20.4 C
Sidlaghatta
Wednesday, July 16, 2025

ಸಂಗೀತ ಸುಧೆಯ ಮೂಲಕ ಗೌರವ ಸಲ್ಲಿಕೆ

- Advertisement -
- Advertisement -

ಅನಾರೋಗ್ಯದಿಂದ ಅಸ್ವಸ್ಥರಾಗಿರುವ ಹಿರಿಯ ಕಲಾವಿದರಿಗೆ ವಿವಿಧ ಕಲಾವಿದರು ಸಂಗೀತ ಸುಧೆಯ ಮೂಲಕ ಗೌರವ ಸಲ್ಲಿಸಿದ ವಿಶಿಷ್ಠ ಘಟನೆ ತಾಲ್ಲೂಕಿನ ಚೀಮನಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.
ತಾಲ್ಲೂಕಿನ ಚೀಮನಹಳ್ಳಿಯ ತಬಲಾ ಕಲಾವಿದ ಸಿ.ಎಂ.ಕೃಷ್ಣಪ್ಪ ತಮ್ಮ ಹದಿನೈದನೇ ವಯಸ್ಸಿನಿಂದಲೇ ತಬಲಾ ಮತ್ತು ಘಟಂ ನುಡಿಸಲು ಅಭ್ಯಾಸ ನಡೆಸಿದ್ದರು. ಹರಿಕಥೆ, ಭಜನೆ, ನಾಟಕಗಳಲ್ಲಿ ತಬಲಾ ಮತ್ತು ಘಟಂ ನುಡಿಸುತ್ತಾ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಕುಸ್ತಿಪಟವೂ ಆಗಿದ್ದ ಇವರು ದಸರಾದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದಿದ್ದರು.
74 ವರ್ಷ ವಯಸ್ಸಿನ ಹಿರಿಯ ಕಲಾವಿದ ಸಿ.ಎಂ.ಕೃಷ್ಣಪ್ಪ ಅನಾರೋಗ್ಯದಿಂದ ಅಸ್ವಸ್ಥರಾಗಿರುವುದನ್ನು ತಿಳಿದ ತಾಲ್ಲೂಕಿನ ಪುರಂದರ ಸಂಗೀತ ಕಲಾ ಬಳಗದ ಕಲಾವಿದರು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು. ‘ಸಂಗೀತ ಕಲಾ ಕುಸುಮ’ ಎಂಬ ಬಿರುದು ನೀಡಿ ಗೌರವಿಸಿದಲ್ಲದೆ, ಕಲಾವಿದರು ವಾದ್ಯ ಸಂಗೀತದೊಂದಿಗೆ ಗೌರವ ಸಲ್ಲಿಸಿದರು.
ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್, ಮುನಿರೆಡ್ಡಿ, ವೆಂಕಟರಾಯಪ್ಪ, ಹನುಮಪ್ಪ, ತಮ್ಮಣ್ಣ, ಮುನಿಬೈರಪ್ಪ, ಶಿವಶಂಕರ, ಶೆಟ್ಟಿಹಳ್ಳಿ ಸೀನಪ್ಪ, ಅಬ್ಲೂಡು ಬೈರಪ್ಪ ಮತ್ತು ಅಕ್ಕಪಕ್ಕದ ಗ್ರಾಮದ ಕಲಾವಿದರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!