ಹೊಟ್ಟೆಪಾಡಿಗಾಗಿ ಸೊಪ್ಪುಮಾರಾಟ ಮಾಡಿಕೊಂಡು ತನ್ನೂರಿಗೆ ರೈಲಿನಲ್ಲಿ ಬಂದ ಮಹಿಳೆಯೊಬ್ಬಳು ಆಯತಪ್ಪಿ ಬಿದ್ದ ಪರಿಣಾಮ ರೈಲಿಗೆ ಸಿಕ್ಕು ಎರಡೂ ಕಾಲುಗಳು ತುಂಡಾಗಿ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ವೈ.ಹುಣಸೇನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಬೆಂಗಳೂರಿನಿಂದ ಬಂದ ರೈಲಿನಲ್ಲಿ, ದೊಡ್ಡದಾಸೇನಹಳ್ಳಿಯ ನಿವಾಸಿ ಮುನಿರತ್ನಮ್ಮ ಎಂಬುವವರು ಇಳಿಯುವಾಗ ಆಯತಪ್ಪಿ ರೈಲಿನ ಕೆಳಗೆ ಬಿದ್ದಿದ್ದು, ಎರಡೂ ಕಾಲುಗಳು ತುಂಡಾಗಿ ಹೋಗಿವೆ. ತಕ್ಷಣ ಸ್ಥಳದಲ್ಲಿದ್ದ ನಾಗರಿಕರು ಆಂಬುಲೆನ್ಸ್ ಮೂಲಕ ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ ಆಕೆಯನ್ನು ಸಾಗಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ದಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
- Advertisement -
- Advertisement -
- Advertisement -
- Advertisement -