20.6 C
Sidlaghatta
Thursday, July 31, 2025

ಜೂಜು ಅಡ್ಡೆ ಮೇಲೆ ದಾಳಿ

- Advertisement -
- Advertisement -

ತಾಲ್ಲೂಕಿನ ತಾತಹಳ್ಳಿ ಬಳಿ ಅರಣ್ಯ ಇಲಾಖೆಗೆ ಸೇರಿರುವ ನೀಲಗಿರಿ ತೋಪಿನಲ್ಲಿ ಜೂಜು ಆಡುತ್ತಿದ್ದವರ ಮೇಲೆ ಬುಧವಾರ ದಾಳಿ ನಡೆಸಿರುವ ಜಿಲ್ಲಾ ಅಪರಾಧ ನಿಯಂತ್ರಣ ದಳದ ಪೊಲೀಸರು ಜೂಜಾಡುತ್ತಿದ್ದವರನ್ನು ಬಂಧಿಸಿ ಪಣಕ್ಕಿಟ್ಟಿದ್ದ ನಗದು ಹಣವನ್ನು ವಶಪಡಿಸಿಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೂಜಾಡುತ್ತಿದ್ದ ತಾತಹಳ್ಳಿ ಮುನಿಶಾಮಿ, ಚೊಕ್ಕಹಳ್ಳಿ ಮಂಜುನಾಥ, ಪೆರೇಸಂದ್ರ ವೇಣು, ಶಿಡ್ಲಘಟ್ಟ ವೆಂಕಟೇಶ್‌, ತಾತಹಳ್ಳಿ ಮೂರ್ತಿ, ಚಿಕ್ಕಬಳ್ಳಾಪುರ ಕುಬೇರ, ಚಿಂತಾಮಣಿ ಬಾಬಾಜಾನ್‌, ತಿಪ್ಪೇನಹಳ್ಳಿ ಲಕ್ಷ್ಮಯ್ಯ, ಅಜ್ಜವಾರ ನಾರಾಯಣಗೌಡ ಸೇರಿದಂತೆ ಒಂಭತ್ತು ಮಂದಿಯನ್ನು ಬಂಧಿಸಿದ್ದು, ಬಂಧಿತರು ಪಣಕ್ಕಿಟ್ಟಿದ್ದ 42 ಸಾವಿರ ರೂ, 10 ಮೊಬೈಲ್‌ ಮತ್ತು 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ನರಸಿಂಹ, ಗಿರೀಶ್, ಸತೀಶ್, ರಮೇಶ್, ಶ್ರೀನಿವಾಸ್ ಹಾಗೂ ಮಂಜುನಾಥ್ ದಾಳಿಯಲ್ಲಿ ಭಾಗವಹಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!