Kundalagurki, Sidlaghatta : ಶಿಡ್ಲಘಟ್ಟ : ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಜುಲೈ 12 ಮತ್ತು 13 ರಂದು “ರಾಜೀವ್ ಗೌಡ ಕ್ರಿಕೆಟ್ ಕಪ್” ಎಂಬ ತಾಲ್ಲೂಕು ಮಟ್ಟದ ಗ್ರಾಮಾಂತರ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗ್ರಾಮಾಂತರ ತಂಡಗಳು ಭಾಗವಹಿಸಬೇಕೆಂದು ಐ ಎನ್ ಟಿ ಯು ಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀoದ್ರ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಿದ್ದು, ಗೆದ್ದ ತಂಡಕ್ಕೆ 40 ಸಾವಿರ ರೂ ಮತ್ತು ಆಕರ್ಷಕ ಟ್ರೋಫಿ ಬಹುಮಾನವಾಗಿ ನೀಡಲಾಗುತ್ತದೆ. ದ್ವಿತೀಯ ಬಹುಮಾನವಾಗಿ 30 ಸಾವಿರ ರೂ ಮತ್ತು ತೃತೀಯ ಬಹುಮಾನವಾಗಿ 10 ಸಾವಿರ ರೂ ನೀಡಲಾಗುತ್ತದೆ. ಪ್ರತಿ ತಂಡಕ್ಕೂ ಪ್ರವೇಶ ಶುಲ್ಕ 1399 ರೂ ಇರುತ್ತದೆ. ಎಲ್ಲೋ ವಿಕ್ಕಿ ಬಾಲ್ ನಿಂದ ಆಡಿಸುವ ಈ ಕ್ರಿಕೆಟ್ ಪಂದ್ಯಕ್ಕೆ ಗ್ರಾಮೀಣ ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ. ಪ್ರತೀ ತಂಡದಲ್ಲಿ ಆಡುವ ಆಟಗಾರರು ಒಂದೇ ಗ್ರಾಮದವರಾಗಿರಬೇಕು. ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಿದರು.
ಹೆಚ್ಚಿನ ವಿವರಗಳಿಗೆ ರಘು : 9740744707 ; ಶೇಖರ್ : 9380922946 ; ಶಶಾಂಕ್ : 7899762443 ; ಮಂಜು : 8904357266 ಅವರನ್ನು ಸಂಪರ್ಕಿಸಲು ಕೋರಿದರು.
ಕುಂದಲಗುರ್ಕಿ ಗ್ರಾಮದ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ರಘು, ಪ್ರಮೋದ್, ವೆಂಕಟೇಶ್, ಮಂಜುನಾಥ್, ಎಲ್ಲಪ್ಪ, ಬ್ಲಾಕ್ ಕಾಗ್ರೆಸ್ ಉಪಾಧ್ಯಕ್ಷ ಶ್ರೀನಾಥ್ ಹಾಜರಿದ್ದರು.