ಅತ್ಯುತ್ತಮ ಕೃಷಿ ಉದ್ಯಮ ಶೀಲ ಪ್ರಶಸ್ತಿ

- Advertisement -
- Advertisement -

ತಾಲ್ಲೂಕಿನ ಭಕ್ತರಹಳ್ಳಿಯ ಅಂಬರೀಷ್ ಅವರ ಕೃಷಿ ಉದ್ದಿಮೆ ಕ್ಷೇತ್ರದಲ್ಲಿನ ಸೇವೆಗಾಗಿ ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಮತ್ತು ಕರ್ನಾಟಕ ಬ್ಯಾಂಕ್, ಅತ್ಯುತ್ತಮ ಕೃಷಿ ಉದ್ಯಮ ಶೀಲ ಪ್ರಶಸ್ತಿ ನೀಡಿ ಗೌರವಿಸಿವೆ.
ಮೂಲತಃ ಕೃಷಿ ಪದವೀಧರರಾದ ಭಕ್ತರಹಳ್ಳಿ ಅಂಬರೀಷ್, ಈ ಟಿ.ವಿ ಅನ್ನದಾತ ಕಾರ್ಯಕ್ರಮದಲ್ಲಿ 5 ವರ್ಷ ಸೇವೆ ಸಲ್ಲಿಸಿ, ಕಳೆದ 15 ವರ್ಷಗಳಿಂದ ಸೃಷ್ಟಿ ಮೀಡಿಯ ಸಂಸ್ಥೆಯನ್ನು ನಡೆಸುತ್ತದ್ದಾರೆ. ರೈತರಿಗೆ ಅನುಕೂಲವಾದ ಕೃಷಿ ಮಾಹಿತಿ ಒಳಗೊಂಡ ೩೦೦ ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳ ನಿರ್ಮಾಣ ಮಾಡಿದ್ದಾರೆ. ರೈತರಿಗೆ ತರಬೇತಿ ಕಾರ್ಯಕ್ರಮಗಳ ಆಯೋಜನೆ, ರೈತರಿಗೆ ಅಗತ್ಯ ಮಾಹಿತಿ ಪೂರೈಕೆ, ನಿರುದ್ಯೋಗಿಗಳಿಗೆ ಸ್ವಾವಲಂಬಿ ಉದ್ಯೋಗ ನಡೆಸಲು ಮಾರ್ಗದರ್ಶನ ಮಾಡುತ್ತಿದ್ದಾರೆ.
2017 ರಲ್ಲಿ ಕೇಂದ್ರ ಸರ್ಕಾರದಿಂದ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಕೃಷಿ ಉದ್ದಿಮೆದಾರ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ. ಕೃಷಿ ಪದವೀಧರನಾಗಿ ಸ್ವಾವಲಂಬಿ ಉದ್ದಿಮೆದಾರನಾಗಿ ರೂಪುಗೊಂಡಿರುವ ಇವರ ಸಾಧನೆ ಮತ್ತು ಕೇಉಷಿ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಗಣ್ಯರಾದ ಎ.ಪಿ.ಆಚಾರ್, ಉಲ್ಲಾಸ್ ಕಾಮತ್, ಪ್ರವೀಣ್ ಕಾಮತ್, ಡಾ.ಪಿ.ಚಂದ್ರಶೇಖರ ಉಪಸ್ಥಿತರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!