ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿಯ ಘಟಮಾರನಹಳ್ಳಿ ಗ್ರಾಮ ಮತ್ತು ಭಕ್ತರಹಳ್ಳಿ ಗ್ರಾಮ ಪಂಚಾಯತಿಯ ತೊಟ್ಲಗಾನಹಳ್ಳಿ ಗ್ರಾಮಗಳಿಗೆ ಒಟ್ಟು ಹತ್ತೂವರೆ ಲಕ್ಷ ರೂಪಾಯಿಗಳ ರಸ್ತೆ ಕಾಮಗಾರಿಯನ್ನು ಶಾಸಕ ಎಂ.ರಾಜಣ್ಣ ಭಾನುವಾರ ಉದ್ಘಾಟಿಸಿದರು.
ಸುಮಾರು ವರ್ಷಗಳಿಂದ ಹದಗೆಟ್ಟಿದ್ದ ರಸ್ತೆಗಳ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಮಳೆ ಬಂದರೆ ಓಡಾಡಲು ಅಸಾಧ್ಯವಾಗಿದ್ದ ರಸ್ತೆಯ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರಿಂದ ದೂರುಗಳು ಬಂದಿದ್ದವು. ವಿಶೇಷ ಅನುದಾನದ ಅಡಿಯಲ್ಲಿ ತೊಟ್ಲಗಾನಹಳ್ಳಿ ಗ್ರಾಮಕ್ಕೆ ಐದು ಲಕ್ಷ ರೂಪಾಯಿ ವೆಚ್ಚದ 500 ಮೀಟರ್ ರಸ್ತೆ ಡಾಂಬರೀಕರಣ ಮತ್ತು ಘಟಮಾರನಹಳ್ಳಿ ಗ್ರಾಮಕ್ಕೆ ಐದೂವರೆ ಲಕ್ಷ ರೂಪಾಯಿ ವೆಚ್ಚದ 600 ಮೀಟರ್ ರಸ್ತೆ ಡಾಂಬರೀಕರಣ ನಡೆಸಲಾಗುತ್ತದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಪಕ್ಷಾತೀತವಾಗಿ ಗ್ರಾಮಸ್ಥರು ಒಗ್ಗೂಡಬೇಕು’ ಎಂದು ತಿಳಿಸಿದರು.
ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲಗೌಡ, ನಾರಾಯಣಸ್ವಾಮಿ, ಕೃಷ್ಣಪ್ಪ, ತ್ಯಾಗರಾಜ್, ನರಸಿಂಹಪ್ಪ, ರಮೇಶ್, ಗುತ್ತಿಗೆದಾರ ದೇವರಾಜ್, ಕೇಶವ, ಕಲ್ಯಾಪುರ ಆಂಜಿನಪ್ಪ, ಅಂಬರೀಶ್, ನಂಜಪ್ಪ ಮತ್ತಿತರರು ಇ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -