20.1 C
Sidlaghatta
Thursday, December 25, 2025
Home Blog Page 16

ಪ್ರವಾಸಿ ತಾಣವಾಗಿ ಗುರುತಿಸಿಕೊಂಡ ಕುಂದಲಗುರ್ಕಿ ಬೆಟ್ಟ ವರದಾಂಜನೇಯಸ್ವಾಮಿ ಕ್ಷೇತ್ರ

0
Kundalagurki Varadanjaneya temple is officially named Tourist site

Kundalagurki, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಬೆಟ್ಟದ ಮೇಲಿರುವ ಶ್ರೀ ವರದಾಂಜನೇಯಸ್ವಾಮಿ ದೇವಾಲಯ ಇದೀಗ ಅಧಿಕೃತವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಇದರೊಂದಿಗೆ ತಾಲ್ಲೂಕಿನ ಪ್ರವಾಸಿ ತಾಣಗಳ ಸಂಖ್ಯೆ ಎಂಟಕ್ಕೇರಿದೆ.

ಐತಿಹಾಸಿಕ ಹಿನ್ನೆಲೆ ಮತ್ತು ಧಾರ್ಮಿಕ ಮಹತ್ವದಿಂದಲೇ ಪ್ರಸಿದ್ಧಿಯಾಗಿರುವ ಈ ದೇವಾಲಯಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಚಾರ ಹೆಚ್ಚುತ್ತಿದೆ. ಭಕ್ತರ ಈ ನಿರಂತರ ಆಗಮನದಿಂದಾಗಿ ಬೆಟ್ಟದ ಮೇಲಿನ ದೇವಾಲಯಕ್ಕೆ ತೆರಳಲು ಸುಗಮವಾದ ರಸ್ತೆ, ಕುಡಿಯುವ ನೀರು, ವಿದ್ಯುಚ್ಛಕ್ತಿ, ವಿಶ್ರಾಂತಿ ಸ್ಥಳ ಮತ್ತು ನೆರಳಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಇದೀಗ ನಿರೀಕ್ಷೆ ಹೆಚ್ಚಾಗಿದೆ.

ಶಿಡ್ಲಘಟ್ಟ ತಾಲ್ಲೂಕು ಧಾರ್ಮಿಕ ಮತ್ತು ಪ್ರಾಕೃತಿಕ ಸೊಬಗಿನಿಂದ ಕೂಡಿದೆ. ಪಾಪಾಗ್ನಿ ನದಿ ತಟದ ತಲಕಾಯಲಬೆಟ್ಟದ ಶ್ರೀವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿ ಗುಟ್ಟದ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯ, ಬಶೆಟ್ಟಹಳ್ಳಿಯ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯ, ಸಾದಲಿಯ ಸಾದಲಮ್ಮ ದೇವಿ ದೇವಾಲಯ, ಒಂಟೂರು ಒಡೆಯನ ಕೆರೆಯ ಶ್ರೀಅನಂತಪದ್ಮನಾಭ ದೇವಾಲಯ ಮುಂತಾದ ಸ್ಥಳಗಳು ಈಗಾಗಲೇ ಪ್ರವಾಸಿ ತಾಣಗಳ ಪಟ್ಟಿಯಲ್ಲಿವೆ. ಈಗ ಕುಂದಲಗುರ್ಕಿಯ ವರದಾಂಜನೇಯಸ್ವಾಮಿ ದೇವಾಲಯ ಸೇರ್ಪಡೆಯಾಗಿ ತಾಲ್ಲೂಕಿನ ಧಾರ್ಮಿಕ ನಕ್ಷೆಗೆ ಮತ್ತೊಂದು ಕಿರೀಟದಂತೆ ಸೇರಿದೆ.

ಕುಂದಲಗುರ್ಕಿಯ ಸೌಂದರ್ಯ ಮತ್ತು ಮಹತ್ವ

ಹಸಿರು ಪರಿಸರದಿಂದ ಆವರಿಸಲ್ಪಟ್ಟಿರುವ ಕುಂದಲಗುರ್ಕಿ ಬೆಟ್ಟವು ಶಾಂತ ಮತ್ತು ಆಧ್ಯಾತ್ಮಿಕ ವಾತಾವರಣದಿಂದ ಕೂಡಿದೆ. ಬೆಟ್ಟದ ಮೆಟ್ಟಿಲು ಮಾರ್ಗದ ಮೂಲಕ ದೇವಾಲಯ ತಲುಪಬಹುದು. ದೇವಾಲಯದ ತಪ್ಪಲಿನಲ್ಲಿ ಸಮುದಾಯ ಭವನವಿದ್ದು, ಪ್ರತೀ ಶನಿವಾರ ವಿಶೇಷ ಪೂಜೆ ಹಾಗೂ ವಾರದ ಎಲ್ಲಾ ದಿನಗಳಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಭಕ್ತರು, ಪ್ರವಾಸಿಗರು ಹಾಗೂ ಪ್ರಕೃತಿ ಪ್ರೇಮಿಗಳಿಗೆ ಇದು ಶಾಂತ ಮತ್ತು ಶಕ್ತಿ ತುಂಬಿದ ಸ್ಥಳವಾಗಿದೆ.

ಶಾಸನಗಳಲ್ಲಿ ಉಲ್ಲೇಖಿತವಾದ ಇತಿಹಾಸ

ಶಾಸನ ತಜ್ಞ ಡಿ.ಎನ್. ಸುದರ್ಶನರೆಡ್ಡಿ ವಿವರಿಸಿದಂತೆ, ಕುಂದಲಗುರ್ಕಿಯ ಉಲ್ಲೇಖ ಕ್ರಿ.ಶ. 810ರ ನಂದಿ ತಾಮ್ರ ಶಾಸನದಲ್ಲಿ ದೊರಕುತ್ತದೆ. ರಾಷ್ಟ್ರಕೂಟ ಚಕ್ರವರ್ತಿ ಮೂರನೇ ಗೋವಿಂದನು ರಾಣಿ ರತ್ನಾವಳಿಯ ಪ್ರೇರಣೆಯಿಂದ ಭೋಗನಂದೀಶ್ವರ ದೇವಾಲಯಕ್ಕೆ ಕುಂದಲಗುರ್ಕಿ ಹಾಗೂ ಕನ್ನಮಂಗಲ ಸೇರಿದಂತೆ ಹಲವು ಪ್ರದೇಶಗಳನ್ನು ದಾನವಾಗಿ ನೀಡಿದ್ದಾನೆ. ಇದರಿಂದ ಈ ಸ್ಥಳದ ಪೌರಾಣಿಕ ಮತ್ತು ಇತಿಹಾಸಿಕ ಮಹತ್ವ ಸ್ಪಷ್ಟವಾಗುತ್ತದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಕುಂದಲಗುರ್ಕಿ ಬೆಟ್ಟದ ಶ್ರೀ ವರದಾಂಜನೇಯಸ್ವಾಮಿ ದೇವಾಲಯ | Kundalagurki Sri Varadanjaneya Swamy Temple

0
Sidlaghatta Kundalagurki Hill Sri Varadanjaneya Swamy Temple

Kundalagurki, Sidlaghatta Taluk, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಬೆಟ್ಟದ ಮೇಲಿರುವ ಐತಿಹಾಸಿಕ ಶ್ರೀ ವರದಾಂಜನೇಯಸ್ವಾಮಿ ದೇವಾಲಯವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಈಗ ಅಧಿಕೃತ ಪ್ರವಾಸಿ ತಾಣವಾಗಿ ಗುರುತಿಸಿದೆ. ಇದರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನ ಪ್ರವಾಸಿ ತಾಣಗಳ ಸಂಖ್ಯೆ ಎಂಟಕ್ಕೇರಿದೆ.

ಬೆಟ್ಟದ ಮೇಲಿರುವ ವರದಾಂಜನೇಯಸ್ವಾಮಿ ದೇವಾಲಯಕ್ಕೆ ಪ್ರತಿದಿನವೂ ಅನೇಕ ಭಕ್ತರು ಆಗಮಿಸುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಸುಗಮ ರಸ್ತೆ, ಕುಡಿಯುವ ನೀರು, ನೆರಳು, ವಿದ್ಯುಚ್ಛಕ್ತಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿರೀಕ್ಷಿಸಲಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈಗಾಗಲೇ ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯ, ಬಶೆಟ್ಟಹಳ್ಳಿಯ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯ, ಸಾದಲಿಯ ಸಾದಲಮ್ಮ ದೇವಿ ದೇವಾಲಯ, ಗಂಗಮ್ಮ ದೇವಾಲಯ, ಸಾದಲಿಯ ರಾಮಸಮುದ್ರ ಕೆರೆ, ಒಂಟೂರಿನ ಶ್ರೀ ಅನಂತಪದ್ಮನಾಭ ದೇವಾಲಯವಿರುವ ಒಡೆಯನ ಕೆರೆ ಮುಂತಾದವು ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಈಗ ಕುಂದಲಗುರ್ಕಿ ಬೆಟ್ಟದ ಶ್ರೀ ವರದಾಂಜನೇಯಸ್ವಾಮಿ ದೇವಾಲಯವೂ ಅವುಗಳಲ್ಲಿ ಸ್ಥಾನ ಪಡೆದಿದೆ.

