ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಹಸಿರು ವಾತಾವರಣ ಉಳಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಅವರ ಮಾತನ್ನು ನಾವು ಕೃತಿಯಾಗಿ ಆಚರಿಸಬೇಕು ಎಂದು ಡಾ. ಅಬ್ದುಲ್ ಕಲಾಂ ಪ್ರಜಾ ಸಮಿತಿ ರಾಜ್ಯಾಧ್ಯಕ್ಷ ವಿ.ಕೃಷ್ಣಪ್ಪ ತಿಳಿಸಿದರು.
ನಗರದಲ್ಲಿ ಮುನೇಶ್ವರಸ್ವಾಮಿ ದೇವಾಲಯದ ಸ್ಥಳದಲ್ಲಿ ಡಾ. ಅಬ್ದುಲ್ ಕಲಾಂ ಪ್ರಜಾ ಸಮಿತಿ ವತಿಯಿಂದ ಗುರುವಾರ 50 ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ಭವಿಷ್ಯದ ಪೀಳಿಗೆಯನ್ನು ಸುಸ್ಥಿರವಾಗಿಡಲು ಪರಿಸರ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ. ಸೋಲಾರ್ ಅಳವಡಿಸಿಕೊಳ್ಳುವುದು, ಮಳೆನೀರು ಸಂಗ್ರಹಿಸಿಕೊಳ್ಳುವುದು, ಖನಿಜ ತೈಲಗಳ ಅವಲಂಬನ ಕಡಿಮೆ ಮಾಡಿ, ಪರ್ಯಾಯ ಶಕ್ತಿಮೂಲಗಳಾದ ಸೂರ್ಯನ ಬಿಸಿಲಿನ ಶಾಖ ಹಿಡಿದಿಟ್ಟುಕೊಳ್ಳಬೇಕು. ಇಂಥ ಬದಲಾವಣೆಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಕಲುಷಿತಗೊಳ್ಳುತ್ತಿರುವ ವಾತಾವರಣವನ್ನು ಶುದ್ಧಗೊಳಿಸದಿದ್ದರೆ ಜೀವ ಜಂತುಗಳ ಆರೋಗ್ಯಕರ ಬದುಕು ಹದಗೆಡಲಿದೆ. ಪ್ರತಿಯೊಬ್ಬರೂ ಹಸಿರನ್ನು ಹೆಚ್ಚಿಸಲು ತಮ್ಮ ಸಮಯ ನೀಡಬೇಕಾದ ತುರ್ತಿದೆ. ಹಸಿರು ಜೀವ ಜಂತುಗಳ ಉಸಿರು. ಇದನ್ನು ಮನಗಾಣದ ಮನಷ್ಯ ಹಸಿರಿಗೆ ನಿತ್ಯವೂ ಕೊಡಲಿ ಪೆಟ್ಟು ನೀಡುತ್ತಿದ್ದಾನೆ. ಮತ್ತೊಂದು ಕಡೆ ಆಧುನಿಕ ಸೌಲಭ್ಯ ಮತ್ತು ಅಭಿವೃದ್ಧಿಯೂ ಕೂಡ ಪರಿಸರ ನಾಶಕ್ಕೆ ಕಾರಣವಾಗಿದೆ. ಎಲ್ಲರೂ ತಮ್ಮ ಮನೆ ಸುತ್ತ ಮುತ್ತ ಗಿಡ ನೆಡುವ ಮೂಲಕ ಹಸಿರು ವಾತಾವರಣ ನಿರ್ಮಿಸಬೇಕು. ಆ ಮೂಲಕ ಸಮಾಜದಲ್ಲಿ ಪರಿಸರ ಜಾಗೃತಿ ಮೂಡಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಆರೋಗ್ಯಕರ ಪರಿಸರ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ಡಾ. ಅಬ್ದುಲ್ ಕಲಾಂ ಪ್ರಜಾ ಸಮಿತಿ ಸಂಸ್ಥಾಪಕ ಶಂಕರ್ ಧರ್ಮನ್, ರಾಮಚಂದ್ರಪ್ಪ, ಮುನಿರಾಜು, ಸುಂದರ್, ವಿ.ಆನಂದ್, ರಾಜಮ್ಮ, ಸುನಂದಮ್ಮ ಹಾಜರಿದ್ದರು.
- Advertisement -
- Advertisement -
- Advertisement -