19.1 C
Sidlaghatta
Friday, December 26, 2025
Home Blog Page 18

ಶಿಡ್ಲಘಟ್ಟ ಸಾದಲಿಯಲ್ಲಿ ಶ್ರೀ ವೀರಗಾರಸ್ವಾಮಿ ದೇವರ ನೂತನ ದೇವಸ್ಥಾನ ಉದ್ಘಾಟನೆ

0
Sidlaghatta Sadali Veeragaraswamy temple Inauguration

Sadali, Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ಶ್ರೀ ವೀರಗಾರಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಭವ್ಯವಾಗಿ ಶ್ರೀ ವೀರಗಾರಸ್ವಾಮಿ ದೇವರ ನೂತನ ದೇವಸ್ಥಾನ ಕಟ್ಟಡ ಉದ್ಘಾಟನೆ, ಶಾಶ್ವತ ಸ್ಥಿರಶಿಲಾಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಶ ಸ್ಥಾಪನೆ ಮಹೋತ್ಸವ ನಡೆಯಿತು.

ಶುಕ್ರವಾರದಿಂದಲೇ ಪ್ರಾರಂಭವಾದ ಪೂಜಾ ಕೈಂಕರ್ಯಗಳು ಭಾನುವಾರದವರೆಗೂ ನಿರಂತರವಾಗಿ ನಡೆದವು. ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ, ಪ್ರಸಿದ್ಧ ಶಿಲ್ಪಿ ಮತ್ತು ಮೈಸೂರಿನ ಡಾ. ಅರುಣ್ ಯೋಗಿರಾಜ್ ಅವರು ದೇವರ ವಿಗ್ರಹದ ನೇತ್ರಮಿಲನ ಕಾರ್ಯಕ್ರಮ ನೆರವೇರಿಸಿದರು.

ಈ ಭವ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾದಲಿಯ ಜೊತೆಗೆ ರಾಮಗೊಂಡನಹಳ್ಳಿ, ಬಿದಿರಹಳ್ಳಿ, ಮಹಾದೇವಕೊಡಿಗೇಹಳ್ಳಿ, ವೆಂಕಟೇನಹಳ್ಳಿ, ಧರ್ಮಪುರಿ, ಥಣಿಸಂದ್ರ, ದೇವರಜೀವನಹಳ್ಳಿ, ಸುಗಟೂರು, ಜಂಗಮಕೋಟೆ, ಮಂಚನಬಲೆ, ಪಾಪನಹಳ್ಳಿ, ಗೌಡನಹಳ್ಳಿ, ಅಮ್ಮಗಾರಹಳ್ಳಿ, ಮರದೇನಹಳ್ಳಿ, ನಲ್ಲನಾರನಹಳ್ಳಿ ಗ್ರಾಮಗಳ ಕುಲಬಾಂಧವರು ಮತ್ತು ಭಕ್ತರು ಬಹು ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಉತ್ಸವವನ್ನು ಯಶಸ್ವಿಗೊಳಿಸಿದರು.

ಶ್ರೀ ವೀರಗಾರಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್. ಪ್ರಭಾಕರ್, ಉಪಾಧ್ಯಕ್ಷ ಮುನಿನಂಜಪ್ಪ, ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ ಪೆದ್ದಪ್ಪಯ್ಯ, ಸದಸ್ಯ ವಿಜಯಾನಂದ (ಆವಲರೆಡ್ಡಿ), ಗೌರವಾಧ್ಯಕ್ಷ ಕೇಬಲ್ ಮುನಿರಾಜು, ಕಾರ್ಯದರ್ಶಿ ಎಂ. ಹೇಮಂತ್ ಕುಮಾರ್, ಬಿ.ಕೆ. ಮಧುಕುಮಾರ್, ಡಿ. ಕೆಂಚಣ್ಣ, ವೆಂಕಟೇಶ್, ಎಂ. ರಾಮಚಂದ್ರಪ್ಪ, ಬಿ. ನಾರಾಯಣಸ್ವಾಮಿ, ಎನ್. ಜಗದೀಶ್, ಕೆ. ಮುನೇಗೌಡ, ಕೆ. ಪ್ರಕಾಶ್, ಕುಬೇರ ಹಾಗೂ ಅನೇಕ ಗ್ರಾಮಸ್ಥರು ಹಾಜರಿದ್ದರು.

