ನಟರಾಜೋತ್ಸವ ಮತ್ತು ಗಾನಾಂಜಲಿ ಸಂಗೀತ ಕಾರ್ಯಕ್ರಮ

- Advertisement -
- Advertisement -

ಸಂಗೀತ ನಾಟ್ಯ ಸಂಸ್ಕೃತಿಗಳು ಇಡೀ ವಿಶ್ವ ಜನಾಂಗವನ್ನು ಅನಾದಿಕಾಲದಿಂದಲೂ ಪೊರೆಯುತ್ತ ಬಂದಿದೆ. ಈ ಸಂಗೀತವನ್ನು ಸಮಾಜಕ್ಕೆ ದಯಪಾಲಿಸಿದ ನಮ್ಮ ಅನಾದಿ ಪರಂಪರೆಗೆ, ಇಂದಿಗೂ ಸಂಗೀತವನ್ನು ಭಕ್ತಿ ಶ್ರದ್ಧೆಗಳಿಂದ ಕಲಿತು ಎಲ್ಲೆಲ್ಲೂ ಗಾನ ಗಂಗೆಯನ್ನು ಹರಿಸುತ್ತಿರುವ ಆಚಾರ್ಯ ಪರಂಪರೆಗೆ, ಕಲಾವಿದ ಪರಂಪರೆ ಮತ್ತು ಕಲಾರಸಿಕ ಪರಂಪರೆಗಳಿಗೆ ನಾವು ಕೃತಜ್ಞರಾಗಿರೋಣ ಎಂದು ಮಾಜಿ ಯೋಧ ಎಸ್‌.ವಿ.ಅಯ್ಯರ್‌ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಮಯೂರಿ ನಾಟ್ಯಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಟರಾಜೋತ್ಸವ ಮತ್ತು ಗಾನಾಂಜಲಿ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ದೇಗುಲಗಳೇ ಸಂಗೀತ ಸಂಸ್ಕೃತಿಗಳನ್ನು ಪಸರಿಸುವ ಕೇಂದ್ರಗಳಾಗಿದ್ದವು. ಇಂದಿನ ಒತ್ತಡದ ಪ್ರಾಪಂಚಿಕ ಬದುಕಿನಲ್ಲಿ ಸಂಗೀತವೆಂಬುದೊಂದೇ ನಮಗೆ ಸುಲಭವಾಗಿ ದಕ್ಕುವ ವಿಶ್ರಾಂತ ತಾಣ. ಇವೆಲ್ಲದರ ಜೊತೆಗೆ ನಮ್ಮ ಪ್ರಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಗೀತ ನಮ್ಮ ಬದುಕಿನಿಂದ ಕಳೆದುಹೋಗದಂತೆ ಎಚ್ಚರವಹಿಸಿ ನಮ್ಮ ಮತ್ತು ಮುಂದಿನ ತಲೆಮಾರುಗಳ ಬದುಕು ಸಂಗೀತವೆಂಬ ಶ್ರೇಷ್ಠತೆಯನ್ನು ಎಂದೆಂದೂ ಅನುಭಾವಿಸುವ ಅವಕಾಶವನ್ನು ಜೀವಂತವಾಗಿರಿಸಲು ಪ್ರಯತ್ನವನ್ನು ಸಹಾ ಈ ಆಚರಣೆ ಪ್ರೇರೇಪಿಸುವಂತದ್ದಾಗಿದೆ ಎಂದು ಹೇಳಿದರು.
ವಿದುಷಿ ಎಸ್.ವಿ.ಭಾಗ್ಯಲಕ್ಷ್ಮಿ ಅಯ್ಯರ್ ಮಾತನಾಡಿ, ನೃತ್ಯ ಹಾಗೂ ಸಂಗೀತದಂತಹ ಕಲಾ ಕ್ಷೇತ್ರಗಳಿಂದ ಗುರು ಶಿಷ್ಯ ಪರಂಪರೆಯ ಪಾವಿತ್ರ್ಯತೆ ಇನ್ನೂ ಉಳಿದಿದೆ. ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ವಿವಿಧ ಕಲೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು. ಇದರಿಂದ ಕನಿಷ್ಠ ಕಲೆಯನ್ನು ಆಸ್ವಾದಿಸುವ ಮನಸ್ಥಿತಿ ಅವರಲ್ಲಿ ರೂಢಿಸಿದಂತಾಗುತ್ತದೆ ಎಂದು ನುಡಿದರು.
ಬೆಳಿಗ್ಗೆಯಿಂದ ನಡೆದ ಗಾನಾಂಜಲಿ ಸಂಗೀತ ಕಾರ್ಯಕ್ರಮದಲ್ಲಿ ಶೋಭಿತ, ಭುವನ, ನಾಗಮಣಿ, ಶೈಲಜ, ಮಿಲನ, ಯಶಿತ, ನಿತ್ಯಶ್ರೀ, ಪಲ್ಲವಿ, ಮಾನಸ, ಪೂರ್ಣಶ್ರೀ, ಅನನ್ಯರಾಜು, ಅನನ್ಯ, ಕುಸುಮ, ಶ್ರಾವಣಿ, ಮಹಾಲಕ್ಷ್ಮಿ, ತನ್ಮಯಿಸಿಂಗ್, ವಾಸವಿ, ಹಿಮಬಿಂದು, ತನುಶ್ರೀ, ಎಸ್.ವಿ.ಭಾಗ್ಯಲಕ್ಷ್ಮಿ ಅಯ್ಯರ್, ಮಂಜುಳಾ ಜಗದೀಶ್, ಚಿಂತಲಪಲ್ಲಿ ಸೋಮಶೇಖರ್, ಸಂಗೀತವನ್ನು ನಡೆಸಿಕೊಟ್ಟರೆ, ಸಂಜೆ ನಾಟ್ಯಾಂಜಲಿ ಭರತನಾಟ್ಯ ಕಾರ್ಯಕ್ರಮದಲ್ಲಿ ಪರಿಣಿತ, ನಿಹಾರಿಕ, ಭುವನ, ಶೋಭಿತ, ಶ್ವೇತ, ಹರಿಣಿ, ವನಿತ, ಪಲ್ಲವಿ, ಮಿಲನ, ಯಶಿತ, ನಿತ್ಯಶ್ರೀ, ಪೂರ್ಣಶ್ರೀ, ಮಾನಸ, ಪಲ್ಲವಿ, ನವನೀತ, ಯಶಸ್ವಿನಿ, ಭರಣಿ, ಕುಸುಮ, ಶ್ರಾವಣಿ, ವಾಸವಿ, ಅನನ್ಯರಾಜು, ಮಹಾಲಕ್ಷ್ಮಿ, ತನ್ಮಯಿಸಿಂಗ್, ಗುಣಶ್ರೀ, ಹರ್ಷಿತ, ಪರಿಣಿತ, ತನುವಿ ಮುಂತಾದವರಿಂದ ನೃತ್ಯ ಪ್ರದರ್ಶನ ನಡೆಯಿತು. ವಿದ್ವಾನ್ ಕಿಶೋರ್ ಕುಮಾರ್ ಹಾಜರಿದ್ದರು

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!