Sidlaghatta : ಕಾಕಚೊಕ್ಕಂಡಹಳ್ಳಿಯ ಹೊರವಲಯದಲ್ಲಿ ಹೊಲ ಗದ್ದೆ ತೋಟ ಮತ್ತು ದೇವಸ್ಥಾನಕ್ಕೆ ತೆರಳಲು ಇದ್ದ ರಸ್ತೆಯನ್ನು ಲಕ್ಷ್ಮಿನಾರಾಯಣ ಎಂಬಾತ ರಾತ್ರೋ ರಾತ್ರಿ ಮುಚ್ಚಿ ಹಾಕಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದು ಮುಚ್ಚಿರುವ ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಾರೆ.
ಕಾಕಚೊಕ್ಕಂಡಹಳ್ಳಿಯ ಚನ್ನಕೃಷ್ಣಪ್ಪ ಸೇರಿದಂತೆ ಗ್ರಾಮದ ಇತರರು ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದು, ಶಿಡ್ಲಘಟ್ಟ-ಜಂಗಮಕೋಟೆ ಮುಖ್ಯ ರಸ್ತೆಯಿಂದ ಕಾಕಚೊಕ್ಕಂಡಹಳ್ಳಿಗೆ 30 ಅಡಿ ಅಗಲದ ರೂಡಿಗತ ರಸ್ತೆಯಿದ್ದು ಅದನ್ನು ಗ್ರಾಮದ ಲಕ್ಷ್ಮೀನಾರಾಯಣ ಎಂಬಾತ ರಾತ್ರೋ ರಾತ್ರಿ ಮುಚ್ಚಿ ಹಾಕಿದ್ದಾರೆ.
ಇದರಿಂದ ಸುತ್ತ ಮುತ್ತಲ ಹೊಲ ಗದ್ದೆ ಹಾಗೂ ದೇವಸ್ಥಾನವೊಂದಿದ್ದು ಅದಕ್ಕೆ ಭಕ್ತರು ತೆರಳಲು ದಾರಿ ಇಲ್ಲದಾಗಿದೆ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದ್ದು ಸ್ಥಳ ಪರಿಶೀಲಿಸಿ ರಸ್ತೆ ಒತ್ತುವರಿ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೋರಿದ್ದಾರೆ.