ಸುಂದರ ಪರಿಸರದ ಮಧ್ಯೆ ಬೆಟ್ಟದ ದೇವಾಲಯ

Sidlaghatta Kundalagurki Hill Sri Varadanjaneya Swamy Temple

ಕುಂದಲಗುರ್ಕಿ ಗ್ರಾಮಕ್ಕೆ ಅಂಟಿಕೊಂಡಂತೆ ಇರುವ ಈ ಬೆಟ್ಟದ ಮೇಲಿರುವ ಶ್ರೀ ವರದಾಂಜನೇಯಸ್ವಾಮಿ ದೇವಾಲಯ ಶಾಂತ ವಾತಾವರಣ ಮತ್ತು ಹಸಿರಿನಿಂದ ಕೂಡಿದ ಆಕರ್ಷಕ ತಾಣವಾಗಿದೆ. ಬೆಟ್ಟದ ಮೇಲಿರುವ ದೇವಾಲಯಕ್ಕೆ ಮೆಟ್ಟಿಲುಗಳ ಮೂಲಕ ಹೋಗುವ ವ್ಯವಸ್ಥೆಯಿದ್ದು, ತಪ್ಪಲಿನಲ್ಲಿ ಸಮುದಾಯ ಭವನವೂ ಇದೆ.

ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ನೂರಾರು ಭಕ್ತರು ಭಾಗವಹಿಸುತ್ತಾರೆ. ವಾರದ ಎಲ್ಲಾ ದಿನಗಳಲ್ಲೂ ನಿತ್ಯ ಪೂಜೆ ನಡೆಯುತ್ತದೆ.

ಬೆಟ್ಟದ ಸುತ್ತಲೂ ಹಸಿರು ಗಿರಿಧಾಮದ ಸೌಂದರ್ಯ ತುಂಬಿದ್ದು, ಇದು ಪ್ರಾಕೃತಿಕವಾಗಿ, ಧಾರ್ಮಿಕವಾಗಿ ಹಾಗೂ ಐತಿಹಾಸಿಕವಾಗಿ ಮಹತ್ವಪೂರ್ಣ ತಾಣವಾಗಿದೆ.

ಕುಂದಲಗುರ್ಕಿಯ ಐತಿಹಾಸಿಕ ಉಲ್ಲೇಖ

ಕುಂದಲಗುರ್ಕಿಯ ಉಲ್ಲೇಖ ಕ್ರಿ.ಶ. 810ರ ನಂದಿ ತಾಮ್ರಶಾಸನದಲ್ಲಿ ದೊರೆಯುತ್ತದೆ. ರಾಣಿ ರತ್ನಾವಳಿಯು ಭೋಗನಂದೀಶ್ವರ ದೇವಾಲಯವನ್ನು ನಿರ್ಮಿಸಿದಾಗ ರಾಷ್ಟ್ರಕೂಟ ಚಕ್ರವರ್ತಿ ಮೂರನೇ ಗೋವಿಂದನು ಕುಂದಲಗುರ್ಕಿ ಹಾಗೂ ಕನ್ನಮಂಗಲ ಸೇರಿದಂತೆ ಹಲವು ಪ್ರದೇಶಗಳನ್ನು ದಾನವಾಗಿ ನೀಡಿದ್ದಾನೆ. ಇದು ಆ ಕಾಲದ ಸಾಂಸ್ಕೃತಿಕ ವಿನಿಮಯ ಮತ್ತು ಧಾರ್ಮಿಕ ಶ್ರೀಮಂತಿಕೆಯ ಸಾಕ್ಷಿ.

ಕುಂದಲಗುರ್ಕಿ ಬೆಟ್ಟದ ವಿಶೇಷತೆಗಳು

  • ಬೆಟ್ಟದ ಮೇಲಿರುವ ಶ್ರೀ ವರದಾಂಜನೇಯಸ್ವಾಮಿ ದೇವಾಲಯ – ಶಾಂತ, ಆಕರ್ಷಕ ಮತ್ತು ಭಕ್ತಿಪರ ವಾತಾವರಣ
  • ವರ್ಷ ಪೂರ್ತಿ ಹಸಿರಿನಿಂದ ಕೂಡಿರುವ ನೈಸರ್ಗಿಕ ಸೌಂದರ್ಯ
  • ದೇವಾಲಯದಿಂದ ಸುತ್ತಮುತ್ತಲಿನ ಹಳ್ಳಿಗಳು ಮತ್ತು ಕೆರೆಗಳ ಸುಂದರ ನೋಟ
  • ಇತಿಹಾಸ ಪ್ರಸಿದ್ಧ ಶಾಸನಗಳಲ್ಲಿ ಉಲ್ಲೇಖಿತ ಪ್ರಾಚೀನ ತಾಣ
  • ವಾರದ ಪ್ರತೀ ಶನಿವಾರ ವಿಶೇಷ ಪೂಜೆ ಮತ್ತು ಭಕ್ತರ ಮಹಾಪ್ರವಾಹ
Sidlaghatta Kundalagurki Hill Sri Varadanjaneya Swamy Temple

ಪ್ರವಾಸಿಗರಿಗೆ ಸಲಹೆ:

