22.1 C
Sidlaghatta
Monday, October 27, 2025

ಪ್ರಕೃತಿಯನ್ನೇ ದೇವರೆಂದು ಪೋಜಿಸಿ

- Advertisement -
- Advertisement -

ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು. ಮರಗಳ ಮಾರಣ ಹೋಮದಿಂದ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಬೆಳೆ ನಷ್ಟವುಂಟಾಗುತ್ತಿದೆ ಎಂದು ಮುಕ್ತಿನಾಗ ದೇವಾಲಯದ ಧರ್ಮಕರ್ತರಾದ ಶ್ರೀ ಸುಬ್ರಮಣ್ಯ ಶಾಸ್ತ್ರಿಗಳು ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಗುರುವಾರ ೧೧ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಆರ್ಶಿವಚನ ನೀಡಿ ಅವರು ಮಾತನಾಡಿದರು. ವೃಕ್ಷಗಳ ರಕ್ಷಣೆಯನ್ನು ಮಾಡುವುದೂ ಕೂಡ ಧರ್ಮವನ್ನು ರಕ್ಷಿಸಿದಂತೆಯೇ, ಸಸ್ಯ ಸಂಪತ್ತಿನಲ್ಲಿ ದೇವರನ್ನು ಕಾಣಬೇಕೆಂದರು.
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕನ್ನಡತಿ, ಚಾಮುಂಡೇಶ್ವರಿಯ ದರ್ಶನಕ್ಕಾಗಿ ಪದೇ ಪದೇ ಮೈಸೂರಿಗೆ ಭೇಟಿ ನೀಡುವ ಅವರು ಇಲ್ಲಿನ ಮಳೆ ಬೆಳೆಯ ಬಗ್ಗೆ, ನೀರು ಸಂಗ್ರಹಣೆಯ ಬಗ್ಗೆ ಹಾಗೂ ರೈತರ ಸಂಕಷ್ಟದ ಬಗ್ಗೆ ಸ್ವಷ್ಟವಾಗಿ ಅರಿತಿದ್ದರೂ ಕನ್ನಡಿಗರಿಗೆ ತೊಂದರೆ ಉಂಟುಮಾಡುವುದು ಶೋಭೆಯಲ್ಲ ಎಂದರು.
ಸಂಜೆ ತಿರುಮಲ ತಿರುಪತಿ ಪುರೋಹಿತರಾದ ಶ್ರೀನಿವಾಸ ರಾಘವನ್ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ನೂರಾರು ದಂಪತಿಗಳು ಪಾಲ್ಗೂಂಡಿದ್ದರು. ಸುಮಂಗಲಿಯರು, ದುರ್ಗಾದೇವಿಯ ಕುಂಕುಮಾರ್ಚನೆಯಲ್ಲಿ ಪಾಲ್ಗೂಂಡಿದ್ದರು.
ಇದಕ್ಕೂ ಮುನ್ನ ಗ್ರಾಮ ದೇವತೆ ಶ್ರೀ ಲಕ್ಷೀನರಸಿಂಹಸ್ವಾಮಿ ದೇವಾಲಯಕ್ಕೆ ಕಲಶ ಹೊತ್ತ ಸುಮಂಗಲಿಯರು ವಿವಿಧ ಸಾಂಸೃತಿಕ ಕಲಾತಂಡಗಳೊಂದಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೂಂಡಿದ್ದರು.
ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮದರ್ಶಿ ಎಂ.ನಾರಾಯಣಸ್ವಾಮಿ, ಎಂ,ಆರ್.ಮುನಿಕೃಷ್ಣಪ್ಪ, ಕೇಶವ ನಾರಾಯಣ, ಜಂಗಮಕೋಟೆ ಜಯರಾಂ, ಗೋಪಾಲಪ್ಪ, ಎಚ್.ವಿ.ರಾಮಕೃಷ್ಣಪ್ಪ ಮತ್ತಿತರರು ಇದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!