ಉತ್ಸವದ ವೇಳೆ ಭಕ್ತರು ಹೂವಿನ ಅಲಂಕಾರಗಳಿಂದ ಸಿಂಗರಿಸಲಾದ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ತುಂಬಿ ಹರಿದ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಕೆರೆ

0
Sidlaghatta taluk Sadali Hosakere Lake full

Sadali, Sidlaghatta, Chikkaballapur : ಕಳೆದ ಕೆಲವು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾದಲಿ ಹೊಸಕೆರೆ ತುಂಬಿ ಹರಿಯುತ್ತಿದೆ. ಉತ್ತರ ಪೆನ್ನಾರ್ ನದಿ ಕಣಿವೆಯ ಭಾಗದಲ್ಲಿರುವ ಈ ಕೆರೆಯು ಈಗ ನೀರಿನಿಂದ ಉಕ್ಕಿ ಹರಿದು ಸ್ಥಳೀಯರಲ್ಲಿ ಹರ್ಷದ ಅಲೆ ಎಬ್ಬಿಸಿದೆ.

ಸಾದಲಿ ಹೊಸಕೆರೆ ಸುಮಾರು 45 ಹೆಕ್ಟೇರ್ ಅಚ್ಚುಕಟ್ಟಿನ ಪ್ರದೇಶವನ್ನೂ ಹೊಂದಿದ್ದು, ನೀರಿನ ಶೇಖರಣಾ ವ್ಯಾಪ್ತಿ 4.21 ಹೆಕ್ಟೇರ್. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯು ಈ ಕೆರೆಯನ್ನಷ್ಟೇ ಅಲ್ಲದೆ, ಎಸ್.ದೇವಗಾನಹಳ್ಳಿ, ಸಾದಲಿ, ಇರಗಪ್ಪನಹಳ್ಳಿ, ಅಕ್ಕಯ್ಯಗಾರು ಹಾಗೂ ಎಸ್.ಗೊಲ್ಲಹಳ್ಳಿ ಪ್ರದೇಶಗಳಲ್ಲಿರುವ ಅನೇಕ ಕೆರೆಗಳನ್ನೂ ಉಕ್ಕಿ ಹರಿಯುವಂತೆ ಮಾಡಿದೆ.

ಪ್ರಕೃತಿಯ ಈ ಮನಮೋಹಕ ದೃಶ್ಯವನ್ನು ಸ್ಥಳೀಯರು ಆನಂದದಿಂದ ಕಂಡು ಹರಿಯುವ ನೀರಿನಲ್ಲಿ ಕೊಡಮೆ ಹಾಕಿ ಮೀನು ಹಿಡಿಯುತ್ತಿದ್ದ ಯುವಕರು, ಹಾಗೂ ರಸ್ತೆ ಮೇಲಿನ ನೀರಿನಲ್ಲಿ ಆಟವಾಡುತ್ತಿದ್ದ ಮಕ್ಕಳು ಸಂಭ್ರಮದ ನೋಟ ಸೃಷ್ಟಿಸಿದರು.

ಸಾದಲಿ ಹೊಸಕೆರೆ ತುಂಬಿದ ನೀರು ಸಾದಲಮ್ಮನ ಕೆರೆಗೆ ಹರಿಯುತ್ತದೆ. ಅಲ್ಲಿಂದ ಮುಂದೆ ರಾಮಸಮುದ್ರ ಕೆರೆಯ ಕಡೆಗೆ ಹರಿಯುತ್ತಿದ್ದು, ಈ ಕೆರೆಯೂ ಈಗ ಸಂಪೂರ್ಣವಾಗಿ ತುಂಬಿ ಹರಿಯುತ್ತಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-26/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 25/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 366
Qty: 19183 Kg
Mx : 655
Mn: 336
Avg: 481

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 04
Qty: 182 Kg
Mx : ₹ 709
Mn: ₹ 435
Avg: ₹ 624


