Home News ಸಂಘ ಸಂಸ್ಥೆಗಳ ನೆರವಿನಿಂದ ನವೀಕರಣಗೊಂಡ ತಿಪ್ಪೇನಹಳ್ಳಿ ಸರ್ಕಾರಿ ಶಾಲೆ

ಸಂಘ ಸಂಸ್ಥೆಗಳ ನೆರವಿನಿಂದ ನವೀಕರಣಗೊಂಡ ತಿಪ್ಪೇನಹಳ್ಳಿ ಸರ್ಕಾರಿ ಶಾಲೆ

0
Sidlaghatta Tippenahalli Government School Renovation

ಸರ್ಕಾರಿ ಶಾಲೆಗಳಲ್ಲಿ ಸಿಗುವಂತ ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳಲ್ಲಿ ಸಿಗುವುದಿಲ್ಲ. ಆದರೆ ಪೋಷಕರ ಖಾಸಗಿ ಶಾಲೆಗಳ ಬಗೆಗಿನ ವ್ಯಾಮೋಹವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆ ಆಗಲು ಕಾರಣವಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ವಿಷಾಧಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮಪಂಚಾಯಿತಿಯ ತಿಪ್ಪೇನಹಳ್ಳಿಯ ಶಿಥಿಲಗೊಂಡಿದ್ದ ಸರ್ಕಾರಿ ಶಾಲೆಯನ್ನು ಕಾರ್ಲ್ ಝೈಸ್ ಇಂಡಿಯಾ, ಬ್ಯುಸಿನೆಸ್ ನೆಟ್‍ವರ್ಕ್ ಇಂಟರ್ ನ್ಯಾಷನಲ್ ಇನ್ಸಪೈರ್ ಚಾಪ್ಟರ್(ಬಿಎನ್‍ಐ) ಹಾಗೂ ಬೆಂಗಳೂರಿನ ರೋಟರಿ ಪರೇಡ್‍ನ ಆಶ್ರಯದಲ್ಲಿ ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ನವೀಕರಣಗೊಳಿಸಿದ್ದ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಉನ್ನತ ಶಿಕ್ಷಣ ಪಡೆದ ಶಿಕ್ಷಕರು ಸಂದರ್ಶನದಲ್ಲಿ ಪಾಸಾಗಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದು ನಿಮ್ಮ ಮಕ್ಕಳ ಜ್ಞಾನವನ್ನು ಹೆಚ್ಚಿಸುವಲ್ಲಿ ಎಲ್ಲ ರೀತಿಯಲ್ಲೂ ಸನ್ನದ್ಧರಾಗಿದ್ದಾರೆ. ನಂಬಿಕೆಯಿಟ್ಟು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿದರು.

ತಿಪ್ಪೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದಿದ್ದ ಹಿರಿಯ ವಿದ್ಯಾರ್ಥಿ ಇದೀಗ ಬಿಎನ್‍ಐ ಸಂಸ್ಥೆಯಲ್ಲಿ ಡೈರೆಕ್ಟರ್ ಕನ್ಸಲ್ಟೆಂಟ್ ಆಗಿರುವ ಟಿ.ಪಿ.ಶ್ರೀನಿವಾಸ್ ಮಾತನಾಡಿ, ಉದ್ಯೋಗ ಕಾರಣಕ್ಕಾಗಿ ನಾನು ಬೆಂಗಳೂರಲ್ಲಿ ನೆಲೆಸಿದ್ದು ಸ್ವಂತ ಊರಿಗೆ ಬಂದಾಗ ಶಿಥಿಲಗೊಂಡ ಶಾಲೆ ಕಣ್ಣಿಗೆ ಬಿತ್ತು. ನಾನು ಓದಿ ಬೆಳೆದ ಶಾಲೆಗೆ ಏನಾದರೂ ಮಾಡಬೇಕೆನ್ನುವ ಉದ್ದೇಶದಿಂದ ರೋಟರ್ ಕ್ಲಬ್, ಕಾರ್ಲ್ ಝೈಸ್ ಇಂಡಿಯಾ ಸಂಸ್ಥೆಯವರನ್ನು ಸಂಪರ್ಕಿಸಿ ಅವರ ನೆರವಿನಿಂದ ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ದುರಸ್ತಿ, ಪೀಠೋಪಕರಣ, ಮಕ್ಕಳ ಆಟದ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಿದ್ದು ನನಗೆ ಸಂತಸ ತಂದಿದೆ ಎಂದು ನೆರವು ನೀಡಿದ ಎಲ್ಲರಿಗೂ ಅಬಿನಂದಿಸಿದರು.

ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಸ್ಥಳೀಯರಾದ ಭರತ್, ಲಕ್ಷ್ಮೀನಾರಾಯಣ್, ಗೌರೀಶ್, ಕಾರ್ಲ್ ಝೈಸ್ ಇಂಡಿಯಾ ಸಂಸ್ಥೆಯ ಎಂಡಿ ವಿಲ್ಸನ್ ಥಾಮಸ್, ಪ್ರವೀಣ್, ಸುದರ್ಶನ್‍ರಾಮಯ್ಯ, ರೋಟರಿ ಕ್ಲಬ್‍ನ ಅಧ್ಯಕ್ಷ ರವಿಪ್ರಸಾದ್, ಆನಂದ್ ರಾಮಚಂದ್ರ, ಬಿಎನ್‍ಐನ ಟಿ.ಪಿ.ಶ್ರೀನಿವಾಸ್,ಚಂದ್ರಶೇಖರ್, ವಿಜಯ್, ಶಾಲಾ ಶಿಕ್ಷಕರು, ಸ್ಥಳೀಯರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version