ಕುಂದಲಗುರ್ಕಿ ಬೆಟ್ಟಕ್ಕೆ ಭೇಟಿ ನೀಡುವವರು ಬೆಳಿಗ್ಗೆ ಅಥವಾ ಸಂಜೆ ವೇಳೆಯಲ್ಲಿ ಹತ್ತುವುದು ಉತ್ತಮ. ಬೆಟ್ಟ ಹತ್ತಲು ಸಾಕಷ್ಟು ಮೆಟ್ಟಿಲುಗಳಿವೆ ಮತ್ತು ಸ್ಥಳ ಶಾಂತವಾದುದರಿಂದ ಕುಟುಂಬ ಸಮೇತ ಭೇಟಿ ನೀಡಲು ಇದು ಆದರ್ಶ ಸ್ಥಳವಾಗಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸಾವಿರ ವರ್ಷದ ಚೋಳರ ಕಾಲದ ತಮಿಳು ಶಾಸನ ಪತ್ತೆ – ಇತಿಹಾಸಕ್ಕೆ ಹೊಸ ಬೆಳಕು

0
S Devaganahalli 1000 year old Chola Inscription Found in S Devaganahalli Sidlaghatta

S Devaganahalli, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್. ದೇವಗಾನಹಳ್ಳಿ ಗ್ರಾಮದಲ್ಲಿ, ಚೋಳ ರಾಜ ಒಂದನೇ ಕುಲೋತ್ತುಂಗನ ಕಾಲದ ತಮಿಳು ಶಾಸನ ಪತ್ತೆಯಾಗಿದೆ. ಈ ಶಾಸನವು ಕ್ರಿಸ್ತ ಶಕ 1097ರ ಕಾಲಘಟ್ಟಕ್ಕೆ ಸೇರಿದದ್ದು ಎಂದು ಶಾಸನ ತಜ್ಞರು ತಿಳಿಸಿದ್ದಾರೆ.

ಈ ಅಮೂಲ್ಯ ಪುರಾತನ ಶಾಸನವನ್ನು ಶಾಸನ ತಜ್ಞರಾದ ಕೆ. ಧನಪಾಲ್, ಎ.ಎಂ. ತ್ಯಾಗರಾಜ್ (ಅಪ್ಪೇಗೌಡನಹಳ್ಳಿ) ಹಾಗೂ ಕೆ.ಆರ್. ನರಸಿಂಹನ್ ಅವರ ತಂಡ ಪತ್ತೆಹಚ್ಚಿದೆ.

ಗ್ರಾನೈಟ್ ಶಿಲಾಫಲಕದ ಮೇಲೆ ತಮಿಳು–ಗ್ರಂಥ ಲಿಪಿಯಲ್ಲಿ ಕೆತ್ತಲಾಗಿರುವ ಈ ಶಾಸನವು ಸೂರ್ಯ-ಚಂದ್ರ ಚಿಹ್ನೆ ಮತ್ತು ಹಸು-ಕರುವಿನ ಶಿಲ್ಪ ಹೊಂದಿದ್ದು, ಇದು ದಾನ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿನ್ಯಾಸವಾಗಿದೆ. ಶಾಸನವು ಮಣ್ಣಿನಲ್ಲಿ ಮುಚ್ಚಿಹೋಗಿದ್ದರೂ ಸ್ಥಳೀಯ ಶಿಕ್ಷಕ ಸಾದಲಿ ನಾಗೇಶ್ ಮತ್ತು ಗ್ರಾಮಸ್ಥರ ಸಹಕಾರದಿಂದ ಹೊರತೆಗೆದು ಅಧ್ಯಯನ ಮಾಡಲಾಗಿದೆ.

ಶಾಸನದ ಸಾರಾಂಶ:

ಶಾಸನವು ಚೋಳರ ರಾಜನಾದ ಒಂದನೇ ಕುಲೋತ್ತುಂಗ ಚೋಳನ 27ನೇ ಆಳ್ವಿಕೆಯ ಕಾಲದಲ್ಲಿ, ಅಂದರೆ ಕ್ರಿ.ಶ. 1097ರಲ್ಲಿ ಪರದೇಸಿ ವ್ಯಾಪಾರ ಸಂಘದ ಪ್ರಮುಖನಾದ ಕೆಂಜಕೆತ್ತ ಶೆಟ್ಟಿ ಎಂಬುವವರು ನಿಗಿರಿಲಿ ಚೋಳಮಂಡಲದ ಹಿರಿಯ ಸಾದಲಿಯಲ್ಲಿ ಒಂದು ಕೆರೆ ನಿರ್ಮಿಸಿ, ಅದರ ಪೂರ್ವಭಾಗದ ಗದ್ದೆ ಜಮೀನನ್ನು ಇರುಮಡಿನಾಡಿನ ನಿಗರಿಲಿಚೋಳ ಮಂಡಲದ ಹಿರಿಯ ಸಾದಲಿ ಗ್ರಾಮದ ಈಶ್ವರ ದೇವಾಲಯಕ್ಕೆ ಈಶ್ವರ ದೇವಾಲಯಕ್ಕೆ ಮತ್ತು ಹದಿನಾರು ಬ್ರಾಹ್ಮಣರಿಗೆ ದಾನವಾಗಿ ನೀಡಿದ ಕುರಿತು ಉಲ್ಲೇಖಿಸಲಾಗಿದೆ.