For Daily Updates WhatsApp ‘HI’ to 7406303366

ಶಿಡ್ಲಘಟ್ಟದ 350 ವರ್ಷದ ಶಾಮಣ್ಣ ಬಾವಿಗೆ ಹೊಸ ಜೀವ

0
Sidlaghatta Town's Historically renowned Shamanna Bavi a gets Clean Makeover by the efforts of Local youth

Sidlaghatta, Chikkaballapur : ಶಿಡ್ಲಘಟ್ಟ ನಗರದ ಅಗ್ರಹಾರ ಬೀದಿಯಲ್ಲಿರುವ 350 ವರ್ಷಗಳ ಇತಿಹಾಸ ಹೊಂದಿರುವ ಶಾಮಣ್ಣ ಬಾವಿ, ಸ್ಥಳೀಯ ಯುವಕರ ಶ್ರಮದಾನದಿಂದ ಮತ್ತೆ ಜೀವಂತಗೊಂಡಿದೆ. ವರ್ಷಗಳ ಕಾಲ ನಿರ್ಲಕ್ಷ್ಯದಿಂದ ಕಳೆಗಿಡ ಮತ್ತು ತ್ಯಾಜ್ಯಗಳಿಂದ ತುಂಬಿಕೊಂಡಿದ್ದ ಈ ಪುರಾತನ ಬಾವಿಯನ್ನು ಯುವಕರು ಶ್ರಮದಾನ ಮಾಡಿ ಸ್ವಚ್ಛಗೊಳಿಸಿ ಪುನಃ ಸುಂದರವಾಗಿ ರೂಪಾಂತರಗೊಳಿಸಿದ್ದಾರೆ.

ಇತಿಹಾಸದ ಪ್ರಕಾರ, ಸುಮಾರು ಮೂರು ಶತಮಾನಗಳ ಹಿಂದೆ ಶಾಮಣ್ಣ ಎಂಬ ಧಾರ್ಮಿಕ ವ್ಯಕ್ತಿ ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಮೀಪ ಚತುಷ್ಕೋನಾಕಾರದ ಕಲ್ಯಾಣಿ ನಿರ್ಮಿಸಿದ್ದರು. ಅಂದಿನಿಂದ ಇದು “ಶಾಮಣ್ಣ ಬಾವಿ” ಎಂಬ ಹೆಸರಿನಲ್ಲಿ ಜನಪ್ರಿಯವಾಯಿತು.

ಈ ಸ್ಥಳದ ವಿಶೇಷತೆ ಎಂದರೆ – ಶಿವ ಮತ್ತು ವಿಷ್ಣು ದೇವತೆಗಳು ಒಂದೇ ಪ್ರದೇಶದಲ್ಲಿ ಪೂಜಿತವಾಗಿರುವುದು. ಜೊತೆಗೆ ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವತೆಗಳ ಸನ್ನಿಧಿಯೂ ಇಲ್ಲಿದೆ. ಅರಳಿ, ತೆಂಗು, ಹೊಂಗೆ, ಹುಣಸೆ ಮರಗಳಿಂದ ಆವರಿಸಿರುವ ಈ ಪ್ರದೇಶವು ಶಾಂತತೆಯ ತಾಣವಾಗಿತ್ತು.

ಒಮ್ಮೆ ನಗರ ಯುವಕರ ಈಜು ತರಬೇತಿ ಸ್ಥಳವಾಗಿದ್ದ ಶಾಮಣ್ಣ ಬಾವಿ, ಕಾಲಕ್ರಮೇಣ ನೀರಿನ ಕೊರತೆಯಿಂದ ಖಾಲಿಯಾಗಿತ್ತು. ತ್ಯಾಜ್ಯ, ಕಳೆಗಿಡಗಳು ತುಂಬಿಕೊಂಡು ಬಾವಿ ತನ್ನ ಇತಿಹಾಸದ ಮೆರಗನ್ನು ಕಳೆದುಕೊಂಡಿತ್ತು. ಆದರೆ ನಗರದ ಯುವಕರು ಬಾವಿಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಬೇಕು ಎಂಬ ದೃಷ್ಟಿಯಿಂದ ಶ್ರಮದಾನ ಕೈಗೊಂಡು ಬಾವಿಯನ್ನು ಸ್ವಚ್ಛಗೊಳಿಸಿದ್ದಾರೆ.

