
ಚಿಂತಾಮಣಿ 220/66 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಕವಿಪ್ರನಿನಿ ವತಿಯಿಂದ ನಿರ್ವಹಣಾ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14, 2025 ರಂದು ಬೆಳಿಗ್ಗೆ 9.00 ರಿಂದ ಸಂಜೆ 5.00ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಚಿಂತಾಮಣಿ, ಶೆಟ್ಟಿಮಾದಮಂಗಲ, ಮಸ್ತೇನಹಳ್ಳಿ, ತಳಗವಾರ, ಚೀಮಂಗಳ, ವೈ-ಹುಣಸೇನಹಳ್ಳಿ, ಕೆ.ರಾಗುಟ್ಟಹಳ್ಳಿ, ಬೊಮ್ಮೆನಲ್ಲಿ ಕ್ರಾಸ್, ಏನಿಗದಳೆ, ಶಿಡ್ಲಘಟ್ಟ, ಮೇಲೂರು, ನಂದಿಗಾನಹಳ್ಳಿ, ಜಿ.ಕೋಡಿಹಳ್ಳಿ, ಇರಗಂಪಳ್ಳಿ, ಎಮ್.ಗೊಲ್ಲಹಳ್ಳಿ, ಗಂಜಿಗುಂಟೆ, ಬುರುಡುಗುಂಟೆ, ಪಲ್ಲಿಚರ್ಲು ಮತ್ತು ದಿಟ್ಟೂರಹಳ್ಳಿ 66/11 ಕೆ.ವಿ ಉಪ ವಿದ್ಯುತ್ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಇದರ ಪರಿಣಾಮವಾಗಿ ಶಿಡ್ಲಘಟ್ಟ ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.