Kothanur, Sidlaghatta : ತೀವ್ರ ಕುತೂಹಲ ಕೆರಳಿಸಿದ್ದ ಕೊತ್ತನೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಮತ್ತು 5 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ವಿಜೇತರಾದರು.
ಸಾಮಾನ್ಯ ಮೀಸಲು ಸ್ಥಾನದಿಂದ ಕೆ.ವಿ.ಜಗದೀಶ್ರಡ್ಡಿ, ಗಿರಿಧರ್, ಡಿ.ಎಂ.ರಘುನಾಥರೆಡ್ಡಿ, ಸಿ.ಕೆ.ನಾರಾಯಣಸ್ವಾಮಿ, ಕೆ.ಸಿ.ನಾರಾಯಣಸ್ವಾಮಿ, ಎಸ್.ಕೆ.ರಾಮಯ್ಯ, ಕೆ.ಆರ್.ವೇಣುಗೋಪಾಲರೆಡ್ಡಿ, ಪ.ಜಾತಿ ಮೀಸಲು ಸ್ಥಾನದಿಂದ ಉತ್ತನಳ್ಳಪ್ಪ, ಕೆ.ಸಿ.ಚಂದ್ರಶೇಖರ್, ಬಿಸಿಎಂ ಎ ವರ್ಗದಿಂದ ಮಂಜುಳಮ್ಮ, ಬಿಸಿಎಂ ಬಿ ವರ್ಗದಿಂದ ರಾಜಣ್ಣ, ಮಹಿಳಾ ಮೀಸಲು ಕ್ಷೇತ್ರದಿಂದ ಎ.ಮಂಜುಳ, ಮಂಜುಳಮ್ಮ ವಿಜೇತರಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕೆ.ಎಸ್.ಭಾಸ್ಕರರೆಡ್ಡಿ ಕಾರ್ಯನಿರ್ವಹಿಸಿದರು.








