ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬೆಂಗಳೂರಿನ ಇಂಡಿಯ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಯ ಸಹಯೋಗದೊಂದಿಗೆ ಕಲಾಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯಶಿಕ್ಷಕಿ ಸರಸ್ವತಮ್ಮ ಅವರು ಮಾತನಾಡಿದರು.
ಕಲೆಯ ಮೂಲಕ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧ್ಯವಾಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಶಿಡ್ಲಘಟ್ಟ ತಾಲ್ಲೂಕಿನ ಆಯ್ದ ಹತ್ತು ಶಾಲೆಗಳಲ್ಲಿ ಕಲಾಯಾತ್ರೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಕಲಾಯಾತ್ರೆಯ ಮೂಲ ಉದ್ದೇಶ ಕಲೆಯ ಮೂಲಕ ಕಲಿಕೆಯನ್ನು ಪರಿಚಯಿಸುವುದಾಗಿದೆ. ಇದರಲ್ಲಿ ಚಿತ್ರಕಲೆ, ನಟನೆ, ಹಾಡು, ಕಾಗದಕಲೆ, ಬರವಣಿಗೆಯ ಮುಖಾಂತರ ಕಲಿಕೆಯನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿದರು.
ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂತರ ತಾಲ್ಲೂಕಿನ ವರದನಾಯಕನಹಳ್ಳಿ, ಗುಡಿಹಳ್ಳಿ, ಅಬ್ಲೂಡು ಶಾಲೆಗಳಲ್ಲಿ ಕಲಾಯಾತ್ರೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಸುರೇಶ್ ಬಾಬು, ಶಿಕ್ಷಕರಾದ ಎಂ.ದೇವರಾಜ್, ಮಂಜುನಾಥ, ನಾಗರಾಜ್, ಶ್ರೀನಿವಾಸ ಯಾದವ್, ತ್ರಿವೇಣಿ, ಸಂಪನ್ಮೂಲ ವ್ಯಕ್ತಿಗಳಾದ ಎಸ್. ಕಲಾಧರ್, ಎಂ. ನಾಗರಾಜ್, ಎಫ್.ಹುಸೇನಿ, ಪ್ರವೀಣ್ ಬೆಳ್ಳಿ, ಅರುಣ್ ಬಿ.ಟಿ. ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣಪ್ಪ, ಜೈಭಾರತ್ ಯುವಕ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಸದಸ್ಯರು ಭಾಗವಹಿಸಿದ್ದರು.
Attachments area
- Advertisement -
- Advertisement -
- Advertisement -