26.5 C
Sidlaghatta
Wednesday, July 9, 2025

ನಾಯಿಗಳ ದಾಳಿಗೆ ಒಳಗಾದ ಕೃಷ್ಣಮೃಗ ಮರಿಯ ರಕ್ಷಣೆ

- Advertisement -
- Advertisement -

ನಗರದ ಹೊರವಲಯದ ಇದ್ಲೂಡು ಬಳಿ ನಾಯಿಗಳ ದಾಳಿಗೆ ಒಳಗಾದ ಕೃಷ್ಣಮೃಗ ಮರಿಯನ್ನು ಇದ್ಲೂಡು ನಾಗೇಶ್‌ ಮತ್ತು ಜನಾರ್ಧನ ರಕ್ಷಿಸಿದ್ದಾರೆ.
ಸೋಮವಾರ ಮುಂಜಾನೆ ಇದ್ಲೂಡಿನ ಸಮೀಪ ತೋಪುಗಳ ಕಡೆಯಿಂದ ಬಂದ ಕೃಷ್ಣಮೃಗಗಳ ಹಿಂಡಿನ ಮೇಲೆ ನಾಯಿಗಳು ಆಕ್ರಮಣ ಮಾಡಿವೆ. ಕೆಲವು ತಪ್ಪಿಸಿಕೊಂಡಿವೆಯಾದರೂ ಮರಿಯೊಂದು ಸಿಲುಕಿದೆ. ಅಷ್ಟರಲ್ಲಿ ಅವನ್ನು ಕಂಡ ಇದ್ಲೂಡು ನಾಗೇಶ್‌ ಮತ್ತು ಜನಾರ್ಧನ ನಾಯಿಗಳನ್ನು ಓಡಿಸಿ ಮರಿಯನ್ನು ರಕ್ಷಿಸಿದ್ದಾರೆ. ನಿತ್ರಾಣಗೊಂಡಿದ್ದ ಮರಿಯನ್ನು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಯ ಅರಣ್ಯರಕ್ಷಕ ಹುಸೇನಿ ನಿಂಬಾಳ್‌ ಅವರಿಗೆ ಒಪ್ಪಿಸಿದ್ದಾರೆ.
ಅರಣ್ಯರಕ್ಷಕ ಹುಸೇನಿ ನಿಂಬಾಳ್‌ ಪಶು ವೈದ್ಯರ ಸಲಹೆಯಂತೆ ಮರಿಗೆ ಹಾಲನ್ನು ನೀಡಿ ಸಲಹುತ್ತಿದ್ದಾರೆ.
‘ಬಹಳ ಸುಸ್ತಾಗಿದ್ದ ಹೆಣ್ಣು ಕೃಷ್ಣಮೃಗದ ಮರಿಯನ್ನು ಕೆಲವು ನಾಗರಿಕರು ತಂದು ಕೊಟ್ಟು. ವೈದ್ಯರ ಸಲಹೆಯಂತೆ ಅದಕ್ಕೆ ಹಾಲು ನೀಡುತ್ತಿದ್ದೇವೆ. ಚೇತರಿಸಿಕೊಂಡ ಮೇಲೆ ಕಾಡಿಗೆ ಬಿಡುತ್ತೇವೆ. ಅಕಸ್ಮಾತ್‌ ಹುಷಾರು ತಪ್ಪಿದರೆ ಮತ್ತೊಮ್ಮೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತೇವೆ. ಸಾರ್ವಜನಿಕರು ಈ ರೀತಿ ಕಾಳಜಿ ವಹಿಸುವುದು ಅಭಿನಂದನೀಯ’ ಎಂದು ಅರಣ್ಯರಕ್ಷಕ ಹುಸೇನಿ ನಿಂಬಾಳ್‌ ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!