27 C
Sidlaghatta
Sunday, February 22, 2026

ಜಾನುವಾರು ಸಾಕಾಣಿಕೆ ಕುರಿತು ಅರಿವು ಕಾರ್ಯಕ್ರಮ

- Advertisement -
- Advertisement -

ತಾಲ್ಲೂಕಿನಲ್ಲಿ ಬಹುತೇಕರು ಹೈನುಗಾರಿಕೆಯನ್ನು ಹೊಂದಿರುವುದರಿಂದ ಹಸು, ಮೇಕೆ, ಕುರಿ, ಕೋಳಿಗಳ ಸಂರಕ್ಷಣೆಯನ್ನು ಮಾಡುವುದು ಅವಶ್ಯಕ ಎಂದು ಗಂಜಿಗುಂಟೆ ಗ್ರಾಮ ಪಂಚಾಯತಿಯ ಪಶು ವೈದ್ಯ ಬಾಬು ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೊಪ್ಪಾರ್ಲಹಳ್ಳಿ ಗ್ರಾಮದಲ್ಲಿ ಈಚೆಗೆ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್. ಇ. ಎಸ್) ಸಂಸ್ಥೆಯು ಹಮ್ಮಿಕೊಂಡಿದ್ದ ಜಾನುವಾರು ಸಾಕಾಣಿಕೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಹೆಚ್ಚು ಮಳೆಯಿಂದಾಗಿ ಕಳೆದ ವರ್ಷ ಸುಮಾರು ಕುರಿಗಳು ಸತ್ತು ಹೋದವು. ಅದರಿಂದ ಎಷ್ಟೋ ಕುಟುಂಬಗಳು ಹಾನಿಗೊಳಗಾದವು. ಆದ್ದರಿಂದ ನಾವು ನೀವುಗಳು ನಮ್ಮ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳುತ್ತೇವೆ ಅಷ್ಟೇ ಸ್ವಚ್ಛವಾಗಿ ದನ ಹಾಗೂ ಕುರಿ ದೊಡ್ಡಿಗಳನ್ನು ಇಟ್ಟುಕೊಳ್ಳಬೇಕು. ಇಲ್ಲವಾದರೆ ರೋಗಾಣುಗಳು ಕಾಣಿಸಿಕೊಂಡು ನಮ್ಮ ಜಾನುವಾರಗಳು ರೋಗಗಳಿಗೆ ತುತ್ತಾಗುತ್ತವೆ. ಹೆಚ್ಚು ಬೆಲೆಬಾಳುವ ಹಸುಗಳಾದ ಹೆಪ್, ಜೆರ್ಸಿ ಇವುಗಳಿಗೆ ವಿಮೆಮಾಡುವುದು ಅವಶ್ಯಕ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯವರು ಜನರಿಂದ ೨೦ ಕುರಿಗಳಿಗೆ ವಿಮೆಯನ್ನು ಮಾಡಿಸಿದರು. ವೈದ್ಯಾಧಿಕಾರಿ ಕುರಿಗಳಿಗೆ ವಿಮೆಯ ಒಲೆಗಳನ್ನು ಹಾಕಿ ಅವುಗಳಿಗೆ ಚುಚ್ಚುಮದ್ದನ್ನು ನೀಡಿದರು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯ ಯೋಜನಾಧಿಕಾರಿಗಳಾದ ಶಿಲ್ಪಾ, ನಿಖತ, ಪ್ರತಿನಿಧಿಯಾದ ಗೋಪಿಚಂದ್ರ, ಸೌಭಾಗ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!