19.1 C
Sidlaghatta
Wednesday, December 24, 2025
Home Blog Page 3

ತೊಂಡೆಬಾವಿಯಿಂದ ತಿರುಪತಿಗೆ 25ನೇ ವರ್ಷದ ಪಾದಯಾತ್ರೆ

0
Sidlaghatta Tirupati Pilgrimage by walk

Sidlaghatta : ಯುವ ಪೀಳಿಗೆಯು ನಮ್ಮ ದೇಶದ ಶ್ರೀಮಂತ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸಂಪ್ರದಾಯಗಳನ್ನು ಪಾಲಿಸಬೇಕು. ಆ ಮೂಲಕ ಸುಸಂಸ್ಕೃತ ಬದುಕು ನಮ್ಮದಾಗಬೇಕು ಎಂದು ತಿರುಪತಿಯ ಪಾದಯಾತ್ರಿ ಶ್ರೀಧರಾಚಾರಿ ತಿಳಿಸಿದರು. ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿಯಿಂದ ತಿರುಪತಿಗೆ ಹಮ್ಮಿಕೊಂಡಿರುವ 25ನೇ ವರ್ಷದ ಪಾದಯಾತ್ರೆಯ ನೇತೃತ್ವ ವಹಿಸಿರುವ ಅವರು, ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ವೈ. ಹುಣಸೇನಹಳ್ಳಿಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಷಾದನೀಯ. ಇದರಿಂದಾಗಿ ನಮ್ಮ ಹಬ್ಬಗಳು ಮತ್ತು ಹಿರಿಯರ ಬಗ್ಗೆ ಗೌರವದ ಮನೋಭಾವ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ನಡೆಯುತ್ತಿರುವ ಇತ್ತೀಚಿನ ಅಹಿತಕರ ಘಟನೆಗಳೇ ಇದಕ್ಕೆ ಸಾಕ್ಷಿ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಸಂಪ್ರದಾಯಗಳನ್ನು ಗೌರವಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಅವರು ಯುವಕರಿಗೆ ಕಿವಿಮಾತು ಹೇಳಿದರು.

ತೊಂಡೆಬಾವಿಯಿಂದ ಆರಂಭವಾಗಿರುವ ಈ ಪಾದಯಾತ್ರೆಯಲ್ಲಿ ಮಂಚೇನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು 150ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದಾರೆ. ಡಿ.23 ರಂದು ಈ ತಂಡ ತಿರುಪತಿ ತಲುಪಿ ಶ್ರೀನಿವಾಸನ ದರ್ಶನ ಪಡೆಯಲಿದೆ. ವಿಶೇಷವೆಂದರೆ, ಈ ಬಾರಿ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ವೃದ್ಧರು ಭಾಗವಹಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಈ ಯಾತ್ರೆಯಲ್ಲಿ ಮಾರ್ಕೆಟ್ ಮೋಹನ್, ವಿಜಯ ಶೇಖರ್‌ರೆಡ್ಡಿ, ವೆಂಕಟೇಶ ಬಚ್ಚಹಳ್ಳಿ, ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-18/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 18/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 263
Qty: 13379 Kg
Mx : 779
Mn: 577
Avg: 710

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 10
Qty: 545 Kg
Mx : ₹ 887
Mn: ₹ 813
Avg: ₹ 848

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟದ ಗೆಜ್ಜೆಗಾನಹಳ್ಳಿಯಲ್ಲಿ ಹಕ್ಕ-ಬುಕ್ಕರ ಕಾಲದ ಶಾಸನ ಪತ್ತೆ

