25.8 C
Sidlaghatta
Monday, January 13, 2025

ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಈಶ್ವರ ದೈತೋಟ ರವರ ಪರಿಚಯ

- Advertisement -
- Advertisement -

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಶನ್‌ನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದು, ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್ಮೆಂಟ್‌ನಲ್ಲಿಯೂ ಅಪಾರ ಸಾಧನೆಗಳನ್ನು ದಾಖಲಿಸಿರುವ ವಿಶಿಷ್ಟ ಪತ್ರಕರ್ತ ಈಶ್ವರದೈತೋಟ, ಯು.ಜಿ.ಸಿ ಮತ್ತು ಯೂನಿಸೆಫ್‌ ತರಬೇತಿ ಯೋಜನೆಗೆ ಡೆವೆಲ್ಮೆಂಟ್‌ ಕನ್ಸಲ್ಟೆಂಟ್‌ ಎಂದು ಮನ್ನಣೆ ಪಡೆದಿದ್ದಾರೆ.
ishwar-pg_mm೨೦೧೫ ರಲ್ಲಿ ಅವರಿಗೆ ಪ್ರತಿಷ್ಠಿತ ಟಿಎಸ್‌ಆರ್ ಪತ್ರಿಕೋದ್ಯಮ ಪ್ರಶಸ್ತಿ ಹಾಗು ೧ ಲಕ್ಷರೂ.ನಗದು ಪ್ರಶಸ್ತಿ ನೀಡಿ ಕರ್ನಾಟಕ ಸರ್ಕಾರ ಗೌರವಿಸಿದೆ. ೨೦೦೮ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿಯೂ ಅವರಿಗೆ ಲಭ್ಯವಾಗಿತ್ತು. ಹಾಗೆಯೇ ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (೨೦೦೬) ಹಾಗು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಅತ್ಯುತ್ತಮ ಕನ್ನಡ ಪುಸ್ತಕ ಪ್ರಶಸ್ತಿ, ಬೆಂಗಳೂರು ವರದಿಗಾರರ ಕೂಟದಿಂದ ಅತ್ಯುತ್ತಮ ಅಭ್ಯುದಯ ವರದಿ ಪ್ರಶಸ್ತಿ ಇತ್ಯಾದಿ ಪ್ರೊಫೆಶನಲ್ ಗೌರವಗಳಿಗೆ ಭಾಜನರಾಗಿದ್ದಾರೆ. ೨೦೦೮ ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ ಅವರನ್ನು ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆಅತಿದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತುಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ ( ವೀಕ್ಷಕರಆಯ್ಕೆ) ಎಂಬೆರಡು ಪ್ರಶಸ್ತಿಗಳನ್ನೂ ನೀಡಿ ಸನ್ಮಾನಿಸಿದೆ.
ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆಯನ್ನೂ ಹೊಂದಿರುವ ಅವರು ೧೯೯೧ರಿಂದ ೨೦೧೧ ರವರೆಗೆ ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಬೆನೆಟ್‌ಕೋಲ್ಮನ್ ಗುಂಪಿನ ಟೈಮ್ಸ್‌ಆಫ್‌ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್‌ದೈನಿಕ ಸಂಯುಕ್ತಕರ್ನಾಟಕದ ಚೀಫ್‌ಎಡಿಟರ್, ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯಕರ್ನಾಟಕದ ಫೌಂಡರ್‌ಚೀಫ್‌ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್‌ಎಡಿಟರ್ ಆಗಿ ಹೊಣೆಹೊತ್ತವರು.
ಡೈಲಿ ಜರ್ನಲಿಸಂನಲ್ಲಿ ದಿನಕ್ಕೊಂದು ವಿಶೇಷ ಪುರವಣಿ ಮತ್ತು ಪುಟಾಣಿಗಳಿಗೆ ಮತ್ತು ಮಹಿಳೆಯರಿಗಾಗಿ ವೀಕ್ಲಿ ಸಪ್ಲಿಮೆಂಟ್ಸ್-ಹಾಗೆಯೇ ಕೃಷಿ, ಯುವಜನತೆಗಾಗಿ ವಿಶೇಷ ಪುರವಣಿಗಳೆಂಬ ವೈಶಿಷ್ಟ್ಯವನ್ನು ಮೊದಲಬಾರಿಗೆ ಅಳವಡಿಸಿದವರು. ಅಲ್ಲದೆ, ಭಾರತೀಯ ಪತ್ರಿಕೋದ್ಯಮದಲ್ಲಿ ಕುಗ್ರಾಮ ಗುರುತಿಸಿ ಎಂಬ ಡೆವೆಲಪ್‌ಮೆಂಟ್‌ಜರ್ನಲಿಸಂ ಎಕ್ಸಪರಿಮೆಂಟ್ ನೇತೃತ್ವ(೧೯೮೧-–೮೭) ವಹಿಸುವುದರೊಂದಿಗೆಮುದ್ರಣ ಮಾಧ್ಯಮದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ.
