ಪಟ್ಟಣದಲ್ಲಿ ಶುಕ್ರವಾರ ಕುದುರೆಯ ಮೇಲೆ ಕತ್ತಿ ಹಿಡಿದು ಸಾಗುತ್ತಿದ್ದ ಪುಟ್ಟ ಟಿಪ್ಪುಸುಲ್ತಾನ್ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದ.
ಶಾಲೆಯೊಂದರಲ್ಲಿ ವೇಷಭೂಷಣ ಸ್ಪರ್ಧೆಗೆ ಟಿಪ್ಪುಸುಲ್ತಾನ್ ವೇಷಧರಿಸಿದ್ದ ಬಾಲಕ ಕುದುರೆ ಮರಿಯೊಂದರ ಮೇಲೆ ಹೋಗುತ್ತಿದ್ದುದರಿಂದ ಎಲ್ಲರ ಗಮನ ಸೆಳೆದಿದ್ದ. ಎಲ್.ಕೆ.ಜಿ ಓದುವ ವಿದ್ಯಾರ್ಥಿ ಮೊಹಮ್ಮದ್ ಸೂಫಿಯಾನ್ನನ್ನು ಆತನ ತಂದೆ ಅಬ್ದುಲ್ ಅಯಾಜ್ ವೇಷಭೂಷಣ ಸ್ಪರ್ಧೆಗೆ ಅಣಿಗೊಳಿಸಿದ್ದಲ್ಲದೆ ಪುಟ್ಟ ಕುದುರೆಯನ್ನೂ ತಂದು ಅದರ ಮೇಲೆ ಕೂರಿಸಿಕೊಂಡು ಶಾಲೆಗೆ ಕರೆದೊಯ್ಯುತ್ತಿದ್ದ.
ತಳ್ಳುವ ಗಾಡಿಯೊಂದರಲ್ಲಿ ಕಡಲೆಕಾಯಿಯನ್ನು ಮಾರುವ ಫಿಲೇಚರ್ ಕ್ವಾಟರ್ಸ್ ವಾಸಿ ಅಬ್ದುಲ್ ಅಯಾಜ್ ನಾಲ್ಕು ವರ್ಷದ ಮಗುವಿಗಾಗಿ ಪಟ್ಟ ಶ್ರಮವನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