0
Vijayanagara Empire Inscription Found at Sidlaghatta Gejjiganahalli

Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗೆಜ್ಜೆಗಾನಹಳ್ಳಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ (Vijayanagara Empire) ಆರಂಭಿಕ ಕಾಲದ, ಅಂದರೆ ಹಕ್ಕ-ಬುಕ್ಕರ ಆಳ್ವಿಕೆಯ ಕಾಲದ ಅತ್ಯಂತ ಅಪರೂಪದ ಅಪ್ರಕಟಿತ ತಮಿಳು ಶಾಸನವೊಂದು ಪತ್ತೆಯಾಗಿದೆ. ಶಾಸನತಜ್ಞರಾದ ಕೆ.ಧನಪಾಲ್ ಮತ್ತು ಅಪ್ಪೇಗೌಡನಹಳ್ಳಿಯ ಎ.ಎಂ.ತ್ಯಾಗರಾಜ್ ಅವರು ಈ ಮಹತ್ವದ ಸಂಶೋಧನೆಯನ್ನು ಮಾಡಿದ್ದಾರೆ.

700 ವರ್ಷಗಳ ಹಿಂದಿನ ಇತಿಹಾಸ: ಗ್ರಾಮದ ಬೇಲಿಯಲ್ಲಿ ಹುದುಗಿಹೋಗಿದ್ದ ಈ ಶಾಸನದ ಕಲ್ಲನ್ನು ಗ್ರಾಮಸ್ಥರ ನೆರವಿನಿಂದ ಹೊರತೆಗೆದು ವೀರಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇರಿಸಲಾಗಿದೆ. ಈ ಶಾಸನವು ಕ್ರಿ.ಶ. 1348 ರ ಜುಲೈ 7 ರ ಸೋಮವಾರದ ಕಾಲಮಾನಕ್ಕೆ ಸೇರಿದ್ದಾಗಿದೆ (ಶಕ ವರುಷ 1270). ಆ ಸಮಯದಲ್ಲಿ ವಿಜಯನಗರದ ಸ್ಥಾಪಕರಾದ ಶ್ರೀ ವೀರ ಹರಿಯಪ್ಪ ಒಡೆಯರು ಮತ್ತು ಬುಕ್ಕಣ್ಣ ಒಡೆಯರು ಒಟ್ಟಾಗಿ ಸಾಮ್ರಾಜ್ಯವನ್ನು ಆಳುತ್ತಿದ್ದರು ಎಂಬ ಇತಿಹಾಸಕ್ಕೆ ಈ ಶಾಸನವು ಪುಷ್ಟಿ ನೀಡುತ್ತದೆ.

ಗೆಜ್ಜೆಗಾನಹಳ್ಳಿಯ ಹಳೆಯ ಹೆಸರು ‘ಕಚ್ಛೆಗಾನಪಲ್ಲಿ’: ಈ ತಮಿಳು ಶಾಸನದಲ್ಲಿ ಪ್ರಸ್ತುತ ಗೆಜ್ಜೆಗಾನಹಳ್ಳಿಯನ್ನು ‘ಕಚ್ಛೆಗಾನಪಲ್ಲಿ’ ಎಂದು ಉಲ್ಲೇಖಿಸಲಾಗಿದೆ. ಅಂಬಡಕ್ಕಿ ನಾಡಿನ ಸಾಮಂತನಾಗಿದ್ದ ನರಲೋಕ ಗಂಡ ಮೈಲೇಯ ನಾಯಕನ ಕಾಲದಲ್ಲಿ, ಸ್ಥಳೀಯ ಆಳ್ವಿಕೆಗಾರರು ರಾಮಣ್ಣನ ಮಗ ನೀಲಪ್ಪನಿಗೆ ಕಚ್ಛೆಗಾನಪಲ್ಲಿ ಮತ್ತು ಮರುಗೈಪಲ್ಲಿಯ ಕೆರೆಯ ಕೆಳಗೆ ಜಮೀನನ್ನು ದಾನ ನೀಡಿದ ವಿವರಗಳು ಈ ಶಾಸನದಲ್ಲಿವೆ.

