23.3 C
Sidlaghatta
Sunday, October 12, 2025

ಹಳೇಹಳ್ಳಿಯಲ್ಲಿ ಕನಕ ಜಯಂತಿ

- Advertisement -
- Advertisement -

ಕನಕ ಜಯಂತಿಯ ನಿಜ ಅರ್ಥದ ಆಚರಣೆ ಸಮಾಜಕ್ಕೆ ನೀಡುವ ಕೊಡುಗೆಯಾಗಿದೆ ಎಂದು ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಎ.ನಾಗರಾಜು ತಿಳಿಸಿದರು.
ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯ ಹಳೇಹಳ್ಳಿ ಮತ್ತು ಮಲ್ಲಶೆಟ್ಟಿಹಳ್ಳಿ ಗ್ರಾಮಸ್ಥರು ಬುಧವಾರ ಹಳೇಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆಚರಿಸಿದ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಜಾತಿ, ಕುಲ, ಮತ, ಧರ್ಮವೆನ್ನದೆ ಪ್ರಪಂಚದ ಎಲ್ಲಾ ಮನುಕುಲವೂ ಉದ್ಧಾರವಾಗಬೇಕು ಎಂದು ಸಾರಿದ ಕನಕದಾಸರ ಆದರ್ಶವನ್ನು ಪರಿಪಾಲಿಸುವ ಮೂಲಕ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿಸಬೇಕಿದೆ. ತಮ್ಮ ಬದುಕಿನಲ್ಲಿ ಕನಕದಾಸರು ಜಾತಿ ವೈಮನಸ್ಯ, ಅಸೂಯೆ ಮನೋಭಾವನೆ ನಿರ್ಮೂಲನೆ ಮಾಡಲು ಶ್ರಮಿಸಿದರು. ಕುಲ ಕುಲವೆಂದು ಹೊಡೆದಾಡಬೇಡಿ, ಕುಲಗಳು ಹುಟ್ಟಿದ್ದು ಎಲ್ಲಿ ಎಂಬುದನ್ನು ಅರ್ಥಮಾಡಿಕೊಂಡಿದ್ದಾದರೆ ಜಾತಿ ಸಂಘರ್ಷಗಳಿಗೆ ಅವಕಾಶವಿರುವುದಿಲ್ಲವೆಂದು ಸಾರಿದ ಕನಕದಾಸರು ಸುಮಾರು ಐದು ಶತಮಾನಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ನೆಲೆಸಿದ್ದಾರೆ ಎಂದು ಹೇಳಿದರು.
ಗ್ರಾಮದ ಶಿಕ್ಷಕರು ಹಾಗೂ ಹಿರಿಯರಾದ ಸರೋಜಮ್ಮ, ಸುಬ್ಬಣ್ಣ, ಸುರೇಶ್, ಮಂಜುನಾಥ್, ಚಂದ್ರಪ್ಪ, ಎಂ.ಕೆ.ರೆಡ್ಡಿ ಮತ್ತಿತರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗೌಡರ ವೆಂಕಟರಾಯಪ್ಪ ಮತ್ತು ಮಕ್ಕಳು 80 ಮಂದಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಟೈ, ಬೆಲ್ಟ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಆದಿನಾರಾಯಣಪ್ಪ, ರಾಮಚಂದ್ರಪ್ಪ, ರಾಮಾಂಜಿ, ರಾಮಣ್ಣ, ನಾರಾಯಣಸ್ವಾಮಿ, ದೇವಾರೆಡ್ಡಿ, ವೆಂಕಟರಾಯಪ್ಪ, ವೆಂಕಟರೋಣಪ್ಪ, ಚಂದ್ರಪ್ಪ, ದೇವರಾಜು, ಮಲ್ಲಪ್ಪ, ಸುಬ್ಬಣ್ಣ, ನಾರಾಯಣರೆಡ್ಡಿ, ನರೇಂದ್ರ, ಆಂಜನೇಯರೆಡ್ಡಿ, ಮೌಲಾ, ಬೈರಾರೆಡ್ಡಿ, ವೆಂಕಟಾಚಲಪತಿ, ಬಾಬಾಜಾನ್, ವೆಂಕಟರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!