“ನೀರಿನ ಮಟ್ಟ ಹೆಚ್ಚಿಸಲು ಮತ್ತು ಅಡಿಗಡಿತದ ಜಲಮಟ್ಟವನ್ನು ಕಾಪಾಡಲು ಬಾವಿಯನ್ನು ಸ್ವಚ್ಛಗೊಳಿಸಿದ್ದೇವೆ. ನಮ್ಮ ಹಿರಿಯರ ಅಮೂಲ್ಯ ಆಸ್ತಿಯನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ,” ಎಂದು ಶ್ರಮದಾನದಲ್ಲಿ ಭಾಗವಹಿಸಿದ್ದ ಯುವಕರು ಹೇಳಿದರು.

ಶ್ರಮದಾನದಲ್ಲಿ ಸುದಾಕರ್, ಸೂರಿ, ವೆಂಕಟೇಶ್, ಮಂಜುಗೌಡ, ಮುರಳಿ, ಸೀನಪ್ಪ, ಶ್ರೀಧರ್ ಸೇರಿದಂತೆ ಹಲವಾರು ಯುವಕರು ಪಾಲ್ಗೊಂಡಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-25/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 25/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 352
Qty: 17814 Kg
Mx : 633
Mn: 300
Avg: 491

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 22
Qty: 1327 Kg
Mx : ₹ 743
Mn: ₹ 389
Avg: ₹ 616


For Daily Updates WhatsApp ‘HI’ to 7406303366

ಶಿಡ್ಲಘಟ್ಟ ತಾಲ್ಲೂಕಿನ Y ಹುಣಸೇನಹಳ್ಳಿಯಲ್ಲಿ ಉಚಿತ ವೈದ್ಯಕೀಯ ಶಿಬಿರ

0
Sidlaghatta Y Hunasenahalli vydehi hospital Health Camp

Y Hunasenahalli, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ Y ಹುಣಸೇನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದೇಹಿ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಈ ಶಿಬಿರದಲ್ಲಿ ಹೃದಯ, ನರ, ಕಿಡ್ನಿ, ಮೂತ್ರಕೋಶ, ಮೂತ್ರಪಿಂಡ, ಕ್ಯಾನ್ಸರ್, ಮೂಳೆ ನೋವು, ಸ್ತ್ರೀಯರ ಆರೋಗ್ಯ ಸಮಸ್ಯೆಗಳು, ಕಿವಿ, ಮೂಗು, ಗಂಟಲು ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು. ಜೊತೆಗೆ ಉಚಿತ ಎಕೊ ಹಾಗೂ ಇಸಿಜಿ ಪರೀಕ್ಷೆಗಳು ಸಹ ನೆರವೇರಿಸಲಾಯಿತು.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳ ಅಗತ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ರೀತಿಯ ಶಿಬಿರಗಳು ಗ್ರಾಮಸ್ಥರಿಗೆ ಅತ್ಯಂತ ಉಪಯುಕ್ತವಾಗುತ್ತಿವೆ ಎಂದು ಸ್ಥಳೀಯರು ಪ್ರಶಂಸಿಸಿದರು.

ಡಾ. ತೇಜಶ್ರೀ ಅವರು ಮಾತನಾಡಿ, “ಈ ಶಿಬಿರಗಳು ಗ್ರಾಮೀಣ ಜನತೆಗೆ ತಜ್ಞ ವೈದ್ಯರ ನೇರ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಅವಕಾಶ ನೀಡುತ್ತಿವೆ. ಈಗಾಗಲೇ ಇರಗಂಪಳ್ಳಿ, ಚೇಳೂರು, ಅಕ್ಕಿಮಂಗಳ, ಕುರುಬೂರು ಕೆಂಚಾರ್ಲಹಳ್ಳಿ, ಕುಂದಲಗುರ್ಕಿ ಸೇರಿದಂತೆ ಹಲವು ಪಿಎಚ್ಸಿಗಳಲ್ಲಿ ಶಿಬಿರಗಳು ನಡೆದಿವೆ. ಅಕ್ಟೋಬರ್ 30ರಂದು ಮೇಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಶಿಬಿರ ನಡೆಯಲಿದೆ. ಗ್ರಾಮಸ್ಥರು ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಬೇಕು,” ಎಂದರು.