ಅಂಬಡಕ್ಕಿ ನಾಡು ಮತ್ತು ತಮಿಳು ಭಾಷೆಯ ಪ್ರಭಾವ

ಕನ್ನಡ ನಾಡಿನಲ್ಲಿ ತಮಿಳು ಶಾಸನ ಏಕೆ? 10ನೇ ಶತಮಾನದಲ್ಲಿ ದಕ್ಷಿಣ ಕರ್ನಾಟಕವನ್ನು ಚೋಳರು ಗೆದ್ದುಕೊಂಡಿದ್ದರಿಂದ ಇಲ್ಲಿ ತಮಿಳು ಅಧಿಕಾರಿಗಳು ಮತ್ತು ಶಿಲ್ಪಿಗಳ ಪ್ರಭಾವ ಹೆಚ್ಚಿತ್ತು. ಚೋಳರು ಹೋದ ಮೇಲೂ ಹೊಯ್ಸಳ ಮತ್ತು ಆರಂಭಿಕ ವಿಜಯನಗರದ ಕಾಲದವರೆಗೆ ಈ ಭಾಗದಲ್ಲಿ ತಮಿಳು ವ್ಯವಹಾರದ ಭಾಷೆಯಾಗಿ ಉಳಿದುಕೊಂಡಿತ್ತು ಎಂದು ಇತಿಹಾಸಕಾರರು ವಿವರಿಸುತ್ತಾರೆ.

ಅಂಬಡಕ್ಕಿ ನಾಡು ಎಂದರೇನು? 13ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ವಿಭಜನೆಯಾದಾಗ, ಕೈವಾರ ನಾಡಿನ ಒಂದು ಭಾಗವನ್ನು ‘ಅಂಬಡಕ್ಕಿ ನಾಡು’ ಎಂದು ಕರೆಯಲಾಗುತ್ತಿತ್ತು. ಇದರ ಆಡಳಿತ ಕೇಂದ್ರ ಇಂದಿನ ಉಪ್ಪಾರಪೇಟೆಯಾಗಿತ್ತು. ವಿಜಯಪುರದಿಂದ ಹಿಡಿದು ಶಿಡ್ಲಘಟ್ಟದ ಗುಡಿಹಳ್ಳಿಯವರೆಗೆ ಈ ನಾಡು ವ್ಯಾಪಿಸಿತ್ತು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-17/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 17/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 230
Qty: 11248 Kg
Mx : 768
Mn: 575
Avg: 696

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 14
Qty: 746 Kg
Mx : ₹ 880
Mn: ₹ 667
Avg: ₹ 784


For Daily Updates WhatsApp ‘HI’ to 7406303366

ಭಾರತಕ್ಕೆ 5 ಚಿನ್ನದ ಪದಕ ಗೆದ್ದ ಮೇಲೂರಿನ ಯುವ ಪ್ರತಿಭೆ ವಜ್ರಲ್ ಗೌಡ

0
Power Lifting Gold Medal Winner Vajral Gowda

Melur, Sidlaghatta : 17 ವರ್ಷದ ಯುವ ಪ್ರತಿಭೆ, ಮೇಲೂರಿನ ವಜ್ರಲ್ ಗೌಡ ಅವರು ಪವರ್ ಲಿಫ್ಟಿಂಗ್ (Power Lifting) ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು (Five Gold Medals) ಗೆದ್ದು ಭಾರತವನ್ನು ಪ್ರತಿನಿಧಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಮೇಲೂರಿನ ಜನತೆ ಅಭಿನಂದಿಸಿದ್ದಾರೆ.

ಸಂಜಯ ನಗರದ ಪರ್ಹ್ಹಾನ್ ಹುಸೇನ್ ಎಂಬ ಗುರುಗಳ ಮೂಲಕ ತರಬೇತಿ ಪಡೆದಿರುವ ವಜ್ರಲ್, ಈವರೆಗೆ ರಾಷ್ಟ್ರೀಯ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಸಾಧನೆ ಮಾಡಿದ ನಂತರ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

“ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವುದೆಂದರೆ ಸಂತೋಷ ತರುತ್ತದೆ. ಮಾಸ್ಕೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನಾನು ಐದು ಗೋಲ್ಡ್ ಮೆಡಲ್ಸ್ ಸಾಧನೆ ಮಾಡಿದ್ದೇನೆ. ನನ್ನ ಈ ಸಾಧನೆಯ ಹಿಂದೆ ನನ್ನ ತಾಯಿ ಮತ್ತು ಸಹೋದರಿಯರ ಅಪಾರವಾದ ಬೆಂಬಲವಿದೆ” ಎಂದು ವಜ್ರಲ್ ಗೌಡ ಹೆಮ್ಮೆಯಿಂದ ಹೇಳುತ್ತಾರೆ.

