20.1 C
Sidlaghatta
Sunday, February 15, 2026

ರೈತರಿಗೆ ತರಕಾರಿ ಬೀಜಗಳ ಕಿಟ್ ವಿತರಣೆ

- Advertisement -
- Advertisement -

ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತಂತೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.
ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಸೋಮವಾರ ರೈತರಿಗೆ ವಿವಿಧ ಬೀಜಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ, ಸಾದಲಿ ಭಾಗದ ಜನರಿಗೆ ಮಾಹಿತಿಯೇ ಇಲ್ಲ. ನಾವು ರೈತ ಸಂಘದಿಂದ ಮಾಹಿತಿ ನೀಡಿ ರೈತರನ್ನು ಕರೆದುಕೊಂಡು ಬಂದಿದ್ದೇವೆ. ಹೋಬಳಿ ಮಟ್ಟದಲ್ಲಿ ರೈತರಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಈ ದಿನ ಸುಮಾರು ೪೫೦ ರೂ ಬೆಲೆ ಬಾಳುವ ಹೀರೇಕಾಯಿ, ಸೋರೇಕಾಯಿ, ಬದನೇಕಾಯಿ, ಹಾಗಲಕಾಯಿ, ಮೆಣಸಿನಕಾಯಿ ಬೀಜಗಳನ್ನು, ಅಂದರೆ ೨೦೦೦ ರೂ ಬೆಲೆ ಬಾಳುವ ಕಿಟ್ ಪ್ರತಿಯೊಬ್ಬ ರೈತರಿಗೆ ನೀಡಲಾಗುತ್ತಿದೆ. ನೂರು ಮಂದಿ ರೈತರಿಗೆ ಈ ದಿನ ಈ ಸೌಲಭ್ಯ ಸಿಗುತ್ತಿದೆ. ತಾಲ್ಲೂಕಿನ ೬೫೦ ಮಂದಿ ರೈತರು ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು.
ತೋಟಗಾರಿಕಾ ಇಲಾಖೆ ಅಧಿಕಾರಿಗಳಾದ ರವಿಕುಮಾರ್, ಪ್ರಿಯಾಂಕ, ಲಕ್ಷ್ಮೀನಾರಾಯಣ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಅರುಣ್ ಕುಮಾರ್, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕೋಟೆ ಚನ್ನೇಗೌಡ, ಶಂಕರ್ ನಾರಾಯಣ್, ದೊಣ್ಣಹಳ್ಳಿ ರಮೇಶ್, ಆನಂದ್, ವೆಂಕಟರೆಡ್ಡಿ, ಲಗುಮಪ್ಪ, ಸುರೇಶ್, ಚೌಡಸಂದ್ರ ಶ್ರೀನಿವಾಸ್, ಅಂಗತಟ್ಟಿ ದೇವರಾಜ್, ಸುಗಟೂರು ಆನಂದಪ್ಪ, ಯಣ್ಣಂಗೂರು ಗೋವಿಂದಪ್ಪ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!