ಶಾಸನ ತಜ್ಞ ಕೆ.ಆರ್. ನರಸಿಂಹನ್ ವಿವರಿಸುತ್ತಾ, “ಈ ಶಾಸನವು ಚೋಳರ ಕಾಲದ ವ್ಯಾಪಾರ ಸಂಘಟನೆಗಳು, ಆಡಳಿತ ವಿಭಾಗಗಳು ಮತ್ತು ಸಾದಲಿಯ ಈಶ್ವರ ದೇವಾಲಯದ ನಿರ್ಮಾಣ ಇತಿಹಾಸದ ಕುರಿತು ಮಹತ್ವದ ಮಾಹಿತಿಯನ್ನು ನೀಡುತ್ತದೆ,” ಎಂದರು.

ಇತಿಹಾಸದ ಮಹತ್ವ:

ವಿಶೇಷವೆಂದರೆ, ಕುಲೋತ್ತುಂಗ ಚೋಳರಾಜ್ಯದ ಚಕ್ರವರ್ತಿ ಆದರೂ ಕೂಡ ಮೂಲದಲ್ಲಿ ಆತ ಪ್ರಖ್ಯಾತ ಕನ್ನಡ ಅರಸ ಇಮ್ಮಡಿ ಪುಲಿಕೇಶಿಯ ವಂಶದವನು. ಚಾಲುಕ್ಯರ ಪುಲಿಕೇಶಿಯು ತನ್ನ ತಮ್ಮನಾದ ಕುಬ್ಜ ವಿಷ್ಣುವರ್ಧನನಿಗೆ ವೆಂಗಿ ರಾಜ್ಯವನ್ನು ಗೆದ್ದುಕೊಟ್ಟಿರುತ್ತಾನೆ. ಆ ವೆಂಗಿಚಾಲುಕ್ಯವಂಶದ ರಾಜನರೇಂದ್ರನ ಮಗನೇ ಈ ಕುಲೋತುಂಗ. ಚೋಳ ವಂಶದ ರಾಜೇಂದ್ರ ಚೋಳನ ಮಗಳ ಮಗನಾದ್ದರಿಂದ ಇವನಿಗೆ ಅನಿವಾರ್ಯ ಸಂದರ್ಭದಲ್ಲಿ ಚೋಳ ಸಿಂಹಾಸನ ಏರುವ ಅವಕಾಶ ಸಿಕ್ಕಿರುತ್ತದೆ.

ಮತ್ತೊಂದು ವಿಶೇಷವೆಂದರೆ, ಹೊಯ್ಸಳರ ವಿಷ್ಣುವರ್ಧನ ಚೋಳರನ್ನು ಕನ್ನಡನಾಡಿನಿಂದ ಹೊರದಬ್ಬಿದ ನಂತರವೂ ಕುಲೋತ್ತುಂಗ ಮತ್ತು ಆತನ ಮಗ ವಿಕ್ರಮಚೋಳನ ಶಾಸನಗಳು ಶಿಡ್ಲಘಟ್ಟ ತಾಲ್ಲೂಕಿನ ನಂದನವನ, ಚಿಲಕಲನೇರ್ಪು ಮತ್ತು ಸುಗಟೂರುಗಳಲ್ಲಿ ಸಿಕ್ಕಿವೆ, ಎಸ್.ದೇವಗಾನಹಳ್ಳಿ ಶಾಸನವೂ ಅದೇ ರೀತಿಯದಾಗಿರುವುದರಿಂದ ಅದಕ್ಕೆ ಐತಿಹಾಸಿಕ ಮಹತ್ವವಿದೆ.

ಶಾಸನವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಡಿ.ವಿ. ಓಬಳಪ್ಪ, ಡಿ.ವಿ. ರಮೇಶ್, ನರಸಿಂಹಪ್ಪ, ಗಂಗರಾಜ, ಹಂಸದ್, ಸಂಜಯ್, ಸೀನಪ್ಪ, ವೆಂಕಟರಮಣಪ್ಪ, ಸಂಶೋಧನಾ ವಿದ್ಯಾರ್ಥಿ ಶ್ರೀನಿವಾಸ್ ಮತ್ತು ಕೃಷ್ಣಗಿರಿಯ ಗೋವಿಂದರಾಜ್ ಅವರ ಸಹಕಾರವಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮದಿನಾಚರಣೆ

0
Sidlaghatta Dolphin's CBSE School Unity Day celebration

Sidlaghatta, Chikkaballapur : ಶಿಡ್ಲಘಟ್ಟ ನಗರದ ಡಾಲ್ಫಿನ್ CBSE ಶಾಲೆಯಲ್ಲಿ ಶುಕ್ರವಾರದಂದು ರಾಷ್ಟ್ರದ ಲೋಹಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ “ರನ್ ಫಾರ್ ಯುನಿಟಿ” (Run for Unity) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಅಧ್ಯಕ್ಷ ಶ್ರೀ ಎ. ನಾಗರಾಜ್ ಮಾತನಾಡಿ, “ಸರ್ದಾರ್ ಪಟೇಲ್ ಅವರು ದೇಶದ ಸಮಗ್ರತೆ ಮತ್ತು ಏಕತೆಗೆ ಜೀವಂತ ಸಂಕೇತ. ಅವರು ಭಾರತವನ್ನು ಅಖಂಡ ರಾಷ್ಟ್ರವನ್ನಾಗಿ ರೂಪಿಸಿದ ಮಹಾನ್ ನಾಯಕರು. ಅವರ ಆದರ್ಶಗಳನ್ನು ಪಾಲಿಸಿ, ವಿದ್ಯಾರ್ಥಿಗಳು ದೇಶದ ಏಕತೆಗಾಗಿ ಸದಾ ಶ್ರಮಿಸಬೇಕು” ಎಂದು ಕರೆ ನೀಡಿದರು.

ಈ ವೇಳೆ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆಯ ಮೂಲಕ ಜನರಲ್ಲಿ ಏಕತೆ, ಸಹಕಾರ ಮತ್ತು ದೇಶಭಕ್ತಿ ಬಗ್ಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಲ್. ಮುನಿಕೃಷ್ಣಪ್ಪ ಉಪಸ್ಥಿತರಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಲು ಸೂಕ್ತ ಮಾರ್ಗದರ್ಶನ ನೀಡಿದರು. NCC ವಿದ್ಯಾರ್ಥಿಗಳು, ಡಾಲ್ಫಿನ್ ವಿದ್ಯಾ ಸಂಸ್ಥೆಯ ಸಿಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರು ಹಾಗೂ ಎನ್‌ಸಿಸಿ ಅಧಿಕಾರಿ ಭರತ್, ಎಲ್ಲ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟದಲ್ಲಿ ರಾಷ್ಟ್ರೀಯ ಏಕತಾ ದಿವಸ – ಸರ್ದಾರ್ ಪಟೇಲ್ ಸ್ಮರಣಾರ್ಥ ವಾಕಥಾನ್

0
Sidlaghatta Ekta Diwas Run for Unity Walkathon

Sidlaghatta, chikkaballapur : ರಾಷ್ಟ್ರದ ಲೋಹಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ಶಿಡ್ಲಘಟ್ಟ ನಗರದಲ್ಲಿ ರಾಷ್ಟ್ರೀಯ ಏಕತಾ ದಿವಸವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.

ತಾಲ್ಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‘ಏಕತಾ ಓಟ’ (Run for Unity) ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ಎನ್. ಗಗನ ಸಿಂಧು ಮಾತನಾಡಿ, “ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮತ್ತು ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 550ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತ ರಾಷ್ಟ್ರದ ಭಾಗವನ್ನಾಗಿ ಮಾಡಿದ ಮಹಾನ್ ನಾಯಕರಾಗಿದ್ದರು. ಅವರ ಕಾರ್ಯದಿಂದಲೇ ಭಾರತದ ಏಕತೆ ಮತ್ತು ಸಮಗ್ರತೆಗೆ ಬುನಾದಿ ಬಿದ್ದಿತು,” ಎಂದು ಹೇಳಿದರು.

ಅವರು ಮುಂದುವರಿಸಿ, “ಈ ಓಟದ ಉದ್ದೇಶ ಜನರಲ್ಲಿ ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡುವ ಸಂಕಲ್ಪವನ್ನು ಮೂಡಿಸುವುದು. ಯುವಕರು ಸರ್ದಾರ್ ಪಟೇಲ್ ಅವರ ನಿಷ್ಠೆ, ಶಿಸ್ತು ಮತ್ತು ದೇಶಪ್ರೇಮದಿಂದ ಸ್ಫೂರ್ತಿ ಪಡೆಯಬೇಕು,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್, ಪಿ.ಎಸ್‌.ಐ ವೇಣುಗೋಪಾಲ್, ನಗರಸಭೆ ಪೌರಾಯುಕ್ತೆ ಜಿ. ಅಮೃತ, ಪೊಲೀಸ್ ಸಿಬ್ಬಂದಿ, ಕ್ರೀಡಾಪಟುಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ

0
sidlaghatta Govt Hospital Mental Health and Law Awareness

Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ತಾ.ಕಾ.ಸೇ.ಸ. ಶಿಡ್ಲಘಟ್ಟ ಅಧ್ಯಕ್ಷ ಶ್ರೀ ಮೊಹಮ್ಮದ್ ರೋಷನ್ ಷಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯದ ಮಹತ್ವ, ಮಾನಸಿಕ ಅಸ್ವಸ್ಥತೆಗಳ ಕುರಿತು ಜನಜಾಗೃತಿ ಹಾಗೂ ಕಾನೂನು ಸಹಾಯದ ಅಗತ್ಯತೆ ಕುರಿತಂತೆ ಉಪನ್ಯಾಸಗಳು ನಡೆದವು. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯರು ಹಲವು ಸಲಹೆಗಳನ್ನು ನೀಡಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ ಎಸ್, ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮನೋಹರ್, ಸಹಾಯಕ ಸರ್ಕಾರಿ ಅಭಿಯೋಜಕ ಮೊಹಮ್ಮದ್ ಖಾಜಾ, ಜಿಲ್ಲಾ ಮನೋವೈದ್ಯ ಡಾ. ಹೇಮಂತ್ ಕುಮಾರ್ ಸಿ, ಪ್ಯಾನೆಲ್ ವಕೀಲರು ಶ್ರೀಮತಿ ವೀಣಾ, ಚಂದ್ರಶೇಖರ್ ಮತ್ತು ತಾಸಿಂ ತಾಜ್, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಸ್. ದೇವರಾಜ್, ನಗರ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಕನ್ನಡ ರಾಜ್ಯೋತ್ಸವದ ಭವ್ಯ ಸಂಭ್ರಮಕ್ಕೆ ಸಜ್ಜು

0
Sidlaghatta Kannada Rajyotsava 2025

Sidlaghatta : ರೇಷ್ಮೆ ನಗರ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ನವೆಂಬರ್ 1ರಂದು 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಜ್ಜಾಗಿದೆ ಎಂದು ಸಮಿತಿಯ ಮುಖಂಡ ರಾಮಾಂಜನೇಯ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಕನ್ನಡಪರ ಸಂಘಟನೆಗಳು ಒಗ್ಗೂಡಿ ರಾಜ್ಯೋತ್ಸವವನ್ನು ಭವ್ಯವಾಗಿ ಆಚರಿಸಲು ಸಮ್ಮತಿಸಿವೆ ಎಂದು ಹೇಳಿದರು.

ರಾಜ್ಯೋತ್ಸವದ ಅಂಗವಾಗಿ ಬೆಳಗ್ಗೆ ನಗರದ ಬಸ್ ನಿಲ್ದಾಣದ ಬಳಿ ಧ್ವಜಾರೋಹಣ ನೆರವೇರಿಸಲಿದ್ದು, ನಂತರ 150 ಅಡಿ ಉದ್ದದ ಕನ್ನಡ ಧ್ವಜದ ಮೆರವಣಿಗೆ ಹಾಗೂ ಜಾನಪದ ನೃತ್ಯ ಕಲಾ ತಂಡಗಳ ಪ್ರದರ್ಶನ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದೆ. ತಾಯಿ ಭುವನೇಶ್ವರಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಗರದ ಮಧ್ಯಭಾಗದಲ್ಲಿ ಸಂಚರಿಸಿ ಕನ್ನಡಾಭಿಮಾನವನ್ನು ಸಾರಲಿದೆ.

ಮಧ್ಯಾಹ್ನ 12 ಗಂಟೆಗೆ ಅಶೋಕರಸ್ತೆಯ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಮುಂಭಾಗ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ.

ಸಂಜೆ 5 ಗಂಟೆಗೆ ಡಾ. ಪುನೀತ್ ರಾಜ್‌ಕುಮಾರ್ ವೇದಿಕೆಯಲ್ಲಿ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ರೂಪಕ ಹಾಗೂ ಸಂಗೀತ ಪ್ರದರ್ಶನಗಳು ನಡೆಯಲಿವೆ. ಈ ಸಂದರ್ಭದಲ್ಲಿ ತುಕಾಲಿ ಸ್ಟಾರ್ ಸಂತು ಮತ್ತು ಕಾಮಿಡಿ ಮ್ಯೂಸಿಕಲ್ ನೈಟ್ಸ್ ತಂಡದ ಕಲಾವಿದರು ಮನರಂಜನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೂರಿ (ಭಗತ್), ಸುನಿಲ್, ರೂಪಸಿರಮೇಶ್, ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ನಾರಾಯಣಸ್ವಾಮಿ, ಮುನಿರಾಜು (ಕುಟ್ಟಿ), ಶ್ರೀರಾಮ್, ಸೋಮಶೇಖರ್, ಲಕ್ಷ್ಮಿದೇವಿ, ಮಂಜುಳ ಎಂ, ಲಾವಣ್ಯ, ಮಂಜುಳ ಎ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-31/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 31/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 398
Qty: 21828 Kg
Mx : 707
Mn: 380
Avg: 594

