30.1 C
Sidlaghatta
Saturday, April 26, 2025

‘ರಾಷ್ಟ್ರ ದೇವೋ ಭವ’ ಕಾರ್ಯಕ್ರಮ

- Advertisement -
- Advertisement -

ಪಟ್ಟಣದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಸಂಜೆ ಸಂಸ್ಕಾರ ಭಾರತಿಯ ಮಂಗಳೂರು ವಿಭಾಗದ ಪ್ರಚಾರಕ ಆದರ್ಶ ಗೋಖಲೆಯವರ ನೇತೃತ್ವದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಶಾರದಾಮಣಿ ಶೇಖರ್, ಲತಾ ನಾಗರಾಜ್ ಮುಂತಾದ ಕಲಾವಿದರ ತಂಡ ರಾಷ್ಟ್ರ ದೇವೋ ಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ದೇಶಪ್ರೇಮ, ನಾಡಪ್ರೇಮವನ್ನು ಮೆರೆದು, ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ದೇಶದ ಸ್ವಾತಂತ್ರ್ಯ ಸೇನಾನಿಗಳು, ಸೈನಿಕರು, ದಾರ್ಶನಿಕರ ಕುರಿತು ಮಾಹಿತಿಯನ್ನು ಗೋಖಲೆಯವರು ನೀಡಿದರೆ, ಕಲಾವಿದರ ತಂಡ ಅದನ್ನು ನೃತ್ಯರೂಪಕದ ಮೂಲಕ ಅಭಿವ್ಯಕ್ತಪಡಿಸಿದರು.
ಇಂದಿನ ಯುವ ಜನಾಂಗವು ದೇಶ ಪ್ರೇಮವನ್ನು ಬಿಟ್ಟು ಕ್ಷಣಿಕ ಸುಖಕ್ಕಾಗಿ ಹೊರಡುತ್ತಿರುವ ಹಾದಿಯ ಬಗ್ಗೆ ವಿಷಾದಿಸಿದ ಅವರು, ಯುವ ಜನಾಂಗವನ್ನು ತಿದ್ದಿ ತೀಡಿ ಉತ್ತಮ ವ್ಯಕ್ತಿಗಳಾಗಿ ರೂಪಿಸುವಲ್ಲಿ ಹಿರಿಯರ ಪಾತ್ರ ಮುಖ್ಯವಾದದ್ದು. ಇದೆಲ್ಲವನ್ನೂ ನಮ್ಮ ಗೀತೆಯಲ್ಲಿನ ಪ್ರತಿಯೊಂದು ಅಧ್ಯಾಯವೂ ಸಾರುತ್ತದೆ. ದೇಶಕ್ಕಾಗಿ ಮಡಿಯುವವರು ಪ್ರತಿ ಕುಟುಂಬದಲ್ಲೂ ಜನಿಸಬೇಕಾಗಿದೆ ಎಂದು ಸಾರಿದರು.
ಮೂರು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಕುಳಿತುಕೊಳ್ಳುವಂತೆ ಮಾಡುವಲ್ಲಿ ಗೋಖಲೆ ಹಾಗೂ ಅವರ ತಂಡ ಯಶಸ್ವಿಯಾಯಿತು.
ಚಿಕ್ಕಬಳ್ಳಾಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದ ಸ್ವಾಮೀಜಿ, ಸಂಸ್ಕಾರ ಭಾರತಿಯ ತಾಲ್ಲೂಕು ಅಧ್ಯಕ್ಷ ನಂದೀಶ್, ರಾಷ್ಟ್ರ ದೇವೋ ಭವದ ನಿರ್ದೆಶಕರಾದ ಚಂದ್ರಶೇಖರ ಕೆ.ಶೆಟ್ಟಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!