24.1 C
Sidlaghatta
Friday, October 10, 2025

ವಿಜಯ ದಶಮಿ ಅಂಗವಾಗಿ ಶಮೀ ವೃಕ್ಷ ಪೂಜೆ

- Advertisement -
- Advertisement -

Sidlaghatta (chikkaballapur district) : ನಾಡಿನುದ್ದಕ್ಕೂ ವೈಭವದಿಂದ ಆಚರಿಸಲ್ಪಡುವ ನವರಾತ್ರಿ ಹಬ್ಬದ ಕೊನೆಯ ದಿನದಂದು ಶಿಡ್ಲಘಟ್ಟ ನಗರದ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶಮೀ (ಬನ್ನಿ) ವೃಕ್ಷ ಪೂಜೆಯನ್ನು ಧಾರ್ಮಿಕ ಶ್ರದ್ಧೆಯಿಂದ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನ ಸಿಂಧು ಅವರು ದುಷ್ಟರ ಶಿಕ್ಷೆ ಹಾಗೂ ಶಿಷ್ಟರ ರಕ್ಷಣೆಯ ಸಂಕೇತವಾಗಿ ಅಷ್ಟ ದಿಕ್ಕುಗಳಿಗೂ ಬಾಣಗಳನ್ನು ಬಿಟ್ಟರು. ಈ ಸಂದರ್ಭದಲ್ಲಿ ವೇದಬ್ರಹ್ಮ ದಾಶರಥಿ ಭಟ್ಟಾಚಾರ್ಯರು ಶಮೀ ವೃಕ್ಷ ಪೂಜೆಯ ಮಹತ್ವವನ್ನು ವಿವರಿಸಿ, ಪಾಪನಾಶಕ ಹಾಗೂ ಶತ್ರು ವಿಜಯದ ಸಂಕೇತವಾದ ಶಮೀ ವೃಕ್ಷವು ಪಾಂಡವರ ಕಾಲದಿಂದಲೂ ಮಹತ್ವ ಪಡೆದಿದೆ ಎಂದು ತಿಳಿಸಿದರು. ಅರ್ಜುನನು ಯುದ್ಧಾಸ್ತ್ರಗಳನ್ನು ಶಮೀ ವೃಕ್ಷದಲ್ಲಿ ಅಡಗಿಸಿ ಕೌರವರ ಕಣ್ಣಿಗೆ ಕಾಣದಂತೆ ಉಳಿಸಿಕೊಂಡಿದ್ದನೆಂಬ ಪ್ರಸಂಗವನ್ನು ಅವರು ನೆನಪಿಸಿದರು.

ಪೂಜಾ ವಿಧಿ ಮುಗಿದ ನಂತರ ಮಹಾ ಮಂಗಳಾರತಿ ನಡೆಯಿತು. ಭಕ್ತರು ಶಮೀ ವೃಕ್ಷದ ಎಲೆಗಳನ್ನು ಮುಡಿಗೇರಿಸಿಕೊಂಡು, ಕೆಲವರು ಮನೆಗೆ ಕೊಂಡೊಯ್ದು ಪೂಜಿಸಿದರು. ವಿಜಯದಶಮಿಯ ಈ ಸಂಪ್ರದಾಯವು ಸಾಂಪ್ರದಾಯಿಕ ಧಾರ್ಮಿಕ ನಂಬಿಕೆ ಮತ್ತು ಜನಜೀವನದಲ್ಲಿ ಹಸಿರು-ಶಾಂತಿ ನೆಮ್ಮದಿಯ ಸಂಕೇತವೆಂದು ಭಟ್ಟಾಚಾರ್ಯರು ವಿವರಿಸಿದರು.

ಕಾರ್ಯಕ್ರಮದಲ್ಲಿ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಬಳೆ ರಘು, ಸಂಚಾಲಕ ರೂಪಸಿ ರಮೇಶ್, ಕಾರ್ಯದರ್ಶಿ ಎಲ್. ಮಧುಸೂಧನ್, ಕೋಟೆ ಸೋಮೇಶ್ವರಸ್ವಾಮಿ ಅಭಿವೃದ್ದಿ ಸಮಿತಿ ಅಧ್ಯಕ್ಷ ನಾಗರಾಜ್ ಹಾಗೂ ಭಕ್ತರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!