20.9 C
Sidlaghatta
Tuesday, July 15, 2025

ನರಸಿಂಹಸ್ವಾಮಿ ಜಯಂತಿ

- Advertisement -
- Advertisement -

ತಾಲ್ಲೂಕಿನ ಗಂಜಿಗುಂಟೆಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ನರಸಿಂಹಸ್ವಾಮಿ ಜಯಂತಿಯ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗಂಜಿಗುಂಟೆಯ ಮೂರ್ತಿರಾಯರ ಕುಟುಂಬದವರಿಂದ ನಡೆದ ವಿಶೇಷ ಪೂಜೆಯಲ್ಲಿ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ನರಸಿಂಹ ಮತ್ತು ಪವಮಾನ ಹೋಮ ಹಾಗೂ ಉತ್ಸವವನ್ನು ಏರ್ಪಡಿಸಲಾಗಿತ್ತು. ಪಾನಕ, ಚಿತ್ರಾನ್ನ ಮತ್ತು ಆರ್ಯವೈಶ್ಯ ಮಂಡಳಿಯವರಿಂದ ಪೊಂಗಲ್ ಪ್ರಸಾದ ವಿತರಿಸಲಾಯಿತು.
ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವರಿಗೆ ಸಂಗೀತ ಸೇವೆಯೂ ನೆರವೇರಿತು.
ವೆಂಕಟೇಶಮೂರ್ತಿ, ಲಕ್ಷ್ಮೀನರಸಿಂಹಪ್ರಸಾದ್, ಶ್ಯಾಮಸುಂದರ್, ಆನಂದ, ಗುರುರಾಜ್, ನಂದಕುಮಾರ್, ರಾಮಮೂರ್ತಿ, ಕಾರ್ತಿಕ್, ಪದ್ಮಾವತಮ್ಮ, ಸುಬ್ರಹ್ಮಣ್ಯಾಚಾರಿ, ರಾಮಸ್ವಾಮಿ, ವೆಂಕಟರೆಡ್ಡಿ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!