19.5 C
Sidlaghatta
Sunday, July 20, 2025

ಕಸಾಪ ವತಿಯಿಂದ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ತು 101 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ 101 ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕಸಾಪ ವತಿಯಿಂದ ನೀಡುತ್ತಿರುವುದಾಗಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಉಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗಾಗಿ ಮಕ್ಕಳನ್ನು ಕರೆತಂದಿದ್ದ ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರಿಗೆ ಅವರ ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ಈ ದಿನ ತಾಲ್ಲೂಕಿನ 50 ಶಾಲೆಗಳ ಗ್ರಂಥಾಲಯಗಳಿಗೆ ‘ಕನ್ನಡ ರತ್ನಕೋಶ’ ವನ್ನು ಕಸಾಪ ವತಿಯಿಂದ ನೀಡಿದ್ದೇವೆ. ಇದರ ಜೊತೆಯಲ್ಲಿ ಸಾಹಿತಿ ಕಾಗತಿ ವೆಂಕಟರತ್ನಮ್ ರಚನೆಯ ಕಾಮನಬಿಲ್ಲು, ಸಾಧಕರಾದ ಸರ್.ಎಂ.ವಿಶ್ವೇಶ್ವರಯ್ಯ, ಬಿ.ಜಿ.ಎಲ್.ಸ್ವಾಮಿ, ಬಾಲಗಂಗಾಧರ ತಿಲಕ್, ಕಸ್ತೂರಬಾ ಗಾಂಧಿ, ಎಂ.ಗೋವಿಂದಪೈ, ಮಾಸ್ತಿ, ಸುಶ್ರುತ ಮೊದಲಾದವರ ಕುರಿತ ಪುಸ್ತಕಗಳನ್ನೂ ನೀಡಿದ್ದೇವೆ. ಕನ್ನಡ ಸಾಹಿತ್ಯ ಸೇವೆವನ್ನು ಮಕ್ಕಳಿಗೆ ಪುಸ್ತಕ ತಲುಪಿಸುವ ಮೂಲಕ ತಾಲ್ಲೂಕು ಕಸಾಪ ಘಟಕ ಮಾಡುತ್ತಿದೆ ಎಂದು ಹೇಳಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!