20.6 C
Sidlaghatta
Tuesday, July 15, 2025

ತಾಲ್ಲೂಕು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಕ್ಷೇಮಾಬಿವೃದ್ಧಿ ಸಂಘದ ಸದಸ್ಯರಿಂದ ಪ್ರತಿಭಟನೆ

- Advertisement -
- Advertisement -

ಕೂಲಿ ಕೆಲಸಕ್ಕೆ ಹೋಗಿರುವವರನ್ನು ಹೊರತುಪಡಿಸಿ ಮನೆಯಲ್ಲಿ ಇರುವವರನ್ನು ಮಾತ್ರ ಸರ್ವೆ ಕಾರ್ಯ ನಡೆಸಿದ್ದು, ನಿಜವಾದ ವಸತಿ ಹೀನರಿಗೆ ಅನ್ಯಾಯವಾಗಿದೆ ಎಂದು ತಾಲ್ಲೂಕು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಕ್ಷೇಮಾಬಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ದೀಪಕ್ ತಿಳಿಸಿದರು.
ನಗರ ಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ನಗರ ಸಭೆಯ ವ್ಯಾವಸ್ಥಪಕ ಜಯರಾಮಪ್ಪ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದರು.
ನಗರದಲ್ಲಿ ಸಾಕಷ್ಟು ಜನರು ವಿವಿಧ ರೀತಿಯ ಕೂಲಿ ಕೆಲಸವನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ನಗರಸಭೆ ಕಾರ್ಯಾಲಯದಿಂದ ವಸತಿಹೀನರಿಗೆ ಸೌಕರ್ಯ ಕಲ್ಪಿಸುವ ಬಗ್ಗೆ ಸರ್ವೆ ಕಾರ್ಯ ನಡೆಸಿದ್ದು, ಕೂಲಿ ಕಾರ್ಮಿಕರಿಗೆ ಯಾವುದೇ ಸಂದೇಶ ಅಥವಾ ತಿಳುವಳಿಕೆ ನೀಡದೆ ಸರ್ವೆ ಮಾಡಿದ್ದಾರೆ. ಜನರು ಕೂಲಿ ಕೆಲಸಗಳಿಗೆ ಹೋಗಿರುವುದರಿಂದ ನಿಜವಾದ ಫಲಾನುಭವಿಗಳನ್ನು ಗುರ್ತಿಸಲು ಸಾದ್ಯವಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಪಟ್ಟಿಯನ್ನು ನೀಡಿ, ಸಮೀಕ್ಷೆಗೆ ಹಾಜರಾಗುವ ಮುನ್ನ ದೂರವಾಣಿ ಅಥವಾ ಸೂಕ್ತ ತಿಳುವಳಿಕೆ ನೀಡಿ ಸರ್ವೆ ನಡೆಸಬೇಕೆಂದು ಕೋರಿದರು.
ಮುನಿಕೃಷ್ಣ, ಸುಬ್ರಮಣಿ, ಉಷಾ, ಗಾಯಿತ್ರಿ, ಮಂಜುಳಾ, ಕುಮಾರ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!