ಈ ಸಂದರ್ಭದಲ್ಲಿ ತಜ್ಞ ವೈದ್ಯರಾದ ಡಾ. ಗೋವಿಂದ್, ಡಾ. ಸುಷ್ಮಾ, ಡಾ. ಪೃಥ್ವಿ, ಡಾ. ನಮ್ರತಾ, ಡಾ. ಸಂಜನಾ ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ವಿದ್ಯಾರ್ಥಿಗಳಿಗೆ ಸಮುದಾಯ ಸಹಬಾಳ್ವೆ ಶಿಬಿರ

0
Sri Shringeri College of education Community Living camp

Belluti, Sidlaghatta, chikkaballapur : “ಈ ಸಮಾಜ ಮತ್ತು ಸರ್ಕಾರವು ವಿದ್ಯಾರ್ಥಿ ಮತ್ತು ಯುವ ಜನರ ಮೇಲೆ ಅಪಾರ ನಿರೀಕ್ಷೆ ಇಟ್ಟಿದೆ. ಈ ಜಗತ್ತಿನಲ್ಲಿ ಬದಲಾವಣೆ, ಪ್ರಗತಿ ಅಥವಾ ಕ್ರಾಂತಿ ಆಗಬೇಕೆಂದರೆ ಅದು ವಿದ್ಯಾರ್ಥಿಗಳಿಂದಲೇ ಸಾಧ್ಯ” ಎಂದು ಚಿಕ್ಕಬಳ್ಳಾಪುರದ ಶ್ರೀ ಶೃಂಗೇರಿ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಲ್ ಎಚ್.ಎಂ. ಚನ್ನಕೃಷ್ಣಪ್ಪ ಹೇಳಿದರು.

ಬೆಳ್ಳೂಟಿ ಗೇಟ್‌ನ ಶ್ರೀಗುಟ್ಟ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಶೃಂಗೇರಿ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಸಮುದಾಯ ಸಹಬಾಳ್ವೆ ಶಿಬಿರ”ದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟುವ ಜತೆಗೆ ದೇಶದ ಭವಿಷ್ಯವನ್ನೂ ರೂಪಿಸಬೇಕು. ಶಾಲಾ-ಕಾಲೇಜು ಹಂತದಲ್ಲೇ ಭದ್ರ ಬುನಾದಿ ಅಗತ್ಯ. ಆಲೋಚನೆ ಸ್ಪಷ್ಟವಾಗಿರಬೇಕು, ಗುರಿ ನಿಶ್ಚಿತವಾಗಿರಬೇಕು,” ಎಂದು ಅವರು ಸಲಹೆ ನೀಡಿದರು.

ಅವರು ಮುಂದುವರೆದು — “ಓದು, ಉದ್ಯೋಗ, ಸಂಬಳದಲ್ಲಿ ಸೀಮಿತವಾಗದೆ ಪ್ರಾಪಂಚಿಕ ಹಾಗೂ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳ ಅರಿವು ಇರಬೇಕು. ಮೂಢನಂಬಿಕೆಗಳನ್ನು ತೊರೆದು ವೈಜ್ಞಾನಿಕ ಮನೋಭಾವ ಬೆಳೆಸುವುದು ವಿದ್ಯಾರ್ಥಿಗಳ ಕರ್ತವ್ಯ,” ಎಂದರು.

ಅಂತೆಯೇ “ಸಮುದಾಯ ಸಹಬಾಳ್ವೆ ಶಿಬಿರ”ವು ಹಳ್ಳಿಗಾಡಿನ ಜೀವನವನ್ನು ಅರ್ಥಮಾಡಿಕೊಳ್ಳಲು, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸಲು ಸಹಕಾರಿ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಲೋಕನಾಥ್, ನಿರ್ದೇಶಕ ಎನ್. ದೀರೇಶ್ ಕುಮಾರ್, ವೈ.ಎನ್. ಗೋಪಾಲ್, ರಾಧಾ ಗೋಪಾಲ್, ಶಿಡ್ಲಘಟ್ಟ ಕಸಾಪ ಅಧ್ಯಕ್ಷ ನಾರಾಯಣಸ್ವಾಮಿ, ಎಚ್.ಕೆ. ಸುರೇಶ್, ಸಹಾಯಕ ಪ್ರಾಧ್ಯಾಪಕ ಕೆ. ಮುನಿಶಾಮಪ್ಪ, ಎಸ್.ಎಚ್. ಹಾಲೇಶಪ್ಪ, ಎಂ. ಮಹೇಶ್ ಕುಮಾರ್ ಹಾಗೂ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಮುಖ್ಯಮಂತ್ರಿಯವರ ಭೇಟಿಗೆ ಸಿದ್ಧತೆ – ಶಿಡ್ಲಘಟ್ಟ ನಗರದಲ್ಲಿ ಸ್ವಚ್ಛತಾ ಅಭಿಯಾನ ತೀವ್ರಗೊಳಿಸಿದ ನಗರಸಭೆ

0
Sidlaghatta Municipality is taking steps for a cleaner city as Chief Minister Siddaramaiah plans to visit for development initiatives.