“ಹದಿನಾರನೇ ವಯಸ್ಸಿನಿಂದಲೇ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಏನಾದರೂ ವಿಶೇಷವಾದ ಸಾಧನೆ ಮಾಡಬೇಕೆಂಬ ಹಂಬಲದಿಂದ ಅಭ್ಯಾಸದಲ್ಲಿ ತೊಡಗಿದ್ದೆ. ಪರಿಣಾಮವಾಗಿ ವರ್ಲ್ಡ್ ಕಪ್‌ನಲ್ಲಿ ಐದು ಮೆಡಲ್ ಗೆಲ್ಲಲು ಸಾಧ್ಯವಾಗಿದೆ. ರಷ್ಯಾ, ಖಜಕಿಸ್ಥಾನ ಸೇರಿದಂತೆ ಏಳು ದೇಶಗಳ ಸ್ಪರ್ಧಿಗಳ ನಡುವೆ ಸ್ಪರ್ಧೆ ಇತ್ತು. ನಾನು ಭಾರತ ದೇಶದ ಪ್ರತಿನಿಧಿಯಾಗಿ ತೋರಿದ ಉತ್ತಮ ಸಾಧನೆಯ ಕಾರಣಕ್ಕಾಗಿ ಈ ಗುರಿ ತಲುಪಲು ಸಾಧ್ಯವಾಯಿತು” ಎಂದು ಅವರು ತಮ್ಮ ಯಶಸ್ಸಿನ ಹಿಂದಿನ ಶ್ರಮವನ್ನು ವಿವರಿಸಿದರು.

ವಜ್ರಲ್ ಗೌಡ ಅವರು ಮೇಲೂರಿನಿಂದ ಎಂ.ಎಲ್.ಸಿ ಆಗಿದ್ದ ನಂಜುಂಡಪ್ಪ ಅವರ ಮರಿಮೊಮ್ಮಗನಾಗಿದ್ದು, ಸಣ್ಣ ವಯಸ್ಸಿನಲ್ಲಿ ತಂದೆ ವಿಕ್ರಂ ಅವರನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದಿದ್ದಾರೆ.

ಕಂಬದಹಳ್ಳಿಯ ಬಿಜೆಪಿ ಮುಖಂಡ ಸುರೇಂದ್ರ ಗೌಡ ಮತ್ತು ಕಾಂಗ್ರೆಸ್ ಮುಖಂಡ ಕೆ. ಮಂಜುನಾಥ್ ಸೇರಿದಂತೆ ಹಲವು ಗಣ್ಯರು, ಅವರ ಈ ಅಮೋಘ ಸಾಧನೆಯನ್ನು ಶ್ಲಾಘಿಸಿದರು. ಕೆ. ಮಂಜುನಾಥ್ ಅವರು ವಜ್ರಲ್ ಗೌಡ ಅವರನ್ನು ಮನೆಗೆ ಆಹ್ವಾನಿಸಿ ಸಿಹಿ ತಿನ್ನಿಸಿ ಗೌರವಿಸಿ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇಂತಹ ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಆಶಿಸಿದರು.

ಪವರ್ ಲಿಫ್ಟಿಂಗ್‌ನಲ್ಲಿ ಅಮೋಘ ಸಾಧನೆ ತೋರಿರುವ ಈ ಜಿಲ್ಲೆಯ ಅಪರೂಪದ ಪ್ರತಿಭೆಯನ್ನು ಮೇಲೂರಿನ ಗ್ರಾಮಸ್ಥರು ಪ್ರೀತಿಯಿಂದ ಬರಮಾಡಿಕೊಂಡು ಹಾರ ತುರಾಯಿ ಹಾಕುವ ಮೂಲಕ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಬಾಕಿ ಉಳಿಸಿಕೊಂಡ ಅಂಗಡಿಗಳಿಗೆ ಬೀಗ; ಅಧಿಕಾರಿಗಳಿಗೆ ಪೌರಾಯುಕ್ತೆ ಅಮೃತ ತರಾಟೆ

0
Sidlaghatta Municipality Shops Rent Notice

Sidlaghatta : ಶಿಡ್ಲಘಟ್ಟ ನಗರಸಭೆಗೆ (City Municipal Council) ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಅಂಗಡಿ ಮಳಿಗೆಗಳ ವಿರುದ್ಧ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತ ಅವರು ಗುಡುಗಿದ್ದು, ಬಾಡಿಗೆ ಕಟ್ಟದ ನಾಲ್ಕೈದು ಅಂಗಡಿಗಳಿಗೆ ಸ್ಥಳದಲ್ಲೇ ಬೀಗ ಜಡಿದು ಎಚ್ಚರಿಕೆ ನೀಡಿದ್ದಾರೆ.

ನಗರದ KSRTC ಬಸ್ ನಿಲ್ದಾಣದ ಬಳಿಯಿರುವ ಹೊಸ ಐ.ಡಿ.ಎಸ್.ಎಂ.ಟಿ.ಯ 27 ಅಂಗಡಿ ಮಳಿಗೆಗಳು ಹಾಗೂ ಸಂತೆ ಬೀದಿ ರಸ್ತೆಯಲ್ಲಿರುವ ಎರಡೂ ಕಡೆಯ ಅಂಗಡಿಗಳಿಗೆ ಭೇಟಿ ನೀಡಿದ ಪೌರಾಯುಕ್ತೆ ಮತ್ತು ಸಿಬ್ಬಂದಿ ಬಾಕಿ ಮೊತ್ತವನ್ನು ಸ್ಥಳದಲ್ಲೇ ಲೆಕ್ಕಾಚಾರ ಮಾಡಿ ಕೂಡಲೇ ಹಣ ಪಾವತಿಸುವಂತೆ ಮಾಲೀಕರಿಗೆ ಸೂಚಿಸಿದರು.

ಈ ವೇಳೆ ಕೆಲವು ಅಂಗಡಿಗಳು ವರ್ಷಗಟ್ಟಲೆ ಬಾಡಿಗೆ ಹಣ ಕಟ್ಟದಿರುವುದು ಬೆಳಕಿಗೆ ಬಂದ ಕೂಡಲೇ, ಪೌರಾಯುಕ್ತರು ನಗರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ನಗರಸಭೆಗೆ ವರ್ಷಗಟ್ಟಲೆ ಕಟ್ಟಬೇಕಾದ ಹಣ ಕಟ್ಟಿಲ್ಲ ಅಂದ್ರೆ ಏನ್ರಿ ಮಾಡ್ತಿದ್ದೀರಿ?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿ, ಬಾಕಿ ಉಳಿಸಿಕೊಂಡ ಅಂಗಡಿಗಳಿಗೆ ದಿಡೀರ್ ಬೀಗ ಹಾಕಿ ಬಂದ್ ಮಾಡುವಂತೆ ಸ್ಥಳದಲ್ಲೇ ಸೂಚಿಸಿದರು.

ಬೀಗ ಹಾಕಲು ಬೀಗಗಳು ಇಲ್ಲದೆ ಅಧಿಕಾರಿಗಳು ಪರದಾಡುತ್ತಿದ್ದಾಗ, ಪೌರಾಯುಕ್ತರೇ ಹೊಸ ಬೀಗಗಳನ್ನು ತರಲು ಹಣ ನೀಡಲು ಮುಂದಾಗಿದ್ದು ಗಮನಾರ್ಹವಾಗಿತ್ತು. ಹೆಚ್ಚು ಬಾಕಿ ಉಳಿಸಿಕೊಂಡ ಕೆಲವು ಅಂಗಡಿಗಳಿಗೆ ಬೀಗ ಹಾಕಿ, ಕಡಿಮೆ ಬಾಕಿ ಇರುವ ಅಂಗಡಿಗಳ ಗೋಡೆಗೆ ನೋಟಿಸ್ ಅಂಟಿಸಲಾಯಿತು.

ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ಪೌರಾಯುಕ್ತೆ ಜಿ. ಅಮೃತ ಅವರು, “ನಗರಸಭೆ ಎಲ್ಲ ಸವಲತ್ತುಗಳನ್ನು ನೀಡುತ್ತದೆ. ಪ್ರತಿ ತಿಂಗಳೂ ಬಾಡಿಗೆ ಸಮಯಕ್ಕೆ ಸರಿಯಾಗಿ ಪಾವತಿಸುವುದು ನಿಮ್ಮ ಜವಾಬ್ದಾರಿ. ತಿಂಗಳುಗಟ್ಟಲೆ, ಕೆಲವರು ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡರೆ ಹೇಗೆ. ಇದು ತಪ್ಪು. ಇನ್ನು ಮುಂದೆ ಬಾಡಿಗೆ ಬಾಕಿ ಉಳಿಸಿಕೊಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಮುಂದೆ ಬಾಡಿಗೆಯ ಟೆಂಡರ್ ಕರೆದಾಗ ಈಗ ಬಾಕಿ ಉಳಿಸಿಕೊಂಡಿರುವವರನ್ನು ಭಾಗವಹಿಸಲು ಬಿಡುವುದಿಲ್ಲ” ಎಂದು ಕಟುವಾಗಿ ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆಯ ಕಂದಾಯ ಅಧಿಕಾರಿ ನಾಗರಾಜ, ಕಂದಾಯ ನಿರೀಕ್ಷಕರಾದ ಸಂಜೀವ್ ಕುಮಾರ್, ಮೊಹಮದ್ ಅತೀಕ್ ಉಲ್ಲಾ, ಕರ ವಸೂಲಿಗಾರರಾದ ಅಮರನಾರಾಯಣಸ್ವಾಮಿ, ಶ್ರೀನಿವಾಸ್.ಜಿ, ನಾರಾಯಣಸ್ವಾಮಿ, ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ಹಾಗೂ ಶೇಖ್ ಆರಿಫ್ ಸೇರಿದಂತೆ ನಗರಸಭೆಯ ಸಿಬ್ಬಂದಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-16/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 16/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 259
Qty: 12808 Kg
Mx : 785
Mn: 398
Avg: 679

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 16
Qty: 996 Kg
Mx : ₹ 913
Mn: ₹ 708
Avg: ₹ 819


