ತಾಲ್ಲೂಕಿನ ಮೇಲೂರು ಎಂ.ಆರ್.ಪ್ರಭಾಕರ್ ಮತ್ತು ತಂಡದವರು ತಿರುಪತಿಗೆ ಪಾದಯಾತ್ರೆಯನ್ನು ಕೈಗೊಂಡಿದ್ದು, ಪಾದಯಾತ್ರೆಯೊಂದಿಗೆ ಅಂಚೆಚೀಟಿಗಳ ಪ್ರದರ್ಶನವನ್ನೂ ನಡೆಸಿಕೊಂಡು ಸಾಗಿದ್ದಾರೆ.
ಬೆಂಗಳೂರಿನಿಂದ ಪಾದಯಾತ್ರೆಯನ್ನು ಸುಮಾರು 70 ಮಂದಿಯ ತಂಡ ನಡೆಸುತ್ತಿದ್ದು, ಶನಿವಾರ ತಾಲ್ಲೂಕಿನ ಎಚ್.ಕ್ರಾಸ್ ಮೂಲಕ ಪ್ರಯಾಣವನ್ನು ಮುಂದುವರೆಸಿದ್ದಾರೆ.
ಸುಮಾರು 21 ವರ್ಷಗಳಿಂದ ಪ್ರತಿ ವರ್ಷವೂ ತಿರುಪತಿಗೆ ಪಾದಯಾತ್ರೆ ನಡೆಸುತ್ತಿರುವ ಡಿ.ಚಿಕ್ಕೀರಪ್ಪ ಎಂಬ ಹಿರಿಯರೊಂದಿಗೆ, ಸುಮಾರು 70 ಮಂದಿಯ ತಂಡವನ್ನು ಮೇಲೂರು ಎಂ.ಆರ್.ಪ್ರಭಾಕರ್ ಮುನ್ನಡೆಸುತ್ತಿದ್ದಾರೆ. ದಾರಿಯಲ್ಲಿ ತಂಗುವ ಸ್ಥಳಗಳಲ್ಲಿ, ಸಿಗುವ ಶಾಲೆಗಳಲ್ಲಿ ಅಂಚೆ ಚೀಟಿಗಳನ್ನು ಪ್ರದರ್ಶಿಸುತ್ತಾ ಸಾಗುತ್ತಿದ್ದಾರೆ.
‘ತಿರುಪತಿಗೆ ಪಾದಯಾತ್ರೆ ನಡೆಸುವುದರೊಂದಿಗೆ ಅಂಚೆ ಚೀಟಿಗಳ ಮೂಲಕ ವಿಶ್ವ ಶಾಂತಿಯನ್ನು ಸಾರುತ್ತಿದ್ದೇವೆ. ವೈವಿಧ್ಯಮಯ ಅಂಚೆ ಚೀಟಿಗಳ ಮೂಲಕ ಹತ್ತಾರು ವಿಷಯಗಳನ್ನು ತಿಳಿಸಬಹುದು. ವಿಶ್ವವೆಲ್ಲಾ ಒಂದೇ, ಮಾನವೀಯತೆ ಶ್ರೇಷ್ಠವಾದುದು ಎನ್ನುವ ಸಂದೇಶ ಸಾರುತ್ತಾ ಎಲ್ಲರೂ ಸಾಗಿದ್ದೇವೆ’ ಎಂದು ಮೇಲೂರು ಎಂ.ಆರ್.ಪ್ರಭಾಕರ್ ತಿಳಿಸಿದರು.
- Advertisement -
- Advertisement -
- Advertisement -
- Advertisement -