Sidlaghatta, Chikkaballapur : ಮುಂದಿನ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಡ್ಲಘಟ್ಟ ತಾಲ್ಲೂಕಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡುವ ಉದ್ದೇಶದಿಂದ ನಗರಸಭೆಯ ಪೌರಾಯುಕ್ತೆ ಅಮೃತ ಅವರು ಸ್ವತಃ ಸ್ವಚ್ಛತಾ ಕಾರ್ಯಗಳ ಮೇಲ್ವಿಚಾರಣೆ ಆರಂಭಿಸಿದ್ದಾರೆ.

ನಗರದ ಟಿ.ಬಿ. ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛತಾ ಕ್ರಮಗಳನ್ನು ಪರಿಶೀಲಿಸಿದ ಪೌರಾಯುಕ್ತೆ ಅಮೃತ ಅವರು, ರಸ್ತೆಯ ಬದಿಯಲ್ಲಿ ಹೂವಿನ ತ್ಯಾಜ್ಯ ಎಸೆಯುತ್ತಿದ್ದ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು ಹಾಗೂ ದಂಡ ವಿಧಿಸಲು ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದರು.

“ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡುವುದು ಎಲ್ಲರ ಜವಾಬ್ದಾರಿ. ನಗರಸಭೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಾಗರಿಕರು ಸಹ ನಮ್ಮೊಂದಿಗೆ ಕೈಜೋಡಿಸಬೇಕು,” ಎಂದು ಅವರು ವಿನಂತಿಸಿದರು.

ಪ್ರತಿದಿನ 31 ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಕಾರ್ಯಕ್ಕೆ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ನಾಗರಿಕರು ತಮ್ಮ ಮನೆಗಳಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ, ನಗರಸಭೆಯ ವಾಹನಗಳಿಗೆ ನೀಡಬೇಕು ಎಂದು ಅವರು ಹೇಳಿದರು. “ರಸ್ತೆಗಳಲ್ಲಿ ಕಸ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.

ಇದಲ್ಲದೆ ಇತ್ತೀಚಿನ ಮಳೆಗಾಲದ ಹಿನ್ನೆಲೆಯಲ್ಲಿ ನಾಗರಿಕರಿಗೆ ಮುನ್ನೆಚ್ಚರಿಕೆ ನೀಡಿದ ಅವರು, “ಮಳೆಯ ನೀರು ಸರಾಗವಾಗಿ ಹರಿಯದಿದ್ದರೆ ಕೂಡಲೇ ನಗರಸಭೆಯ ಆರೋಗ್ಯ ಶಾಖೆಗೆ ಮಾಹಿತಿ ನೀಡಬೇಕು. ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ,” ಎಂದು ಹೇಳಿದರು.

ನಗರದಾದ್ಯಂತ ಸ್ವಚ್ಛತಾ ಸಿಬ್ಬಂದಿ, ಆರೋಗ್ಯ ನಿರೀಕ್ಷಕರು ಹಾಗೂ ನಗರಸಭಾ ಅಧಿಕಾರಿಗಳು ಸಂಯುಕ್ತ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-24/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 24/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 406
Qty: 21360 Kg
Mx : 530
Mn: 290
Avg: 481

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 12
Qty: 725 Kg
Mx : ₹ 685
Mn: ₹ 466
Avg: ₹ 599


For Daily Updates WhatsApp ‘HI’ to 7406303366

ಶಿಡ್ಲಘಟ್ಟ ರೈತರಿಂದ ಬಿಳಿ ಸಾಸಿವೆ ಬೆಳೆ ಯಶಸ್ವಿ – ಅಪರೂಪದ ಕೃಷಿಗೆ ಪ್ರಶಂಸೆ

0
Sidlaghatta Farmer White Mustard Farming

Appegowdanahalli, Sidlaghatta, chikkaballapur : ಪಂಜಾಬ್, ಹರಿಯಾಣಾ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಾಮಾನ್ಯವಾಗಿ ಬೆಳೆಯುವ ಬಿಳಿ ಸಾಸಿವೆ (White Mustard) ಈಗ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ರೋಹಿತ್ ಅವರ ಹೊಲದಲ್ಲೂ ಬೆಳೆಯಲ್ಪಟ್ಟು, ಉತ್ತಮ ಫಲಿತಾಂಶ ನೀಡಿದೆ. ಇದು ಈ ಪ್ರದೇಶದಲ್ಲಿ ಅಪರೂಪದ ಪ್ರಯತ್ನವಾಗಿದ್ದು, ಸ್ಥಳೀಯ ರೈತರಲ್ಲಿ ಕುತೂಹಲ ಮೂಡಿಸಿದೆ.

ರೋಹಿತ್ ಅವರು ಹೇಳಿದರು — “ನನ್ನ ಸ್ನೇಹಿತರಿಂದ ಸ್ವಲ್ಪ ಬಿಳಿ ಸಾಸಿವೆ ಬೀಜಗಳು ದೊರಕಿದವು. ಪ್ರಯೋಗಾತ್ಮಕವಾಗಿ ಐದು ಗುಂಟೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದೆ. ಕುರಿ ಗೊಬ್ಬರ ಮಾತ್ರ ಬಳಸಿದ್ದೆ. ಈಗ ಉತ್ತಮ ಫಸಲು ದೊರೆತಿದೆ. ಮುಂದಿನ ಬಾರಿ ಈ ಬೆಳೆ ಹೆಚ್ಚುವರಿಯಾಗಿ ಬೆಳೆಸುವ ಉದ್ದೇಶವಿದೆ. ಅಡಿಗೆ ಮಾತ್ರವಲ್ಲ, ಪೂಜಾ ಹೋಮ ಹವನಗಳಲ್ಲಿ, ಆಯುರ್ವೇದದಲ್ಲೂ ಇದರ ಬಳಕೆ ಇದೆ. ಬೇಡಿಕೆ ಇದೆ ಎಂದರೆ ಖಂಡಿತವಾಗಿಯೂ ಇದು ಉತ್ತಮ ಬೆಳೆಯಾಗಿದೆ” ಎಂದು ತಿಳಿಸಿದ್ದಾರೆ.

ಬಿಳಿ ಸಾಸಿವೆ, ವೈಜ್ಞಾನಿಕವಾಗಿ “ಬ್ರಾಸಿಕಾ ಆಲ್ಬಾ” (Brassica alba) ಎಂದೇ ಕರೆಯಲ್ಪಡುತ್ತದೆ. ಹಳದಿ ಬಣ್ಣದ ಶಿಲುಬೆಯಾಕಾರದ ಹೂಗಳು ಮತ್ತು ಬೀಜಗಳಿಂದ ಕೂಡಿರುವ ಈ ಸಸ್ಯವು ಆರೋಗ್ಯ ಪ್ರಯೋಜನಗಳಿಗಾಗಿ, ಆಯುರ್ವೇದ ಮತ್ತು ಧಾರ್ಮಿಕ ಉದ್ದೇಶಗಳಿಗೂ ಬಳಸಲಾಗುತ್ತದೆ.

ಈ ಸಸ್ಯವು ಮಣ್ಣಿನ ಗುಣಮಟ್ಟ ಸುಧಾರಣೆಗೂ ಸಹಕಾರಿ — ಸಾವಯವ ಪದಾರ್ಥಗಳನ್ನು ಸೇರಿಸಿ ಮಣ್ಣು ಸಮೃದ್ಧಗೊಳಿಸುವ ಗುಣವನ್ನು ಹೊಂದಿದೆ. ವಾಸ್ತುಶಾಸ್ತ್ರದ ಪ್ರಕಾರ ಮನೆ ಕಟ್ಟುವಾಗ ಬಿಳಿ ಸಾಸಿವೆಯ ಬಳಕೆ ಶುದ್ಧೀಕರಣ ಮತ್ತು ರಕ್ಷಣೆಗೆ ಉಪಯುಕ್ತವೆಂದು ನಂಬಿಕೆ ಇದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!