ನಗರಪ್ರದೇಶಗಳಲ್ಲಿ ವಲಸಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅನ್ಯಭಾಷಿಕರ ಆಗಮನದಿಂದಾಗಿ ಭಾಷಾ ಸಮಸ್ಯೆಯೂ ಹೆಚ್ಚುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಕನ್ನಡತನ, ಭಾಷೆ ಉಳಿದಿದೆ ಎಂದು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದ ಮುಖ್ಯ ವೃತ್ತದಲ್ಲಿ ಕಾಲೋನಿ ಅಭಿವೃದ್ಧಿ ಸಮಿತಿ ಮತ್ತು ಅಂಬೇಡ್ಕರ್ ಯುವಕಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆದರೆ ಮಾತ್ರ ಮಕ್ಕಳಲ್ಲಿ ಭಾವನೆಗಳ ಅಭಿವ್ಯಕ್ತಿ ಸುಲಭವಾಗುತ್ತದೆ. ಸೃಜನಶೀಲತೆ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ಡಿ.ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗ್ರಾಮದಲ್ಲಿ ಪ್ರಭಾತ್ಭೇರಿ, ಮೆರವಣಿಗೆ ನಡೆಯಿತು.
ಗುತ್ತಿಗೆದಾರ ಶಿವಶಂಕರಪ್ಪ, ಎಂ.ದೇವರಾಜು, ಪಿಳ್ಳಣ್ಣ, ಬಾಬು, ಯುವಕಸಂಘದ ಪ್ರಸಾದ್, ರವಿಕುಮಾರ್. ಎಸ್.ಆರ್.ಮಂಜುನಾಥ್, ನರಸಿಂಹಮೂರ್ತಿ, ಸುರೇಶ್, ರವಿಕುಮಾರ್, ನರಾಜು, ಸತೀಶ್, ಪ್ರಸನ್ನಕುಮಾರ್, ಮುನಿರಾಜು, ಮತ್ತಿತರರು ಇದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -