18.1 C
Sidlaghatta
Saturday, December 27, 2025

ಅಂಧಮಕ್ಕಳಿಗೆ ಸ್ವೆಟರ್ ವಿತರಣೆ

- Advertisement -
- Advertisement -

ಹೊಸವರ್ಷವನ್ನು ಸಮಾಜಸೇವೆಯೊಂದಿಗೆ ಪ್ರಾರಂಭಿಸುವ ಉದ್ದೇಶದಿಂದ ಅಂಧಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ಆಚರಿಸುತ್ತಿರುವುದಾಗಿ ಮುತ್ತುಟ್ ಫೈನಾನ್ಸ್ ಗುಚ್ಛ ವ್ಯವಸ್ಥಾಪಕ ವೆಂಕಟೇಶ್ ತಿಳಿಸಿದರು.
ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಸೋಮವಾರ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಮಕ್ಕಳಿಗೆ ಸ್ವೆಟರ್ಗಳನ್ನು ವಿತರಿಸಿ ಅವರು ಮಾತನಾಡಿದರು.
ನಗರದಲ್ಲಿ ಈ ಬಾರಿ ಚಳಿಯು ಹೆಚ್ಚಾಗಿದೆ. ಸಮಾನ ಮನಸ್ಕರು ಸೇರಿಕೊಂಡು ಅಂಧ ಮಕ್ಕಳಿಗೆ ಸ್ವೆಟರ್ಗಳನ್ನು ನೀಡುವ ಮೂಲಕ ಹೊಸ ವರ್ಷಾರಂಭವನ್ನು ಮಾಡುತ್ತಿದ್ದೇವೆ. ಹಂಚಿ ತಿನ್ನುವ ಮನೋಭಾವ ನಮ್ಮೆಲ್ಲರದ್ದಾಗಲಿ. ಪ್ರತಿಯೊಬ್ಬ ಜೀವಿಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು, ಪರಸ್ಪರರನ್ನು ಗೌರವಿಸುತ್ತಾ, ಸೌಹಾರ್ಧದಿಂದ, ಸಹಾಯ ಮನೋಭಾವದಿಂದ ಇದ್ದಾಗ ಸಮಾಜ ಶಾಂತಿಯುತವಾಗಿರುತ್ತದೆ ಎಂದರು.
ನಗರಸಭೆ ಆಯುಕ್ತ ಚಲಪತಿ ಮಾತನಾಡಿ, ಹೊಸವರ್ಷಾಚರಣೆಯನ್ನು ದುಂದುವೆಚ್ಚ ಮಾಡಿ ಆಚರಿಸುವುದಕ್ಕಿಂತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರೂ ಆಚರಿಸುವಂತಾಗಬೇಕು ಎಂದು ನುಡಿದರು.
ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿಯ ನಾರಾಯಣಸ್ವಾಮಿ, ಮುತ್ತುಟ್ ಫೈನಾನ್ಸ್ನ ವಲಯ ವ್ಯವಸ್ಥಾಪಕ ಅರುಣ್ ಪವಿತ್ರನ್, ಶ್ರೀನಿವಾಸ್, ಮಂಜುನಾಥ್, ರಾಮಕೃಷ್ಣಪ್ಪ, ರಾಮು, ವಿನೋದ್, ಕುಮಾರ್, ಸುಮನ್, ರಾಮಕೃಷ್ಣ, ಮನೀಶ್, ದೇವರಾಜು, ವೆಂಕಟೇಶ್ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!