Home News ಸಮೀಕ್ಷೆಯಿಂದ ಕ್ರಿಶ್ಚಿಯನ್ ಧರ್ಮದ ಉಪಜಾತಿ ನಮೂದು ಕೈಬಿಡಬೇಕು

ಸಮೀಕ್ಷೆಯಿಂದ ಕ್ರಿಶ್ಚಿಯನ್ ಧರ್ಮದ ಉಪಜಾತಿ ನಮೂದು ಕೈಬಿಡಬೇಕು

0

Sidlaghatta : ರಾಜ್ಯ ಸರ್ಕಾರ ಪ್ರಸ್ತುತ ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಧರ್ಮದ ಮುಂದೆ ಉಪಜಾತಿಗಳನ್ನು ನಮೂದು ಮಾಡಿರುವುದನ್ನು ತಕ್ಷಣ ಕೈ ಬಿಡಬೇಕೆಂದು ಮುಖಂಡ ಹುಜಗೂರು ಬಚ್ಚೇಗೌಡ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸೆಪ್ಟೆಂಬರ್ 22ರಿಂದ ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಯಲಿದೆ. ಆದರೆ ಸಮೀಕ್ಷಾ ಪಟ್ಟಿಯಲ್ಲಿ ಕ್ರಿಶ್ಚಿಯನ್ ಧರ್ಮದ ಮುಂದೆ ಹಿಂದೂ ಧರ್ಮದ ಕೆಲ ಜಾತಿಗಳನ್ನು ಉಪಜಾತಿಗಳಾಗಿ ಸೇರಿಸಿರುವುದು ಅಸಮರ್ಪಕ. ಇದು ನಾಗರಿಕರಲ್ಲಿ ಗೊಂದಲ ಉಂಟುಮಾಡುವ ಜೊತೆಗೆ ಮತಾಂತರಕ್ಕೆ ಸರ್ಕಾರವೇ ಪ್ರೇರಣೆ ನೀಡಿದಂತಾಗುತ್ತದೆ” ಎಂದು ಹೇಳಿದರು.

ಅವರು ಮುಂದುವರಿದು, “ಉಪಜಾತಿ ನಮೂದು ಮಾಡಿದರೆ ನಾಗರಿಕರಿಗೆ ಯಾವುದೇ ಪ್ರಯೋಜನವಿಲ್ಲ. ಈ ಕುರಿತಂತೆ ಕುಲ ಶಾಸ್ತ್ರೀಯ ಅಧ್ಯಯನವೂ ನಡೆದಿಲ್ಲ. ಕೇಂದ್ರ ಸರ್ಕಾರದಿಂದ ಮಾನ್ಯತೆ ಸಿಕ್ಕಿಲ್ಲದ ಉಪಜಾತಿಗಳನ್ನು ಕೂಡಲೇ ಕೈಬಿಡಬೇಕು” ಎಂದು ಆಗ್ರಹಿಸಿದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version