ಎರಡೂವರೆ ದಶಕಗಳಿಂದ ಅವರ ಅಂಕಣಗಳು – ಅಂತರದೃಷ್ಟಿ, ಅನುಭಾವ ಮತ್ತು ಚಿಣ್ಣಚಿಣ್ಣ ಪಾಠ ಮತ್ತು ಮಾಧ್ಯಮ ಭ್ರಮರಿ (ಉದಯವಾಣಿ, ವಿಜಯಕರ್ನಾಟಕ, ಸಂಯುಕ್ತಕರ್ನಾಟಕ, ಟೈಮ್ಸ್‌ಆಫ್‌ಇಂಡಿಯಾ-ಕನ್ನಡ, ವಿಜಯವಾಣಿ ಹಾಗೂ ಹೊಸದಿಗಂತ) ಕನ್ನಡ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಣೆ ಆಗುತ್ತಿವೆ. ೮ ವರ್ಷ ಡಿಡಿ ಕನ್ನಡ ನ್ಯೂಸ್‌ ರೀಡರ್‌ ಆಗಿದ್ದುದಲ್ಲದೆ, ಆಕಾಶವಾಣಿ, ಉದಯ, ದೂರದರ್ಶನ ಮತ್ತಿತರ ಟಿವಿ, ರೇಡಿಯೋಗಳಲ್ಲಿ ಪ್ರಚಲಿತ ವಿಷಯಗಳ ಬಗ್ಗೆ ೨,೦೦೦ ಕ್ಕೂ ಹೆಚ್ಚು ವಿಭಿನ್ನಕಾರ್ಯಕ್ರಮಗಳನ್ನು ನಡೆಸಿ (ಮಂಥನ, ಪಂಚಾಯ್ತಿ ಕಟ್ಟೆ, ಸಂವೇದನೆ, ಮತಭೇರಿ) ಮನೆಮಾತಾಗಿದ್ದಾರೆ. ಸಮಯ ಟಿವಿಯಲ್ಲಿ ಪ್ರೈಮ್‌ಟೈಮ್‌ ಬುಲೆಟಿನ್‌ ಗೆಸ್ಟ್‌ ಆಂಕರ್‌ ಕೂಡಾ ಆಗಿದ್ದರು. ಸದ್ಯ, ಪ್ರಜಾಟಿವಿಯಲ್ಲಿ ಚದುರಂಗ ಎಂಬ ವೀಕ್ಲಿ ಸಂದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.
ವಾಯ್ಸ್‌ಆಫ್‌ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಶನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.
ಜಗತ್ತಿನ ಐದು ಭೂಖಂಡಗಳಿಗೆ ಭೇಟಿ ನೀಡಿರುವ ದೈತೋಟ, ಪ್ರಧಾನಿಗಳಾದರಾಜೀವ್‌ಗಾಂಧಿ, ವಿ.ಪಿ. ಸಿಂಗ್ ಮತ್ತು ಪಿ.ವಿ. ನರಸಿಂಹರಾವ್ ಜೊತೆಗೆ ಸ್ವೀಡನ್, ರಶಿಯಾ ಮತ್ತು ದಕ್ಷಿಣಅಮೆರಿಕಾ ಪ್ರವಾಸ ಮಾಡಿದ್ದಾರೆ. ಶ್ರೀಲಂಕಾದ ಅಧ್ಯಕ್ಷೆ ಚಂದ್ರಿಕಾಕುಮಾರತುಂಗೆ, ಫ್ರಾನ್ಸ್‌ನ ಮಿತ್ತೆರಾಂ, ಜರ್ಮನಿಯ ಹೆಲ್ಮೆಟೆಕೋಲ್, ರಶಿಯಾದ ಕೊಸಿಗಿನ್, ಸ್ವೀಡನಿನ ಒಲೋಫ್ ಪಾಮೆ ಮುಂತಾಗಿ ಅಂತಾರಾಷ್ಟ್ರೀಯ ಪ್ರಮುಖರನ್ನೂ ಭೇಟಿಯಾಗಿರುವುದಲ್ಲದೆ, ರಿಯೋ ಭೂಶೃಂಗದಲ್ಲಿ ಅಮೇರಿಕದ ಜಾರ್ಜ್ ಬುಶ್ ಮತ್ತು ಕ್ಯೂಬಾದ ಫೀಡೆಲ್‌ಕಾಸ್ಟ್ರೋ ಅವರ ಜೋಡಿ ಭಾಷಣಗಳನ್ನು ಪ್ರತ್ಯಕ್ಷ ವರದಿ ಮಾಡಿದ ಅನುಭವವೂ ಅವರಿಗಿದೆ.
ಮೈಸೂರು ಯೂನಿವರ್ಸಿಟಿ ಜರ್ನಲಿಸಂ ಎಂ.ಎ., (೧೯೭೩) ಫಿಲಿಪ್ಪೀನ್ಸ್‌ನ ಪ್ರೆಸ್ ಫೌಂಡೇಶನ್‌ಆಫ್ ಏಶಿಯಾದಲ್ಲಿ ಸ್ನಾತಕೋತ್ತರ ಡೆವಲಪ್‌ಮೆಂಟ್‌ ಜರ್ನಲಿಸಂ ಶಿಕ್ಷಣ (೧೯೭೯–-೮೦)ಪಡೆದವರು. ಆಸ್ಟ್ರೇಲಿಯಾದ ವಿಕ್ಟೋರಿಯ ಮತ್ತು ನ್ಯೂಸೌತ್ ವೇಲ್ಸ್ ರಾಜ್ಯಗಳ ಕಮ್ಯುನಿಟಿ ನ್ಯೂಸ್‌ಪೇಪರ್‌ಗಳಲ್ಲಿ ತರಬೇತಿ ಪಡೆದಿದ್ದಾರೆ. ಅಮೇರಿಕಾದ ವಿವಿಧ ಅಧ್ಯಯನ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳ ಆಶ್ರಯದಲ್ಲಿ ಅಭ್ಯುದಯ ಸಂಬಂಧಿತ ಭಾಷಣ, ಸಮಾಲೋಚನೆಗಳಲ್ಲಿ ಭಾಗಿಯಾಗಿದ್ದಾರೆ.
ಬ್ರಿಟಿಷ್ ಸರ್ಕಾರದಿಂದ ಆರ್ಥಿಕ ಮತ್ತು ಪರಿಸರ ಸಂಬಂಧಿತವಾಗಿ (೧೯೮೮,೯೧,೯೭ ಮತ್ತು ೯೮ ರಲ್ಲಿ) ಮತ್ತು ಯು.ಎಸ್.ನಿಂದ ಕಾನ್‌ಫ್ಲಿಕ್ಟ್‌ ರೆಸೊಲ್ಯೂಷನ್ ಮತ್ತು ಮೀಡಿಯಾ ಸ್ಟಡೀಸ್‌ಗೆ (೧೯೯೨ ಮತ್ತು ೧೯೯೮) ಹಾಗೂ ೨೦೦೮ ರಲ್ಲಿ ಪ್ರವಾಸೋದ್ದಿಮೆ ಪ್ರವರ್ಧನೆಗಾಗಿ ಯುರೋಪ್‌ಗೆ ಆಹ್ವಾನಿತರಾಗಿದ್ದರು.
08BGHIBBYISTNHTB_857910fದೂರದರ್ಶನದಲ್ಲಿ ನ್ಯೂಸ್‌ರೀಡರ್ ಆಗಿ ೮ ವರ್ಷ ಸೇವೆ ಸಲ್ಲಿಸಿರುವ ದೈತೋಟರ ಮಂಥನ ಸೀರಿಯಲ್ (೫ ವರ್ಷದೂರದರ್ಶನ) ಪಂಚಾಯ್ತಿಕಟ್ಟೆ- ಡೆವಲಪ್‌ಮೆಂಟ್‌ ಡಿಬೇಟ್ (ಉದಯ ನ್ಯೂಸ್‌ಚಾನೆಲ್ ೫ ವರ್ಷ) ಹಾಗೂ ಸಂವೇದನೆ -ಶೇರಿಂಗ್ ವಿದ್‌ಕನ್ಸರ್ನ್‌ಇಂಟರ್ ವ್ಯೂ (ಉದಯಚಾನೆಲ್‌ನಲ್ಲಿ ವಾರಕ್ಕೆಐದು ದಿನ ೩ ವರ್ಷ) ಜನಪ್ರಿಯವಾಗಿದ್ದವು. ಹಾಲಿ, ಪ್ರಜಾಟೀವಿಯಲ್ಲಿಚದುರಂಗ ವೀಕ್ಲಿ ವರ್ಬಲ್ ವಾರ್ ಸಂದರ್ಶನ ಶುರು ಮಾಡಿದ್ದಾರೆ.
ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯಜಪ. ಅಭ್ಯುದಯ ಸಂಬಂಧಿತ ಅನೇಕಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ ಅವರಿಗಿದೆ. ಏಶಿಯನ್ ಮೀಡಿಯ ಬ್ಯಾರೋಮೀಟರ್ ಎಂಬ ಜರ್ಮನಿಯಎಫ್.ಇ.ಎಸ್. ಸಂಸ್ಥೆ ಪ್ರಕಾಶಿತ ೨೦೦೯ ಮತ್ತು ೧೪ ರ ಸಂಶೋಧನಾ ಪ್ರಕಟಣೆಗಳ (ಇಂಗ್ಲೀಷ್) ಸಂಪಾದಕೀಯ ಹೊಣೆಯಲ್ಲಿ ಅವರು ತೊಡಗಿಸಿಕೊಂಡಿದ್ದರು.
ಅವರು ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ ೭೦ ಕ್ಕೂ ಹೆಚ್ಚು. ದಿ ಎಯ್ಟೀಂತ್ ಎಲಿಫೆಂಟ್, (ಇಂಗ್ಲೀಷ್), ಮಾಧ್ಯಮ ಬ್ರಹ್ಮಾಂಡ, ವಿಧಾನಮಂಡ ವರದಿಗಾರಿಕೆ, ಅಭ್ಯುದಯ ಪತ್ರಿಕೋದ್ಯಮ, ನಾಡು ನುಡಿ, ಸಂಸ್ಕೃತಿ ಮತ್ತು ಫ್ಯಾಶನ್, ಪ್ರೆಸ್‌ಅಂಡ್ ಪೊಲೀಸ್, ಡೆವೆಲಪ್‌ಮೆಂಟ್‌ ಆಫ್‌ ಜರ್ನಲಿಸಂ ಇನ್ ಸೌತ್‌ಕೆನರಾ (ಇಂಗ್ಲೀಷ್-ಮೈಸೂರು ವಿವಿ) ಅಂತರದೃಷ್ಟಿ ಪ್ರಮುಖವಾದವು. ಮಾಧ್ಯಮ ಸಂಬಂಧಿತ ಎರಡು ಹೊಸ ಪುಸ್ತಕಗಳು ಪ್ರಕಟಣಾ ಹಂತದಲ್ಲಿವೆ. ಭಾರತದ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ (ಎ ಮ್ಯಾನಿಫೆಸ್ಟೋ ಫಾರ್‌ಚೇಂಜ್) ಝಕೀರ್ ಹುಸೈನ್‌ ಅವರ ಪುಸ್ತಕಗಳನ್ನಲ್ಲದೆ ಪಿರಮಿಡ್-ವಾಸ್ತು, ನನ್ನದೂ ಒಂದು ಪ್ರೇಮಕಥೆ, ಮುಳುಗುತ್ತಿದ್ದೀರಾ, ಸಬ್ಮೆರೀನ್ ಆಗಿ – ಎಂದು ಅನೇಕ ಪುಸ್ತಕಗಳನ್ನು ಕನ್ನಡೀಕರಿಸಿದ್ದಾರೆ. ೨೦ ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳ ಸಹ – ಲೇಖಕರಾಗಿಯೂ ದುಡಿದಿದ್ದಾರೆ.
ರಮೇಶ್‌ ರಾಮನಾಥನ್‌ ಅವರ ಜನಾಗ್ರಹದ ಸಹಭಾಗಿತ್ವ ಸರ್ಕಾರ ಚಳವಳಿಯ ಮೀಡಿಯಾ ಅಡ್‌ವೈಸರ್ ಹಾಗೂ ಜಾಗತಿಕ ದಾಖಲೆ ಮಾಡಿರುವ ರೋಹಿಣಿ ನಿಲೇಕಣಿಯವರ ಮಕ್ಕಳ ಪುಸ್ತಕ ಪ್ರಕಟಣಾ ಸಂಸ್ಥೆ – ಪ್ರಥಮ್ ಟ್ರಸ್ಟಿನ ಕಂಟೆಂಟ್‌ಕನ್ಸಲ್ಟೆಂಟ್ ಆಗಿ ತಲಾಮೂರು ವರ್ಷ ವಾಲೆಂಟಿಯರ್ ಆಗಿ ದುಡಿದಿದ್ದಾರೆ.
