ತಾಲ್ಲೂಕಿನ ರೈತ ಕೂಟಗಳ ಒಕ್ಕೂಟದ ೭೨ ಮಂದಿ ರೈತರ ತಂಡ ಮಧ್ಯಪ್ರದೇಶಕ್ಕೆ ಆರು ದಿನಗಳ ಕೃಷಿ ಅಧ್ಯಯನಕ್ಕಾಗಿ ಸೋಮವಾರ ಸಂಜೆ ನಗರದ ರೇಷ್ಮೆ ಕೃಷಿ ಕಚೇರಿ ಆವರಣದಿಂದ ಪ್ರವಾಸ ಕೈಗೊಂಡರು.
ರೈತರ ತಂಡದ ನೇತೃತ್ವವಹಿಸಿರುವ ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ ಅವರು, ಪ್ರವಾಸದ ಬಗ್ಗೆ ವಿವರ ನೀಡಿ, ಚಾಲುಕ್ಯ ಐಷರ್ ಟ್ರ್ಯಾಕ್ಟರ್ ಕಂಪನಿಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಪ್ರವಾಸದಲ್ಲಿ ರೈತರು ೬ ದಿನಗಳ ಕಾಲ ಮಧ್ಯಪ್ರದೇಶದ ವಿವಿದೆಡೆ ಕೃಷಿ ಅಧ್ಯಯನ ಪ್ರವಾಸ ನಡೆಸಲಿದ್ದೇವೆ ಎಂದರು.
ಮಧ್ಯಪ್ರದೇಶದ ಭೂಪಾಲ್ನಲ್ಲಿರುವ ಐಷರ್ ಟ್ರ್ಯಾಕ್ಟರ್ನ ತಯಾರಿಕೆ ಘಟಕ ವೀಕ್ಷಣೆ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿನ ಪ್ರಗತಿ ಪರ ರೈತರ ತೋಟಗಳಿಗೆ ಭೇಟಿ ನೀಡಿ ವೀಕ್ಷಿಸಲಿದ್ದೇವೆ. ಅಲ್ಲಿಯೆ ತಂತ್ರಜ್ಞರೊಂದಿಗೆ ಸಂವಾದ ನಡೆಯಲಿದ್ದು ಈಗಿನ ಟ್ರ್ಯಾಕ್ಟರ್ನ ಮಾದರಿಗಳಲ್ಲಿ ಬದಲಾವಣೆ ಇನ್ನಿತರೆ ವಿಷಯಗಳ ಬಗ್ಗೆ ಸಂವಾದ ನಡೆಸಲಿದ್ದೇವೆ ಎಂದರು.
ಪ್ರಗತಿಪರ ರೈತರಾದ ಎ.ರಾಮಚಂದ್ರಪ್ಪ, ಗಾಂಧಿನಗರ ರಾಮಕೃಷ್ಣಪ್ಪ, ಬೂದಾಳ ರಾಮಾಂಜಿ ಪ್ರವಾಸದ ತಂಡದಲ್ಲಿದ್ದರು.
- Advertisement -
- Advertisement -
- Advertisement -