29.1 C
Sidlaghatta
Saturday, March 25, 2023

ಬೆಂಕಿ ರಹಿತ ಆರೋಗ್ಯಕರ ಆಹಾರ ತಯಾರಿಕಾ ಸ್ಪರ್ಧೆ

- Advertisement -
- Advertisement -

ಪ್ರಸ್ತುತ ದಿನಗಳಲ್ಲಿ ಮಕ್ಕಳು ಕುರುಕಲು ತಿಂಡಿ ಹಾಗೂ ತ್ವರಿತ ಆಹಾರ (ಫಾಸ್ಟ್ಫುಡ್) ಹೆಚ್ಚಾಗಿ ಸೇವನೆ ಮಾಡುತ್ತಿದ್ದು, ಇದರಿಂದ ಮಕ್ಕಳು ಹಲವು ಕಾಯಿಲೆಗಳಿಗೆ ತುತ್ತಾಗುವ ಸಂಭವಗಳು ಹೆಚ್ಚಾಗುತ್ತಿದೆ ಎಂದು ಶ್ರೀ ಸಾಯಿ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಎಂ. ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗೇಟ್ ಬಳಿಯಿರುವ ಶ್ರೀ ಸಾಯಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿದ್ದ ಬೆಂಕಿ ರಹಿತ ಆರೋಗ್ಯಕರ ಆಹಾರ ತಯಾರಿಕಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿಯಲ್ಲಿನ ಶ್ರೀ ಸಾಯಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶನಿವಾರ ಬೆಂಕಿ ರಹಿತ ಆರೋಗ್ಯಕರ ಆಹಾರ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು

ಮಕ್ಕಳು ಕುರುಕಲು ತಿಂಡಿ, ಫಾಸ್ಟ್ಫುಡ್ ಮೊರೆ ಹೋಗೇ, ಮನೆಯಲ್ಲಿ ತಯಾರಿಸುವ ಆಹಾವರನ್ನು ಮಿತ ಸೇವನೆ ಮಾಡುವ ಮೂಲಕ ಆರೋಗ್ಯವಂತರಾಗಿ ಬೆಳೆಯಬೇಕು. ಪಾಠ ಪ್ರವಚನದೊಂದಿಗೆ ಮಕ್ಕಳ ಆಹಾರ ಸೇವನೆ, ಕ್ರೀಡೆ ಸೇರಿದಂತೆ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಶಾಲೆಯಲ್ಲಿಆಯೋಜಿಸುವ ಮೂಲಕ ಅವರಲ್ಲಿ ಆರೋಗ್ಯ ಕಾಳಜಿಯನ್ನು ಮೂಡಿಸುತ್ತಿರುವುದಾಗಿ ತಿಳಿಸಿದರು.
ಮಕ್ಕಳಿಗಾಗಿ ಆಯೋಜಿಸಿದ್ದ ಆಹಾರ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೆಲ ಮಕ್ಕಳು ಪೋಷಕರಿಂದ ಬೆಂಕಿ ರಹಿತ ಆಹಾರ ಉತ್ಪನ್ನಗಳ ತಯಾರಿಸುವ ವಿಧಾನಗಳನ್ನು ಕಲಿತು ಶಾಲೆಯಲ್ಲಿ ಪ್ರಯೋಗ ಮಾಡಿದರೆ, ಉಳಿದ ಮಕ್ಕಳಿಗೆ ಶಾಲಾ ಸಿಬ್ಬಂದಿಯೇ ಆಹಾರ ಉತ್ಪನ್ನಗಳ ತಯಾರಿಸುವ ವಿಧಾನಗಳ ಕುರಿತು ಬೋಧಿಸಿದರು. ವಿಜೇತರಾದ ಮಕ್ಕಳಿಗೆ ಶಾಲಾವತಿಯಿಂದ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್, ಮುಖ್ಯ ಸಹ ಶಿಕ್ಷಕಿ ಚಂದನ, ಶಿಕ್ಷಕರಾದ ಮಾಲಶ್ರೀ, ಮೀನಾಕ್ಷಿ, ಸುಮ, ದೀಪಿಕ, ಶ್ರೀನಾಥ್, ಶ್ರೀನಿವಾಸ್, ಚಂದ್ರಕಲಾ, ಮುಖಂಡರಾದ ನರಸರೆಡ್ಡಿ, ಸತ್ಯನಾರಾಯಣ ಶೆಟ್ಟಿ ಹಾಜರಿದ್ದರು.
 

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!