20.1 C
Sidlaghatta
Wednesday, February 11, 2026

ವಕೀಲರಿಂದ ಭಯೋತ್ಪಾದಕರ ಕೃತ್ಯ ಖಂಡನೆ

- Advertisement -
- Advertisement -

ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಶನಿವಾರ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಶಿಡ್ಲಘಟ್ಟದ ವಕೀಲರು ಪ್ರಾಣತ್ಯಾಗ ಮಾಡಿದ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿ ಪ್ರಧಾನಿಯವರಿಗೆ ತಲುಪಿಸುವಂತೆ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪಾಕಿಸ್ತಾನ ಬೆಂಬಲಿತ ಜೈಶೇ ಮಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರಪಾಪಿ ಆದಿಲ್ ಅಹಮದ್ ದಾರ್ ಎಂಬುವವನು ಕಾಶ್ಮೀರದ ಪುಲ್ವಾಮದಲ್ಲಿ ಸ್ಫೋಟಕಗಳೊಂದಿಗೆ ಸಿ.ಆರ್.ಪಿ.ಎಫ್ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಹಲವಾರು ಯೋಧರ ಹತ್ಯೆಗೆ ಕಾರಣನಾಗಿದ್ದಾನೆ. ಈ ಭಯೋತ್ಪಾದಕ ಸಂಘಟನೆಗಳ ಹುಟ್ಟಡಗಿಸಬೇಕು. ದೇಶದ ಒಳಗೆ ಭಯೋತ್ಪಾದಕರನ್ನು ತಯಾರು ಮಾಡಿ ದೇಶದ ಏಕತೆ, ಸಾರ್ವಭೌಮತೆ ಮತ್ತು ಅಖಂಡತೆಗೆ ಸವಾಲು ಎಸಗಿ ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ದೇವರನ್ನು ಒಡೆಯುವ ಹುನ್ನಾರವನ್ನು ನಿರಂತರವಾಗಿ ಮಾಡುತ್ತಿರುವ ಪಾಕಿಸ್ತಾನದ ಪಾಪಿ ಕೃತ್ಯವನ್ನು ಖಂಡಿಸುತ್ತೇವೆ. ಭಯೋತ್ಪಾದಕ ಕೃತ್ಯಗಳನ್ನು ಎಸಗುವ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು. ಮುಂದಿ ಇಂಥಹ ಕೃತ್ಯಗಳು ದೇಶದಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸೂಕ್ತ ಕಾನೂನು ರಚಿಸಿ, ಅವಶ್ಯಕವಾದಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ತನ್ನಿ. ಸಾರ್ವಜನಿಕ ನೆಮ್ಮದಿಗಾಗಿ ದೇಶವನ್ನು ಮತ್ತಷ್ಟು ಬಲಪಡಿಸುವ ಯಾವುದೇ ಸರ್ಕಾರದ ಕ್ರಮಕ್ಕೆ ನಾವು ಬೆಂಬಲಿಸುತ್ತೇವೆ ಎಂಬುದಾಗಿ ಮನವಿಯನ್ನು ಸಲ್ಲಿಸಿದರು.
ವಕೀಲರಾದ ಬಿ.ಕೆ.ವೆಂಕಟೇಶ್, ವೇಣುಗೋಪಾಲ್, ಲಕ್ಷ್ಮಿ, ವಿಶ್ವನಾಥ್, ನಾಗರಾಜ್, ಜೆ.ವೆಂಕಟೇಶ್, ಸತ್ಯನಾರಾಯಣಗೌಡ, ಎಸ್.ಅಶೋಕ್, ವಿ.ಸುಬ್ರಮಣಿ, ಎ.ನಾರಾಯಣಸ್ವಾಮಿ, ರವೀಂದ್ರನಾಥ, ಶರತ್ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!