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 15
Qty: 872 Kg
Mx : ₹ 783
Mn: ₹ 611
Avg: ₹ 700


For Daily Updates WhatsApp ‘HI’ to 7406303366

Sidlaghatta Silk Cocoon Market-30/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 30/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 325
Qty: 17434 Kg
Mx : 730
Mn: 333
Avg: 624

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 06
Qty: 314 Kg
Mx : ₹ 803
Mn: ₹ 511
Avg: ₹ 729


For Daily Updates WhatsApp ‘HI’ to 7406303366

ರೈತ ಸಂಘಟನೆಗಳು ರಾಜಕೀಯದಿಂದ ದೂರ ಇರಲಿ, ರೈತ ಪರ ಹೋರಾಟವೇ ಆದ್ಯತೆ ಆಗಲಿ

0
Sidlaghatta Rajya raita sangha Hasiru Sene representatives

Sidlaghatta, chikkaballapur : “ರೈತ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷದ ಮುಖವಾಣಿ ಆಗಬಾರದು. ರೈತರ ಹಿತಕ್ಕಾಗಿ ನಿಷ್ಠೆಯಿಂದ ಹೋರಾಡಿದಾಗ ಮಾತ್ರ ಸಂಘಟನೆಗೂ ಗೌರವ, ಹೋರಾಟಕ್ಕೂ ಫಲ ಸಿಗುತ್ತದೆ,” ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಜಿಜಿಹಳ್ಳಿ ಬಿ. ನಾರಾಯಣಸ್ವಾಮಿ ಹೇಳಿದರು.

ನಗರದ ಶ್ರೀ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಬುಧವಾರ ನಡೆದ ತಾಲ್ಲೂಕು ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಇಂದು ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ಒತ್ತಿಹೇಳಿದರು.

“ರೈತ ಸಂಘದ ಹೋರಾಟಗಳು ರಾಜಕೀಯಕ್ಕಾಗಿರಬಾರದು, ರೈತರ ಹಿತಕ್ಕಾಗಿ ಇರಬೇಕು. ಸಂಘಟನೆಯ ಪದಾಧಿಕಾರಿಗಳು ಕೈ ಮತ್ತು ಬಾಯಿ ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು, ಆಗ ಮಾತ್ರ ರೈತರ ವಿಶ್ವಾಸ ಸಿಗುತ್ತದೆ.” ಎಂದು ಅವರು ಹೇಳಿದರು.

ನಗರದ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಅವರು, “ಶಿಡ್ಲಘಟ್ಟ ನಗರವು ಅಭಿವೃದ್ಧಿಯಲ್ಲಿ ಶೂನ್ಯ ಸಾಧಿಸಿದೆ. ನಗರಸಭೆ ನಾಮಮಾತ್ರಕ್ಕೆ ಇದ್ದು, ಸ್ವಚ್ಛತೆಯೇ ಕಾಣದ ಸ್ಥಿತಿ ಉಂಟಾಗಿದೆ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಹೊಸ ತಾಲ್ಲೂಕು ಅಧ್ಯಕ್ಷರಾಗಿ ಬಿ.ಕೆ. ಮುನಿರಾಜು ಆಯ್ಕೆಯಾಗಿದರು. ಉಪಾಧ್ಯಕ್ಷರಾಗಿ ಕೆಂಪೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಎಸ್, ಕಾನೂನು ಸಲಹೆಗಾರರಾಗಿ ಲಕ್ಷ್ಮಿಕಾಂತ್ ಪಿ, ಖಜಾಂಚಿಯಾಗಿ ಎಂ.ಟಿ. ಶ್ರೀನಿವಾಸ್, ಮಹಿಳಾ ಪ್ರತಿನಿಧಿಗಳಾಗಿ ಎಸ್.ಎಂ. ಅಮೃತ ಮತ್ತು ಗಾಯತ್ರಿ ಎನ್ ಅವರನ್ನು ಆಯ್ಕೆ ಮಾಡಲಾಯಿತು.

ಇದಲ್ಲದೆ ಸಂಘಟನಾ ಮಾರ್ಗದರ್ಶಕರಾಗಿ ಎನ್. ವೆಂಕಟೇಶ್, ಪ್ರಧಾನ ಸಂಚಾಲಕರಾಗಿ ಬಿ.ಕೆ. ಗೋವಿಂದರಾಜು, ಸಂಘಟನಾ ಸಂಚಾಲಕರಾಗಿ ಶಿವಣ್ಣ, ಸಹಕಾರ್ಯದರ್ಶಿಯಾಗಿ ಬಿ.ಪಿ. ಸತೀಶ್ ಕುಮಾರ್, ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮುರಳಿಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ತಾಲ್ಲೂಕಿನ ವಿವಿಧ ಹಳ್ಳಿಗಳ ರೈತರು, ಕಾರ್ಯಕರ್ತರು ಮತ್ತು ಸಂಘಟನೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!