For Daily Updates WhatsApp ‘HI’ to 7406303366

ಗೊರಮಡಗುವಿನಲ್ಲಿ ಚುಟುಕು ಕ್ರಿಕೆಟ್ ಟೂರ್ನಮೆಂಟ್

0
Sidaghatta Goramadugu Cricket Tournament

Goramadugu, Sidlaghatta : ಡೆಯನ್ನು ಕ್ರೀಡಾ ಸ್ಫೂರ್ತಿಯೊಂದಿಗೆ ಆಡಬೇಕು. ಕೇವಲ ಗೆಲುವಿಗಾಗಿ ಆಡುವುದಲ್ಲ, ಬದಲಾಗಿ ತಂಡದ ಮನೋಭಾವ, ಪರಸ್ಪರ ಗೌರವ, ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಗುಣಗಳು, ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸತೀಶ್ ಅವರು ಕರೆ ನೀಡಿದರು. ತಾಲ್ಲೂಕಿನ ಗೊರಮಡಗು ಗ್ರಾಮದಲ್ಲಿ ಯುವ ಮುಖಂಡ ಗೋಪಾಲ ಗೌಡ ಹಾಗೂ ಪತ್ರಕರ್ತ ಮೈತ್ರಿ ಲೋಕೇಶ್ ಅವರ ಸಂಯುಕ್ತ ಆಯೋಜನೆಯಲ್ಲಿ ನಡೆದ ಚುಟುಕು ಕ್ರಿಕೆಟ್ ಟೂರ್ನಮೆಂಟ್ (Cricket Tournament) ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯು ಕಲೆ ಮತ್ತು ಜೀವನದ ಮೌಲ್ಯಗಳನ್ನು ಬೆಳೆಸುತ್ತದೆ ಮತ್ತು ಯುವಜನತೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಗುರಿ ಇರಬೇಕು. ಏನಾದರೂ ಸಾಧಿಸಬೇಕೆಂಬ ಛಲ ಯುವಕರಲ್ಲಿ ಇರಬೇಕು. ಜೂಜು ಆಡುವುದು, ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದು ತಪ್ಪು ಎಂದು ಎಚ್ಚರಿಕೆ ನೀಡಿದ ಸಬ್ ಇನ್ಸ್‌ಪೆಕ್ಟರ್ ಸತೀಶ್ ಅವರು, ಗ್ರಾಮದಲ್ಲಿ ಯಾರೂ ಸಹ ಮದ್ಯವನ್ನು ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಸಂಪೂರ್ಣ ಟೂರ್ನಮೆಂಟ್‌ಗೆ ಅಗತ್ಯ ಪ್ರೋತ್ಸಾಹವನ್ನು ಆಯೋಜಕರಾದ ಗೋಪಾಲ ಗೌಡ ಮತ್ತು ಮೈತ್ರಿ ಲೋಕೇಶ್ ಒದಗಿಸಿದ್ದರು. ಟೂರ್ನಮೆಂಟ್‌ನಲ್ಲಿ ಮೊದಲ ಬಹುಮಾನ ₹10,000 ಮತ್ತು ಎರಡನೇ ಬಹುಮಾನ ₹5,000 ನಿಗದಿಪಡಿಸಲಾಗಿತ್ತು.

ಟೂರ್ನಮೆಂಟ್ ಫಲಿತಾಂಶದಲ್ಲಿ, ಆರ್ಮಿ 11 ತಂಡವು ಪ್ರಥಮ ಬಹುಮಾನ, ಒಜಿ ತಂಡವು ದ್ವಿತೀಯ ಬಹುಮಾನ, ಯಂಗ್ ಸ್ಟಾರ್ಸ್ ತಂಡವು ಮೂರನೇ ಬಹುಮಾನ ಹಾಗೂ ಕಿಂಗ್ಸ್ ತಂಡವು ನಾಲ್ಕನೇ ಬಹುಮಾನ ಪಡೆದುಕೊಂಡವು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ಮುನಿ ನಾರಾಯಣಸ್ವಾಮಿ, ಡಿಶ್ ಮಂಜುನಾಥ್, ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಇ. ವಿಶ್ವನಾಥ್, ವಕೀಲ ಲಕ್ಷ್ಮೀನರಸಿಂಹ, ಬಿಲ್ ಕಲೆಕ್ಟರ್ ಸುಬ್ರಮಣಿ, ಶಿವರಾಜ್, ವೆಂಕಟೇಶ್, ಮುನಿಕೃಷ್ಣ, ಮುನಿಯಪ್ಪ, ಜೆಸಿಬಿ ಚೇತನ್, ವಿಜಯ್ ಕುಮಾರ್, ಟ್ರ್ಯಾಕ್ಟರ್ ಮಧು, ಅಜಿತ್, ಗೌತಮ್, ಚೇತನ್, ಗಂಗರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-15/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 15/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 218
Qty: 10454 Kg
Mx : 771
Mn: 550
Avg: 684

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 06
Qty: 217 Kg
Mx : ₹ 914
Mn: ₹ 688
Avg: ₹ 818


For Daily Updates WhatsApp ‘HI’ to 7406303366

ಹಿಂದೂ ರುದ್ರಭೂಮಿ ದುಸ್ಥಿತಿ: ಶವ ಸಂಸ್ಕಾರಕ್ಕೆ ತೊಂದರೆ; ಶಾಸಕರಿಗೆ ದುರಸ್ತಿಗಾಗಿ ಮನವಿ

0
Hindu Burial Ground repairment request to MLA B N Ravikumar

Sidlaghatta : ಶಿಡ್ಲಘಟ್ಟ ನಗರದ ಕನಕನಗರ ಸಮೀಪದಲ್ಲಿರುವ ಹಿಂದೂ ರುದ್ರಭೂಮಿಯು (Hindu Burial Ground Shidlaghatta) ಸಂಪೂರ್ಣ ದುಸ್ಥಿತಿಗೆ ತಲುಪಿದ್ದು, ಇದನ್ನು ಬಳಕೆಗೆ ಯೋಗ್ಯವಾಗುವಂತೆ ದುರಸ್ತಿ ಮಾಡಿಕೊಡುವಂತೆ ವಿವಿಧ ಸಮುದಾಯಗಳ ಪ್ರಮುಖರು ಶಾಸಕ ಬಿ.ಎನ್. ರವಿಕುಮಾರ್ ಅವರಲ್ಲಿ ಮನವಿ ಸಲ್ಲಿಸಿದ್ದಾರೆ. ಗಿಡಗಂಟೆಗಳು ಬೆಳೆದಿರುವ, ಶೌಚಾಲಯ ಮತ್ತು ಸ್ನಾನಗೃಹಗಳು ಹಾಳಾಗಿ ನೀರಿನ ಸಂಪರ್ಕ ಕಡಿತಗೊಂಡಿರುವ ರುದ್ರಭೂಮಿಯಲ್ಲಿ ಶವ ಸಂಸ್ಕಾರ (Shava Samskara) ಮಾಡಲು ತೀವ್ರ ತೊಂದರೆಯಾಗುತ್ತಿದೆ ಎಂದು ಸಮುದಾಯದ ಮುಖಂಡರು ದೂರಿದ್ದಾರೆ.

ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಈ ರುದ್ರಭೂಮಿಯ ಕಾಂಪೌಂಡ್ ಬಿದ್ದು ಹೋಗಿದ್ದು, ಆವರಣದಲ್ಲಿ ಹುಳು-ಉಪ್ಪಟೆಗಳು ಸೇರಿಕೊಂಡಿವೆ. ಈ ಸಮಸ್ಯೆಗಳನ್ನು ನಿವಾರಿಸಿ, ರುದ್ರಭೂಮಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಎಸ್. ರವಿ ಮತ್ತು ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷ ಮಹೇಶ್ ಬಾಬು ಸೇರಿದಂತೆ ಹಲವರು ಮೇಲೂರು ಗ್ರಾಮದ ಗೃಹ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಸಮುದಾಯದ ಪ್ರಮುಖರ ಅಹವಾಲುಗಳನ್ನು ಆಲಿಸಿದ ಶಾಸಕ ಬಿ.ಎನ್. ರವಿಕುಮಾರ್ (MLA BN Ravikumar Shidlaghatta) ಅವರು, ಕೂಡಲೇ ರುದ್ರಭೂಮಿಯ ಸ್ಥಳ ಪರಿಶೀಲನೆ ನಡೆಸುವುದಾಗಿ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ರುದ್ರಭೂಮಿಯನ್ನು ಸಂಪೂರ್ಣವಾಗಿ ದುರಸ್ತಿಪಡಿಸಿ, ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್.ವಿ. ನಾಗರಾಜ್ ರಾವ್, ಅರ್ಚಕ ವೈ.ಎನ್. ದಾಶರಥಿ ಭಟ್ಟಾಚಾರ್ಯ, ನಾಗರಾಜಶರ್ಮ ರಾಜೇಶ್ ಸೇರಿದಂತೆ ವಿವಿಧ ಪ್ರಮುಖರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!