ಬೇಸಿಗೆ ಕಾಲ ಬಂತೆಂದರೆ ಗ್ರಾಮದ ಆಸ್ತಿಗಳಾದ ಗೋಮಾಳ, ಗುಂಡುತೋಪು, ಬೆಟ್ಟ, ಗುಡ್ಡ ಹಾಗೂ ಅರಣ್ಯಗಳಿಗೆ ಬೆಂಕಿ ಬೀಳುವ ಸಾದ್ಯತೆಗಳು ಹೆಚ್ಚಾಗಿದ್ದು, ಗ್ರಾಮದ ಜನರು ಬೆಂಕಿಯ ಅವಘಡಗಳನ್ನು ತಡೆಯಲು ಅಗತ್ಯ ಮುಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಎಫ್.ಇ.ಎಸ್. ಸಂಸ್ಥೆಯ ಯೋಜನಾಧಿಕಾರಿ ಶಿಲ್ಪಾ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವೇಮಗಲ್ ಗ್ರಾಮದಲ್ಲಿ, ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್. ಇ. ಎಸ್) ಸಂಸ್ಥೆಯು ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಬೆಂಕಿ ತಡೆಗೆ ಜನ ಜಾಗೃತಿ ಆಂದೋಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಗ್ರಾಮವು ಹಚ್ಚಹಸಿರಾದ ೧೦೦ ಎಕರೆಗಿಂತ ಹೆಚ್ಚು ಗೋಮಾಳವನ್ನು ಹೊಂದಿದ್ದು ೬೪ ಕುಟುಂಬಗಳು ಬೇರೆ ಬೇರೆ ರೀತಿಯಲ್ಲಿ ಅವಲಂಬನೆಯನ್ನು ಹೊಂದಿವೆ, ಇವರ ಮುಖ್ಯ ಉದ್ಯೋಗ ಜಾನುವಾರು ಸಾಕಾನಿಕೆ ಆಗಿರುವದರಿಂದ ಗೋಮಾಳವನ್ನು ಬೇಸಿಗೆ ಕಾಲದಲ್ಲಿ ಬೆಂಕಿಬಿಳದಂತೆ ಕಾಪಾಡುವದು ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯ ಪ್ರತಿನಿಧಿಯಾದ ಸೌಭಾಗ್ಯ ಅವರು ಬೆಂಕಿಯ ಅನಾಹುತ ಮತ್ತು ಮುಂಜಾಗೃತಿ ಕ್ರಮಗಳ ವಿಷಯದ ಕುರಿತಾಗಿ ಗ್ರಾಮಸ್ಥರೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡರು.
ಗ್ರಾಮದ ಜನರು ಇಂತಹ ಬೆಂಕಿಯ ಅವಘಡಗಳನ್ನು ತಡೆಯಲು ಅಗತ್ಯ ಮುಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳುಲು ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಚಂದ್ರ ಮತ್ತು ಹರೀಶ್ ಜನರಿಗೆ ಜಾಗೃತಿ ಹಾಡುಗಳನ್ನು ಹಾಡುವದರ ಮೂಲಕ ಬೆಂಕಿಯ ಅನಾಹುತದ ಬಗ್ಗೆ ಮನವರಿಕೆ ಮಾಡಿದರು. ಗ್ರಾಮದ ಎಲ್ಲ ಕುಟುಂಬದವರೂ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು ಹಾಗೂ ಈ ಸಂದರ್ಭದಲ್ಲಿ ಗೋಮಾಳ, ಗುಂಡುತೋಪು ಮತ್ತು ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ಕುರಿತು ಜನರೊಂದಿಗೆ ಚರ್ಚೆ ನಡೆಸಲಾಯಿತು.
- Advertisement -
- Advertisement -
- Advertisement -