19.6 C
Sidlaghatta
Monday, February 23, 2026

ಆಲಿಕಲ್ಲಿನ ಮಳೆಯಿಂದಾಗಿ ಕೋಟಿಗೂ ಅಧಿಕ ದ್ರಾಕ್ಷಿ ನಾಶ

- Advertisement -
- Advertisement -

ತಾಲ್ಲೂಕಿನ ಮೇಲೂರು ಮಳ್ಳೂರು ವ್ಯಾಪ್ತಿಯಲ್ಲಿ ಮಂಗಳವಾರ ಬಿದ್ದ ಆಲಿಕಲ್ಲಿನ ಮಳೆ ಹಾಗೂ ಬಿರುಗಾಳಿಯಿಂದಾಗಿ ಸುಮಾರು ಒಂದು ಕೋಟಿ ರೂಗಳಿಗೂ ಅಧಿಕ ದ್ರಾಕ್ಷಿ ಬೆಳೆ ನಷ್ಟವುಂಟಾಗಿದೆ.
ಉತ್ತಮ ದ್ರಾಕ್ಷಿ ಫಸಲು ಬಿಟ್ಟಿದ್ದು, ಮಾರಾಟ ಮಾಡಬೇಕಾದ ಸಮಯದಲ್ಲಿ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಗೊಂಚಲು ಗೊಂಚಲು ದ್ರಾಕ್ಷಿ ನೆಲಕ್ಕೆ ಉದುರಿದೆ. ಕಳೆದ ಎರಡು ವರ್ಷಗಳಿಂದಲೂ ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಬೀಳುವ ಆಲಿಕಲ್ಲಿನ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಾರೆ.
ಮೇಲೂರು ಬಿ.ಎನ್.ರವಿಕುಮಾರ್ ಅವರ 11 ಎಕರೆ ಕಪ್ಪು ದಿಲ್ಖುಷ್ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿ ಸುಮಾರು 50 ಲಕ್ಷ ರೂಗಳಷ್ಟು ನಷ್ಟವಾಗಿದೆ. ಕೆ.ಎಸ್.ನಂಜೇಗೌಡರ ಒಂದೂವರೆ ಎಕರೆ ತೋಟದಲ್ಲಿ ಫಸಲಿಗೆ ಬಂದಿದ್ದ ದಿಲ್ಖುಷ್ ದ್ರಾಕ್ಷಿ ನಾಶವಾಗಿ ಸುಮಾರು 12 ಲಕ್ಷ ರೂಗಳಷ್ಟು ನಷ್ಟವನ್ನು ಅನುಭವಿಸುವಂತಾಗಿದೆ. ಇನ್ನೂ ಹಲವಾರು ಮಂದಿ ರೈತರ ಬೆಳೆಗಳು ನಾಶವಾಗಿದ್ದು, ನಷ್ಟವಾಗಿರುವ ಹಣ ಕೋಟಿಗೂ ಅಧಿಕವಾಗಲಿದೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!