ಯೂನಿವರ್ಸಿಟಿ ಗ್ರಾಂಟ್‌ಕಮೀಶನ್‌ನ ಡೆವೆಲಪ್‌ಮೆಂಟ್‌ಕಮ್ಯುನಿಕೇಶನ್‌ ಕನ್ಸಲ್ಟೆಂಟ್ ಆಗಿ ಯು.ಪಿ.ಇ, ಮತ್ತು ಯೂನಿಸೆಫ್‌ಜರ್ನಲಿಸಂ ಟ್ರೈನಿಂಗ್‌ಗೆ ಎರಡು ವರ್ಷಗಳಿಂದ ಸಂಪನ್ಮೂಲ ವ್ಯಕ್ತಿಯಾಗಿಯೂ ಕೊಡುಗೆ ಕೊಡುತ್ತಿದ್ದಾರೆ. ಪಾರ್ಟಿಸಿಪೇಟಿವ್ ಗವರ್ನೆನ್ಸ್ ಸಂಬಂಧಿತವಾಗಿ ಹಲವು ಇಂಗ್ಲೀಷ್ ಮತ್ತುಕನ್ನಡ ಪುಸ್ತಕಗಳ ಪ್ರಕಟಣೆಗಳ ಸಂಪಾದಕೀಯತಂಡದಲ್ಲಿ ಕೆಲಸ ಮಾಡಿದ್ದಾರೆ. ಹೆಸರಾಂತ ಪರಿಸತಜ್ಞ ಡಾ. ಅನಿಲ್ ಅಗರ್‌ವಾಲ್‌ ಅವರ ಹೊಸದಿಲ್ಲಿಯ ಸೆಂಟರ್ ಫಾರ್ ಸಯನ್ಸ್‌ ಅಂಡ್‌ ಎನ್‌ವಯರ್ನ್‌ಮೆಂಟ್ ಸಂಸ್ಥೆಯ ಹಲವು ಪ್ರಕಟಣೆಗಳಿಗೆ ಅವರು ಕೊಡುಗೆ ನೀಡಿದ್ದಾರೆ.
ಗ್ರೇಟ್‌ಈಸ್ಟರ್ನ್ ಮ್ಯಾನೇಜ್ಮೆಂಟ್ ಸ್ಕೂಲ್, ಬ್ರಿಟನಿನ ಡಬ್ಲುಎಲ್ಸಿ ಮೀಡಿಯಾ ಸ್ಕೂಲ್, ಜಿಸಿಸಿ ಯೂನಿವರ್ಸಿಟಿ, ಸುರಾನಾ ಇನ್ಸಟಿಟ್ಯೂಟ್‌ ಆಫ್ ಹೈಯರ್‌ ಎಜುಕೇಶನ್, ಬೆಂಗಳೂರು ಯೂನಿವರ್ಸಿಟಿ, ಮೀಡಿಯಾ ಇನ್‌ಫಾರ್ಮೇಶನ್‌ ಅಂಡ್‌ ಕಮ್ಯುನಿಕೇಶನ್ ಸೆಂಟರ್‌ ಆಫ್‌ ಇಂಡಿಯಾ ಮುಂತಾಗಿ ಹತ್ತಾರು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಮೀಡಿಯಾ ಮ್ಯಾನೇಜ್‌ಮೆಂಟ್, ಡೆವೆಲಪ್‌ಮೆಂಟ್‌ ಕಮ್ಯುನಿಕೇಶನ್, ರಿಪೋರ್ಟಿಂಗ್, ಮೀಡಿಯಾ ಬಿಸಿನೆಸ್, ಎಥಿಕ್ಸ್‌ ಅಂಡ್‌ ಮೀಡಿಯಾ ಲಾ ಇತ್ಯಾದಿ ವಿಷಯಗಳ ವಿಸಿಟಿಂಗ್ ಫಾಕಲ್ಟಿ ಅಲ್ಲದೆ, ಮಣಿಪಾಲದ ಮಾಹೆ ಯೂನಿವರ್ಸಿಟಿ, ಬೆಂಗಳೂರು ಮತ್ತು ಮೈಸೂರು ಯೂನಿವರ್ಸಿಟಿಗಳ ಕಮ್ಯುನಿಕೇಶನ್ ಮತ್ತುಜರ್ನಲಿಸಂ ಅಧ್ಯಯನದ ಬೋರ್ಡ್‌ಆಫ್ ಸ್ಟಡೀಸ್ ಸದಸ್ಯರಾಗಿಯೂ, ಸಿಲೆಬಸ್ ರಚನೆಗೂ ಕೊಡುಗೆ ಕೊಟ್ಟಿದ್ದಾರೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!