ಶೌಚಾಲಯ ಸಮಸ್ಯೆಯನ್ನು ಬಗೆಹರಿಸಲು ಒತ್ತಾಯ

0
333

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಶೌಚಾಲಯವನ್ನು ನಿರ್ಮಿಸಿಕೊಡುವಂತೆ ರಾಖಿ ಕಟ್ಟುವ ಮೂಲಕ ವಿದ್ಯಾರ್ಥಿನಿಯರು ಬುಧವಾರ ಶಿರಸ್ತೆದಾರ್ ನರೇಂದ್ರಬಾಬು ಅವರನ್ನು ಮನವಿ ಮಾಡಿದರು.
ನಗರದ ತಾಲ್ಲೂಕು ಕಚೇರಿಗೆ ವಿದ್ಯಾರ್ಥಿನಿಯರು ತೆರಳಿ ಕಾಲೇಜಿನ ಸಮಸ್ಯೆಗಳನ್ನು ತಹಶೀಲ್ದಾರರಿಗೆ ವಿವರಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 300 ಮಂದಿ ವಿದ್ಯಾರ್ಥಿನಿಯರು ವಿವಿಧ ಕೋರ್ಸ್ಗಳಲ್ಲಿ ವ್ಯಾಸಂಘ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಶೌಚಾಲಯವಿದ್ದರೂ ಬಾಗಿಲು, ಕಿಟಕಿಗಳಿಲ್ಲ, ನೀರಿನ ವ್ಯವಸ್ಥೆಯಿಲ್ಲ. ಈ ಸಮಸ್ಯೆಯಿಂದಾಗಿ ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತಿದೆ. ದೂರದ ಊರುಗಳಿಂದ ಬರುವ ನಮಗೆ ಮೂಲಭೂತ ಸೌಕರ್ಯಗಳಿಲ್ಲದೆ ಕಷ್ಟ ಪಡುವಂತಾಗಿದೆ. ಸೂಕ್ತ ಕಾವಲಿಲ್ಲದೆ ರಾತ್ರಿ ವೇಳೆ ಪುಂಡು ಪೋಕರಿಗಳು ಬಂದು ಕಿಟಕಿ, ಗಾಜು, ಬಾಗಿಲನ್ನು ಮುರಿದು ಹೋಗುತ್ತಾರೆ. ಗಲೀಜು ಮಾಡಿರುತ್ತಾರೆ. ಈ ಬಗ್ಗೆ ತಾವು ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಸಲ್ಲಿಸಿದರು.
ಎಬಿವಿಪಿಯ ಮಂಜುನಾಥರೆಡ್ಡಿ, ಶ್ರೀರಾಮ್, ನರೇಶ್ಕುಮಾರ್, ವಿದ್ಯಾರ್ಥಿನಿಯರಾದ ಅಂಬಿಕ, ಪಲ್ಲವಿ, ಗೌತಮಿ, ಸೌಜನ್ಯ, ಗಾಯಿತ್ರಿ, ಕಮಲ, ಪವಿತ್ರ, ಸುನಿತ, ಶಾನಾಜ್, ಆಯಿಷಾ ಸುಲ್ತಾನ, ಮೌನಿಕ, ಸುಪ್ರಿಯಾ, ಸಮ್ರೀನ್ ತಾಜ್ ಹಾಜರಿದ್ದರು.
 

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!