19 C
Sidlaghatta
Sunday, October 12, 2025

ಒಕ್ಕೂಟದಿಂದ ಸ್ವ-ಸಹಾಯ ಸಂಘಗಳ ಬಲವರ್ಧನೆ

- Advertisement -
- Advertisement -

ಸ್ವ-ಸಹಾಯ ಸಂಘಗಳು ಬಲವರ್ಧನೆಗೊಳ್ಳಲು ಒಕ್ಕೂಟ ಸಹಕಾರಿಯಾಗಲಿದೆ ಎಂದು ತಾಲ್ಲೂಕು ಯೋಜನಾಧಿಕಾರಿ ಡಿ.ಯೋಗೀಶ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಈಚೆಗೆ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ನೂತನ ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವ-ಸಹಾಯ ಸಂಘಗಳ ವಾರದಸಭೆ ದಾಖಲಾತಿ, ನಿರ್ವಹಣೆ, ಸಾಲದ ವ್ಯವಹಾರ, ಇವೆಲ್ಲವೂ ಉತ್ತಮವಾಗಿ ನಿರ್ವಹಿಸಲು ನೂತನವಾಗಿ ರಚಿಸಲಾದ ಒಕ್ಕೂಟಗಳು ಸಹಕಾರಿಯಾಗಲಿದೆ ಎಂದರು.
ಒಟ್ಟು ೪೮ ಜನ ನೂತನ ಪದಾಧಿಕಾರಿಗಳು ತರಬೇತಿಯಲ್ಲಿ ಹಾಜರಾಗಿದ್ದು. ತರಬೇತಿಯಲ್ಲಿ ಹಾಜರಾದ ಪದಾಧಿಕಾರಿಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ತರಬೇತಿ ನೀಡಿ ಒಕ್ಕೂಟದ ಪದಾಧಿಕಾರಿಗಳ ಜವಬ್ದಾರಿ, ನಾಯಕತ್ವ, ಒಕ್ಕೂಟ ಸಭೆ ನಿರ್ವಹಣೆ, ಸಾಲ ಉಪಸಮಿತಿಯ ಸಭೆ ನಿರ್ವಹಣೆ ಬಗ್ಗೆ ಬಶೆಟ್ಟಹಳ್ಳಿ ವಲಯದ ಮೇಲ್ವಿಚಾರಕರಾದ ಶಶಿಕುಮಾರ್ ಹಾಗು ಜಂಗಮಕೋಟೆ ವಲಯದ ಮೇಲ್ವಿಚಾರಕಿ ಲಕ್ಷ್ಮೀ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಲಯದ ಸೇವಾಪ್ರತಿನಿಧಿಗಳು ಸೇರಿದಂತೆ ವಲಯದ ಮೇಲ್ವಿಚಾರಕಿಯರಾದ ಮಮತಾ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!