಶೋಕ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಚಲಪತಿ, ಕೃಷ್ಣಪ್ಪ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version