ತಾಲ್ಲೂಕಿನ ಗಾಂಡ್ಲಚಿಂತೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುರುವಾರ ‘ವಿಶ್ವ ಶೌಚಾಲಯ’ ದಿನಾಚರಣೆಯನ್ನು ವಿದ್ಯಾರ್ಥಿಗಳು ಶಾಲೆಯ ಶೌಚಾಲಯವನ್ನು ಶುಚಿಗೊಳಿಸಿ, ಐಕ್ಯತಾ ಪ್ರತಿಜ್ಞೆಯನ್ನು ಪಾಠಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ವಿ.ಎಂ.ಮಂಜುನಾಥ್ ಶೌಚಾಲಯ ಬಳಕೆ, ನೀರು, ಗಾಳಿ, ಬೆಳಕಿನ ಅಗತ್ಯ, ಕನ್ನಡಿ, ಸೋಪು, ಟವಲು, ಪೆನಾಯಿಲ್, ಚಪ್ಪಲಿ ಮುಂತಾದ ವಸ್ತುಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಸೇವಾದಳ ವೆಂಕಟರೆಡ್ಡಿ ವಿದ್ಯಾರ್ಥಿಗಳಿಗೆ ‘ರಾಷ್ಟ್ರೀಯ ಐಕ್ಯತಾ ಪ್ರಮಾಣವಚನ’ವನ್ನು ಬೋಧಿಸಿದರು.
ಶಿಕ್ಷಕರಾದ ಮನಸ್ವಿ, ಗೀತಾ ಮತ್ತಿತರರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







