Home News ಮನುಷ್ಯರಲ್ಲಿ ಎಷ್ಟೇ ಭಿನ್ನತೆ ಇದ್ದರೂ ಎಲ್ಲರಲ್ಲಿರುವ ಆತ್ಮ ಒಂದೇ

ಮನುಷ್ಯರಲ್ಲಿ ಎಷ್ಟೇ ಭಿನ್ನತೆ ಇದ್ದರೂ ಎಲ್ಲರಲ್ಲಿರುವ ಆತ್ಮ ಒಂದೇ

0

Sidlaghatta : ಮನುಷ್ಯರಲ್ಲಿ ಎಷ್ಟೇ ಭಿನ್ನತೆ ಇದ್ದರೂ ಎಲ್ಲರಲ್ಲಿರುವ ಆತ್ಮ ಒಂದೇ. ಆತ್ಮವೇ ಪರಮಾತ್ಮನ ಸ್ವರೂಪ ಎಂದು ಥಿಯಾಸಫಿ ವ್ಯಾಸಂಗದ ರಾಷ್ಟ್ರೀಯ ಉಪನ್ಯಾಸಕ ಡಾ.ಎಲ್.ನಾಗೇಶ್ ತಿಳಿಸಿದರು.

ಶಿಡ್ಲಘಟ್ಟ ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಬ್ರಹ್ಮವಿದ್ಯಾ ಸಮಾಜದ ವತಿಯಿಂದ ಆಯೋಜಿಸಿದ್ದ ಥಿಯಾಸಫಿ ವ್ಯಾಸಂಗದ ಕುರಿತಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಥಿಯಾಸಫಿ ಪ್ರಕಾರ, ಮಾನವ ಜೀವನದ ಮುಖ್ಯ ಉದ್ದೇಶವು ಆತ್ಮದ ಆಧ್ಯಾತ್ಮಿಕ ಮುಕ್ತಿ ಮತ್ತು ಜ್ಞಾನಾರ್ಜನೆ. ಇದರಲ್ಲಿ ಪುನರ್ಜನ್ಮ ಮತ್ತು ಆತ್ಮದ ಅನಂತತೆಯ ತತ್ವಗಳೂ ಸೇರಿವೆ. ಈ ವ್ಯಾಸಂಗವು ತತ್ವಶಾಸ್ತ್ರ, ಧರ್ಮ ಮತ್ತು ಮಾನವನ ಆಧ್ಯಾತ್ಮಿಕ ಶಕ್ತಿಗಳ ಅಧ್ಯಯನಕ್ಕೆ ಒತ್ತು ನೀಡುತ್ತದೆ. ಜೀವನದ ಆಳವಾದ ಅರ್ಥ ಮತ್ತು ಸತ್ಯವನ್ನು ಅರಿಯಲು ಪ್ರಯತ್ನಿಸಬೇಕು. ಥಿಯಾಸಫಿ ವ್ಯಾಸಂಗದಲ್ಲಿ ಮಾನವ ಸಮಾಜದಲ್ಲಿ ಜಾತಿ, ಧರ್ಮ, ಲಿಂಗ, ವರ್ಗ ಅಥವಾ ಬಣ್ಣದ ಭೇದವಿಲ್ಲದೆ ಸರ್ವ ಮಾನವರ ನಡುವೆ ಸಹೋದರತ್ವವನ್ನು ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿದೆ. ಎಲ್ಲಾ ಧರ್ಮಗಳ ತತ್ತ್ವಗಳನ್ನು ಗೌರವಿಸುವುದು ಮತ್ತು ಅವುಗಳ ಮಧ್ಯೆ ಏಕತೆ ಕಂಡುಹಿಡಿಯುವುದು ಗೋಷ್ಠಿಯ ಮುಖ್ಯ ಸಂಗತಿ ಎಂದು ಹೇಳಿದರು.

ಥಿಯಾಸಫಿ ಉಪನ್ಯಾಸಕಿ ಡಾ.ಜ್ಯೋತಿ ನಾಗೇಶ್ ಮಾತನಾಡಿ, ಥಿಯಾಸಫಿ 1875 ರಲ್ಲಿ ಸ್ಥಾಪಿತವಾದ ಒಂದು ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಸಂಘಟನೆ. ಇದರ ಮುಖ್ಯ ಉದ್ದೇಶ ಸಮಾಜದಲ್ಲಿ ಯಾವುದೇ ಬೇಧ-ಭಾವ ಇಲ್ಲದ ವಿಶ್ವಭಾತೃತ್ವವನ್ನು ನಿರ್ಮಿಸುವುದು, ವೈಚಾರಿಕತೆಯ ತುಲನಾತ್ಮಕ ಅಧ್ಯಯನ ನಡೆಸುವುದು ಮತ್ತು ಪ್ರಕೃತಿ ನಿಯಮ ಹಾಗೂ ಮಾನವನ ಸುಪ್ತ ಶಕ್ತಿಗಳನ್ನು ಪತ್ತೆ ಹಚ್ಚುವುದಾಗಿದೆ ಎಂದು ಹೇಳಿದರು.

ಬ್ರಹ್ಮವಿದ್ಯಾ ಸಮಾಜದ ಅಧ್ಯಕ್ಷ ಬಿ.ಕೆ.ವೇಣು, ಸದಸ್ಯರಾದ ಬಳೆ ರಘು, ಎಸ್.ಎಸ್.ಶಂಕರ್, ಕೆ.ಶ್ರೀನಾಥ್, ಚಿಕ್ಕಮುನಿಯಪ್ಪ, ಬಿ.ಸಿ.ನಂದೀಶ್ ಹಾಜರಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version