ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಈಗ ಜಾತ್ರೆಗಳ ಸಂಭ್ರಮ. ಒಂದೊಂದು ದಿನ ಒಂದೊಂದು ಗ್ರಾಮದಲ್ಲಿ ಜಾತ್ರೆಗಳು ನಡೆಯುತ್ತಿವೆ.
`ಜನರ ಜೀವಶಕ್ತಿ’ಯಾಗಿ ಮಳೆ ಸುರಿದು ಧಾನ್ಯ ರಾಶಿ ತುಂಬಿ ತುಳುಕಾಡಲಿ ಎಂಬ ಆಶಾಭಾವನೆಯಿಂದ ಊರಿನ ದೇವತೆ, ದೇವರುಗಳನ್ನು ಪೂಜಿಸುವ ಸಾಂಘಿಕ ಉತ್ಸವ. ಗಂಗಮ್ಮ, ಮಾರಮ್ಮ, ದುಗ್ಗಮ್ಮ, ಸಪ್ಲಮ್ಮ, ಚೌಡೇಶ್ವರಮ್ಮ, ಸಲ್ಲಾಪುರಮ್ಮ, ಮೈಲಮ್ಮ, ಮುಡುಗಲಮ್ಮ , ಈಶ್ವರ, ಈರಲಪ್ಪ, ಮುನೇಶ್ವರ, ಆಂಜನೇಯ ಎಲ್ಲ ದೇವರುಗಳಿಗೆ ವಿಶೇಷ ಪೂಜೆ ನಡೆಯುತ್ತದೆ.
ಊರ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ನಾಗಮಂಗಲ ಗ್ರಾಮದ ಕಲಾವಿದರು ಪ್ರದರ್ಶಿಸಿದರು.
ಎನ್.ಟಿ.ಪ್ರಕಾಶ್ಗೌಡ, ಶಂಕರಪ್ಪ, ನಾಗಪ್ಪ, ತಮ್ಮಣ್ಣ, ಶಿವಕುಮಾರ್, ಶ್ರೀನಿವಾಸಗೌಡ, ಚಂದ್ರಪ್ಪ, ಮುನಿನಾರಾಯಣಪ್ಪ, ಕನಕರಾಜು, ಕೃಷ್ಣಯ್ಯಶೆಟ್ಟಿ, ಶ್ರೀರಾಮಪ್ಪ, ಚನ್ನಕೇಶವ, ಮುನಿರಾಜು, ರಾಜಣ್ಣ, ಎನ್.ಡಿ.ನಾರಾಯಣಪ್ಪ, ವೆಂಕಟೇಶ್, ಸೀತಾರಾಮಶಾಸ್ತ್ರಿ, ವೆಂಕಟಾಚಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -